ರಾಜ್ಯಸಭೆಗೆ ಹಾಜರಾದ ಸಚಿನ್ ಜಾಲತಾಣಗಳಲ್ಲಿ ಲೇವಡಿ
Team Udayavani, Aug 4, 2017, 7:25 AM IST
ಹೊಸದಿಲ್ಲಿ: ರಾಜ್ಯಸಭೆಯ ನಾಮ ನಿರ್ದೇಶಿತ ಸದಸ್ಯ, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸದನಕ್ಕೆ ಏಕೆ ಬರುತ್ತಿಲ್ಲವೆಂದು ಸಮಾಜವಾದಿ ಪಕ್ಷದ ನಾಯಕ ನರೇಶ್ ಅಗರ್ವಾಲ್ ಪ್ರಶ್ನಿಸಿದ್ದರು. ಅದಕ್ಕೆ ಪೂರಕವಾಗಿ ಗುರುವಾರ ಸಚಿನ್ ತೆಂಡೂಲ್ಕರ್ ಸದನದಲ್ಲಿ ಹಾಜರಿದ್ದರು. ಅದು ರಾಜ್ಯಸಭೆ ಟಿವಿಯಲ್ಲಿ ಪ್ರಸಾರವಾಗಿದ್ದೇ ತಡ ಟ್ವೀಟರ್ ಮತ್ತು ಫೇಸ್ಬುಕ್ಗಳಲ್ಲಿ ಅವರ ಬಗ್ಗೆ ಲಘುವಾಗಿ ಟೀಕೆಗಳು ವ್ಯಕ್ತವಾದವು. ಶಾಲೆ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯ ನೀತಿಗೆ ಹೋಲಿಸಿ ಜಾಲತಾಣಿಗರು ವ್ಯಂಗ್ಯದ ಬರಹಗಳನ್ನು ಹರಿಬಿಡುತ್ತಿದ್ದಾರೆ. ಸಚಿನ್ ತೆಂಡೂಲ್ಕರ್ ಸದನಕ್ಕೆ ಬಂದಿದ್ದರೂ ಯಾವುದೇ ಪ್ರಶ್ನೆ ಕೇಳಲಿಲ್ಲ. ಕ್ರೀಡಾ ಕ್ಷೇತ್ರದ ಮತ್ತೂಬ್ಬ ತಾರೆ ಮೇರಿ ಕೋಮ್ ಕೂಡ ರಾಜ್ಯಸಭೆಗೆ ಹಾಜರಾಗಿದ್ದರು.