ಜೈಪುರದಲ್ಲಿ ಸದ್ಗುರುವಿನ ಮಣ್ಣು ಉಳಿಸಿ ಅಭಿಯಾನ
Team Udayavani, Jun 4, 2022, 10:00 PM IST
ಜೈಪುರ: ಮಣ್ಣು ಉಳಿಸುವ ಬಗ್ಗೆ ವಿಶ್ವದ ಜನರಲ್ಲಿ ಅರಿವು ಮೂಡಿಸಲೆಂದು ಈಶಾ ಫೌಂಡೇಷನ್ನ ಸಂಸ್ಥಾಪಕರಾಗಿರುವ ಸದ್ಗುರು ಜಗ್ಗಿ ವಾಸುದೇವ ಅವರು 100 ದಿನಗಳ “ಸೇವ್ ಸಾಯಿಲ್’ ಅಭಿಯಾನ ನಡೆಸುತ್ತಿದ್ದು, ಅದರ ಭಾಗವಾಗಿ ಜೂ.3ರಂದು ರಾಜಸ್ಥಾನದ ಜೈಪುರದಲ್ಲಿ ಕಾರ್ಯಕ್ರಮ ನಡೆಸಿದ್ದಾರೆ.
“ಈಗ ನಾವೆಲ್ಲರೂ ಒಂದಾಗಿ ಮಣ್ಣಿನ ರಕ್ಷಣೆ ಮಾಡದೇ ಹೋದರೆ ಮುಂದೊಂದು ದಿನ ಹಿಂದೆಂದೂ ಕಾಣದಂತಹ ಭಯಾನಕ ಪರಿಸ್ಥಿತಿಯನ್ನು ಕಾಣಬೇಕಾಗುತ್ತದೆ’ ಎಂದು ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ರಾಜಸ್ಥಾನದ ಸರ್ಕಾರವು ಮಣ್ಣು ರಕ್ಷಣೆ ಮಾಡುವುದಾಗಿ “ಮಣ್ಣು ಉಳಿಸಿ’ ಅಭಿಯಾನದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
ಜೂನ್ 5ರಂದು ಸದ್ಗುರು ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.