ಒಡಿಶಾ: ಕ್ವಾರಂಟೈನ್ ಕೇಂದ್ರಗಳಲ್ಲಿ ಸಂಬಳ, ಸರ್ಟಿಫಿಕೆಟು
ವಲಸೆ ಕಾರ್ಮಿಕರಿಗೆ ಅಂತರ ಕಾಪಾಡಿಕೊಂಡು ಕೆಲಸ ನೀಡಲು ಕ್ರಮ
Team Udayavani, May 23, 2020, 8:33 AM IST
ಸಾಂದರ್ಭಿಕ ಚಿತ್ರ
ಭುವನೇಶ್ವರ: ಯೋಗ, ಧ್ಯಾನ, ಕೆಲಸ… 21 ದಿನಗಳ ನಂತರ ಮನೆಗೆ ಮರಳುವಾಗ ಸರ್ಟಿಫಿಕೆಟ್! ಒಡಿಶಾದ ಕ್ವಾರಂಟೈನ್ ಕೇಂದ್ರಗಳ ವೈಶಿಷ್ಟ್ಯ ಇದು. ವಿವಿಧ ರಾಜ್ಯಗಳಲ್ಲಿ ಅತಂತ್ರರಾಗಿದ್ದ ಲಕ್ಷಾಂತರ ಕಾರ್ಮಿಕರು ಈಗಾಗಲೇ ಒಡಿಶಾ ತಲುಪಿದ್ದಾರೆ. 21 ದಿನಗಳ ಕ್ವಾರಂಟೈನ್ ಅವಧಿಯಲ್ಲಿ ಅವರ ಕಾರ್ಯ ಕ್ಷಮತೆ ಕಾಪಾಡುವ ದೃಷ್ಟಿಯಿಂದ ಸರಕಾರ ವಿಭಿನ್ನ ಚಟುವಟಿಕೆಗಳನ್ನು ಆಯೋಜಿಸಿದೆ.
ಏನೇನು ಚಟುವಟಿಕೆ?: ಒಟ್ಟು 15 ಸಾವಿರ ಕೇಂದ್ರಗಳಲ್ಲಿನ ವಲಸೆ ಕಾರ್ಮಿಕರಿಗೆ ಯೋಗ, ಧ್ಯಾನ, ಆರೋಗ್ಯ ಸಂಬಂಧಿತ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಮಿಕರಿಗೆ ಯಾವುದೇ ರೀತಿಯ ಖನ್ನತೆ ಬಾಧಿಸದೇ ಇರಲು, ಯೋಗ- ಧ್ಯಾನಗಳ ತರಬೇತಿ ನೀಡಲಾಗುತ್ತದೆ. ಆನ್ಲೈನ್ ತರಗತಿಗಳ ಮೂಲಕ ಕೊರೊನಾ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಕ್ವಾರಂಟೈನ್ ಮುಗಿಸಿ, ಮನೆಗೆ ಮರಳುವಾಗ ಅವರಲ್ಲಿ ಯಾವುದೇ ಕೀಳರಿಮೆ ಇರಬಾರದು ಎನ್ನುವುದು ಸರಕಾರದ ಉದ್ದೇಶ.
ನರೇಗಾ ಕೆಲಸ: ಕ್ವಾರಂಟೈನ್ ಅವಧಿಯನ್ನು ವಲಸೆ ಕಾರ್ಮಿಕರಿಗೆ ಲಾಭದಾಯಕವಾಗಿ ಪರಿವರ್ತಿಸಲೂ ಸರಕಾರ ತೀರ್ಮಾನಿಸಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು, ನರೇಗಾ ಯೋಜನೆಗಳ ಮೂಲಕ ವಿವಿಧ ಕೆಲಸಗಳನ್ನು ಮಾಡಿಸಲು ಸಕಲ ಸಿದ್ಧತೆ ನಡೆದಿದೆ. “ನರೇಗಾ ಕೆಲಸದಿಂದ ಪ್ರತಿ ಕಾರ್ಮಿಕನೂ ನಿತ್ಯ 207 ರೂ. ಕೂಲಿ ಪಡೆಯಯುವಂತಾಗುತ್ತದೆ. ಮಾಸ್ಕ್, ಸ್ಯಾನಿಟೈಸರ್ ತಯಾರಿಕೆಯ ತರಬೇತಿಯನ್ನೂ ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗುವುದು’ ಎಂದು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಅನು ಗಾರ್ಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು