ಸೂರ್ಯನಿಂದಾಗಿ ಬಿಸಿಯಾಗಿದೆ ಭೂಮಿ, ಉಪಗ್ರಹಗಳಿಗೆ ಕಂಟಕ!
ಸೂರ್ಯನಿಂದ ಬಿಡುಗಡೆಯಾಗುತ್ತಿವೆ ತೀವ್ರ ಸೌರಜ್ವಾಲೆಗಳು, ಇತರೆ ಗ್ರಹಗಳಿಗೂ ಆಪತ್ತು
Team Udayavani, Jun 6, 2023, 8:00 AM IST
ನವದೆಹಲಿ: ಭೂಮಿಯ ತಾಪಮಾನ ಏರಿಕೆ ಜಾಗತಿಕ ರಾಷ್ಟ್ರಗಳಲ್ಲಿ ಕಾಳಜಿಯ ವಿಚಾರವಾಗಿರುವ ನಡುವೆಯೇ, ಈ ತಾಪಮಾನ ಏರಿಕೆಯಿಂದಾಗಿ ಭೂಮಿಯ ಕೆಳ ಕಕ್ಷೆಯಲ್ಲಿರುವ ಉಪಗ್ರಹಗಳು ಸಮಸ್ಯೆಗೆ ಸಿಲುಕಲಿವೆ ಎನ್ನುವ ವರದಿ ಬಹಿರಂಗಗೊಂಡಿದೆ.
ಸ್ಪೇಸ್ವೆದರ್ ವೆಬ್ಸೈಟ್ನಲ್ಲಿ ಪ್ರಕಟವಾಗಿರುವ ಈ ವಿಚಾರದ ಬಗ್ಗೆ ಆತಂಕ ವ್ಯಕ್ತವಾಗಿದೆ. ಹೌದು, ಆಧುನಿಕ ಜೀವನದ ಬೆನ್ನತ್ತಿರುವ ಮನುಷ್ಯ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರವನ್ನು ಹಾಳುಗೆಡವುತ್ತಿದ್ದು, ಇದರ ಪ್ರತಿಫಲವಾಗಿ ತಾಪಮಾನ ಏರಿಕೆಯಾಗುತ್ತಿದೆ ಎನ್ನುವುದು ನಮಗೆಲ್ಲ ತಿಳಿದೇ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಜಾಗತಿಕ ಪರಿಹಾರ ಪ್ರಯತ್ನಗಳನ್ನೂ ಕೈಗೊಳ್ಳಲಾಗುತ್ತಿದೆ. ಇವೆಲ್ಲದರ ನಡುವೆ ಬಹಿರಂಗಗೊಂಡಿರುವ ವಿಚಾರವೆಂದರೆ, ಈ ಬಾರಿ ತಾಪಮಾನ ಮನುಷ್ಯನಿಂದಲ್ಲ, ಬದಲು ಸೂರ್ಯ ಗ್ರಹದಿಂದಾಗಿ ಏರಿಕೆಯಾಗುತ್ತಿದ್ದು, ಇದಕ್ಕೆ ಮಾನವನಿರ್ಮಿತ ಉಪಗ್ರಹಗಳು ಬಲಿಯಾಗಲಿವೆ.
ಸ್ಪೇಸ್ವೆದರ್ ವರದಿಗಳ ಪ್ರಕಾರ, ಸೂರ್ಯನಿಂದ ಬಿಡುಗಡೆಯಾಗುತ್ತಿರುವ ತೀವ್ರತರದ ಸೌರ ಜ್ವಾಲೆಗಳು ಇತರ ಗ್ರಹಗಳ ಕಾಂತೀಯ ಕ್ಷೇತ್ರಗಳನ್ನು ಪ್ರವೇಶಿಸುವ ಮೂಲಕ ತೀವ್ರತಾಪಮಾನದ ಬಿರುಗಾಳಿಯನ್ನು ಸೃಷ್ಟಿಸುತ್ತವೆ. ಅದರಿಂದ ಗ್ರಹದ ಮೇಲ್ಮೆ„ನ ತಾಪಮಾನ ಹೆಚ್ಚಾಗಲಿದೆ.
ಈಗ ಭೂಮಿಯ ಕಾಂತಕ್ಷೇತ್ರವನ್ನೂ ಸೂರ್ಯಜ್ವಾಲೆಗಳು ಸಮೀಪಿಸಿರುವುದರಿಂದ ಭೂಕಾಂತಿಯ ಬಿರುಗಾಳಿ ಹೆಚ್ಚಿದ್ದು, ಅದರ ಕಣಗಳಿಂದಾಗಿ ಭೂಮಿಯ ಕಕ್ಷೆಯಲ್ಲಿರುವ ಉಪಗ್ರಹಗಳ ಕಾರ್ಯಾಚರಣೆಗೆ ಅಡ್ಡಿಯಾಗಲಿದೆ. ಪರಿಣಾಮ ತಾಂತ್ರಿಕ ಮತ್ತು ಅಯಸ್ಕಾಂತೀಯ ಆಧಾರಿತ ತಂತ್ರಜ್ಞಾನ ಬಳಕೆಗೆ ತೊಡಕಾಗಲಿದೆ ಎಂದು ವರದಿ ತಿಳಿಸಿದೆ.
ಈಗಾಗಲೇ ಮನುಷ್ಯ ಎಲ್ಲದಕ್ಕೂ ಉಪಗ್ರಹಗಳನ್ನೇ ಅವಲಂಬಿಸುವಂತಾಗಿದೆ. ಬಹುಪಾಲು ತಂತ್ರಜ್ಞಾನದ ಮೂಲವಾಗಿ ಉಪಗ್ರಹಗಳು ಕಾರ್ಯನಿರ್ವಹಿಸುತ್ತಿವೆ. ಈ ನಡುವೆ ಭೂಮಿಯ ತಾಪಮಾನ ಏರಿಕೆಯಿಂದಾಗಿ ಅವುಗಳೂ ಸಂಕಷ್ಟಕ್ಕೆ ಸಿಲುಕುವಂತಾದರೆ ಮನುಷ್ಯ ತಂತ್ರಜ್ಞಾನದ ಮಹಾಪತನಕ್ಕೆ ಸಾಕ್ಷಿಯಾಗಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು