
ಸೂರ್ಯನಿಂದಾಗಿ ಬಿಸಿಯಾಗಿದೆ ಭೂಮಿ, ಉಪಗ್ರಹಗಳಿಗೆ ಕಂಟಕ!
ಸೂರ್ಯನಿಂದ ಬಿಡುಗಡೆಯಾಗುತ್ತಿವೆ ತೀವ್ರ ಸೌರಜ್ವಾಲೆಗಳು, ಇತರೆ ಗ್ರಹಗಳಿಗೂ ಆಪತ್ತು
Team Udayavani, Jun 6, 2023, 8:00 AM IST

ನವದೆಹಲಿ: ಭೂಮಿಯ ತಾಪಮಾನ ಏರಿಕೆ ಜಾಗತಿಕ ರಾಷ್ಟ್ರಗಳಲ್ಲಿ ಕಾಳಜಿಯ ವಿಚಾರವಾಗಿರುವ ನಡುವೆಯೇ, ಈ ತಾಪಮಾನ ಏರಿಕೆಯಿಂದಾಗಿ ಭೂಮಿಯ ಕೆಳ ಕಕ್ಷೆಯಲ್ಲಿರುವ ಉಪಗ್ರಹಗಳು ಸಮಸ್ಯೆಗೆ ಸಿಲುಕಲಿವೆ ಎನ್ನುವ ವರದಿ ಬಹಿರಂಗಗೊಂಡಿದೆ.
ಸ್ಪೇಸ್ವೆದರ್ ವೆಬ್ಸೈಟ್ನಲ್ಲಿ ಪ್ರಕಟವಾಗಿರುವ ಈ ವಿಚಾರದ ಬಗ್ಗೆ ಆತಂಕ ವ್ಯಕ್ತವಾಗಿದೆ. ಹೌದು, ಆಧುನಿಕ ಜೀವನದ ಬೆನ್ನತ್ತಿರುವ ಮನುಷ್ಯ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರವನ್ನು ಹಾಳುಗೆಡವುತ್ತಿದ್ದು, ಇದರ ಪ್ರತಿಫಲವಾಗಿ ತಾಪಮಾನ ಏರಿಕೆಯಾಗುತ್ತಿದೆ ಎನ್ನುವುದು ನಮಗೆಲ್ಲ ತಿಳಿದೇ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಜಾಗತಿಕ ಪರಿಹಾರ ಪ್ರಯತ್ನಗಳನ್ನೂ ಕೈಗೊಳ್ಳಲಾಗುತ್ತಿದೆ. ಇವೆಲ್ಲದರ ನಡುವೆ ಬಹಿರಂಗಗೊಂಡಿರುವ ವಿಚಾರವೆಂದರೆ, ಈ ಬಾರಿ ತಾಪಮಾನ ಮನುಷ್ಯನಿಂದಲ್ಲ, ಬದಲು ಸೂರ್ಯ ಗ್ರಹದಿಂದಾಗಿ ಏರಿಕೆಯಾಗುತ್ತಿದ್ದು, ಇದಕ್ಕೆ ಮಾನವನಿರ್ಮಿತ ಉಪಗ್ರಹಗಳು ಬಲಿಯಾಗಲಿವೆ.
ಸ್ಪೇಸ್ವೆದರ್ ವರದಿಗಳ ಪ್ರಕಾರ, ಸೂರ್ಯನಿಂದ ಬಿಡುಗಡೆಯಾಗುತ್ತಿರುವ ತೀವ್ರತರದ ಸೌರ ಜ್ವಾಲೆಗಳು ಇತರ ಗ್ರಹಗಳ ಕಾಂತೀಯ ಕ್ಷೇತ್ರಗಳನ್ನು ಪ್ರವೇಶಿಸುವ ಮೂಲಕ ತೀವ್ರತಾಪಮಾನದ ಬಿರುಗಾಳಿಯನ್ನು ಸೃಷ್ಟಿಸುತ್ತವೆ. ಅದರಿಂದ ಗ್ರಹದ ಮೇಲ್ಮೆ„ನ ತಾಪಮಾನ ಹೆಚ್ಚಾಗಲಿದೆ.
ಈಗ ಭೂಮಿಯ ಕಾಂತಕ್ಷೇತ್ರವನ್ನೂ ಸೂರ್ಯಜ್ವಾಲೆಗಳು ಸಮೀಪಿಸಿರುವುದರಿಂದ ಭೂಕಾಂತಿಯ ಬಿರುಗಾಳಿ ಹೆಚ್ಚಿದ್ದು, ಅದರ ಕಣಗಳಿಂದಾಗಿ ಭೂಮಿಯ ಕಕ್ಷೆಯಲ್ಲಿರುವ ಉಪಗ್ರಹಗಳ ಕಾರ್ಯಾಚರಣೆಗೆ ಅಡ್ಡಿಯಾಗಲಿದೆ. ಪರಿಣಾಮ ತಾಂತ್ರಿಕ ಮತ್ತು ಅಯಸ್ಕಾಂತೀಯ ಆಧಾರಿತ ತಂತ್ರಜ್ಞಾನ ಬಳಕೆಗೆ ತೊಡಕಾಗಲಿದೆ ಎಂದು ವರದಿ ತಿಳಿಸಿದೆ.
ಈಗಾಗಲೇ ಮನುಷ್ಯ ಎಲ್ಲದಕ್ಕೂ ಉಪಗ್ರಹಗಳನ್ನೇ ಅವಲಂಬಿಸುವಂತಾಗಿದೆ. ಬಹುಪಾಲು ತಂತ್ರಜ್ಞಾನದ ಮೂಲವಾಗಿ ಉಪಗ್ರಹಗಳು ಕಾರ್ಯನಿರ್ವಹಿಸುತ್ತಿವೆ. ಈ ನಡುವೆ ಭೂಮಿಯ ತಾಪಮಾನ ಏರಿಕೆಯಿಂದಾಗಿ ಅವುಗಳೂ ಸಂಕಷ್ಟಕ್ಕೆ ಸಿಲುಕುವಂತಾದರೆ ಮನುಷ್ಯ ತಂತ್ರಜ್ಞಾನದ ಮಹಾಪತನಕ್ಕೆ ಸಾಕ್ಷಿಯಾಗಬೇಕಾಗುತ್ತದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uttar Pradesh: ಮಗಳ ಮದುವೆಗೆ ಕೂಡಿಟ್ಟ 18 ಲಕ್ಷ ರೂ. ಗೆದ್ದಲು ಪಾಲು!

Today ಆರ್ಟ್ ಆಫ್ ಲಿವಿಂಗ್ “ಸಂಸ್ಕೃತಿ ಉತ್ಸವ”; ಸಮಾರಂಭಕ್ಕೆ ವಿಶ್ವದ ದೊಡ್ಡಣ್ಣನ ಆತಿಥ್ಯ

Road ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್ ಗಡ್ಕರಿ

Cable TV service ಎಂಎಸ್ಒಗಳಿಗೆ 10 ವರ್ಷ ಲೈಸನ್ಸ್: ಕೇಂದ್ರ ಸರಕಾರ

US aims ಭಾರತೀಯರಿಗೆ 10 ಲಕ್ಷಕ್ಕೂ ಅಧಿಕ ಅಮೆರಿಕದ ವಲಸೆರಹಿತ ವೀಸಾ ವಿತರಣೆ
MUST WATCH
ಹೊಸ ಸೇರ್ಪಡೆ

Asian Games: ವಿಶ್ವದಾಖಲೆಯೊಂದಿಗೆ ಮತ್ತೊಂದು ಚಿನ್ನಕ್ಕೆ ಗುರಿಯಿಟ್ಟ ಭಾರತದ ಶೂಟಿಂಗ್ ತಂಡ

ICC World Cup 2023; ಭಾರತ ತಂಡದಲ್ಲಿ ಮಹತ್ವದ ಬದಲಾವಣೆ; ಆರ್.ಅಶ್ವಿನ್ ಗೆ ಬುಲಾವ್

Karnataka Bandh: ಕಾವೇರಿಗಾಗಿ ಜನಾಕ್ರೋಶ, ಹಲವೆಡೆ ಪ್ರತಿಭಟನೆ; ಬಿಗಿ ಪೊಲೀಸ್ ಭದ್ರತೆ

Sept 29: ವಿಶ್ವ ಹೃದಯ ದಿನ: ಹೃದಯ ಆರೋಗ್ಯಕ್ಕೆ ಸಹಕಾರಿ ಆಹಾರಾಭ್ಯಾಸಗಳು

UK ವಿಶ್ವದಲ್ಲೇ ಬಲಿಷ್ಠ ಲೇಸರ್ ನಿರ್ಮಾಣ? ಸೂರ್ಯನಿಗಿಂತಲೂ ಶತಕೋಟಿ ಪಟ್ಟು ಪ್ರಕಾಶಮಾನ