ಒಂಟಿತನಕ್ಕೆ ಹೇಳಿ ಗುಡ್ಬೈ
Team Udayavani, Jan 30, 2018, 9:50 AM IST
ರಾಯಪುರ: ಇತ್ತೀಚೆಗಷ್ಟೇ ಬ್ರಿಟನ್ ಸರ್ಕಾರ ಏಕಾಂಗಿತನ ನಿವಾರಣೆಗಾಗಿಯೇ ಸಚಿವಾಲಯವೊಂದನ್ನು ಆರಂಭಿಸಿ, ಅದಕ್ಕೆ ಸಚಿವರನ್ನೂ ನೇಮಿಸಿತ್ತು. ಇದೀಗ ಛತ್ತೀಸ್ಗಢದ ರಾಯು³ರ ಜಿಲ್ಲಾಡಳಿತವು ಹಿರಿಯ ನಾಗರಿಕರಿಗೆ ಕಾಡುವ ಏಕಾಂಗಿತನವನ್ನು ಹೋಗಲಾಡಿಸಲು “ಬಾಪು ಕಿ ಕುಟೀರ್’ ಯೋಜನೆ ಆರಂಭಿಸಿದೆ. ವೃದ್ಧರಿಗೆ ತಮ್ಮದೇ ವಯೋಮಾನದವರ ಜೊತೆ ಮಾತನಾಡುತ್ತಾ, ಕ್ರಿಯಾಶೀಲವಾಗಿ ಸಮಯ ಕಳೆಯುತ್ತಾ ತಮಗಿರುವ ಒಂಟಿತನದಿಂದ ಹೊರಬರಲು ಸಹಾಯ ಮಾಡುವುದೇ ಈ ವಿನೂತನ ಯೋಜನೆಯ ಉದ್ದೇಶ.
ಉದ್ಯಾನಗಳು ಮತ್ತು ಇತರೆ ಪ್ರದೇಶಗಳಲ್ಲಿ ಆಕರ್ಷಕವಾಗಿರುವ 50 ಕುಟೀರಗಳನ್ನು ನಿರ್ಮಿಸಲಾಗುವುದು. ಅಲ್ಲಿ ವೃದ್ಧರು ಟಿವಿ ನೋಡುತ್ತಾ, ಆಟವಾಡುತ್ತಾ, ಹರಟೆ ಹೊಡೆಯುತ್ತಾ ಕಾಲ ಕಳೆಯಬಹುದು. ಇಲ್ಲಿಯ ಉದ್ಯಾನವೊಂದರಲ್ಲಿ ನಿರ್ಮಿಸಲಾಗಿರುವ ಮೊದಲ “ಬಾಪು ಕಾ ಕುಟೀರ್’ ಅನ್ನು ಛತ್ತೀಸ್ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಉದ್ಘಾಟಿಸಿದ್ದಾರೆ.
ಇವತ್ತಿನ ಸಮಾಜದಲ್ಲಿ ಜನರು ವೃದ್ಧಾಪ್ಯ ಆವರಿಸುತ್ತಿದ್ದಂತೆ ಒಂಟಿಯಾಗುತ್ತಾರೆ, ಆಗ ಅವರಿಗೆ ತಮ್ಮ ಭಾವನೆ ಹೊಂಚಿಕೊಳ್ಳಲು, ಸಮಯ ಕಳೆಯಲು ಅವರದೇ ವಯಸ್ಸಿನವರ ಅಗತ್ಯವಿರುತ್ತದೆ. ಇಲ್ಲಿಗೆ ಬಂದರೆ ಅವರಿಗೆ ಸ್ನೇಹಿತರು ದೊರಕುತ್ತಾರೆ. ಈ ಸುಸಜ್ಜಿತ ಕುಟೀರಗಳಲ್ಲಿ ಕೂಲರ್, ಟೀವಿ, 35 ಜನ ಒಟ್ಟಿಗೆ ಕುಳಿತುಕೊಳ್ಳಲು ಆಸನ, ಆಟವಾಡಲು ಕೇರಂ, ಚೆಸ್, ನಿಯತಕಾಲಿಕೆಗಳು, ವೃತ್ತ ಪತ್ರಿಕೆಗಳು ಇರುತ್ತವೆ ಎಂದು ರಾಯು³ರ ಜಿಲ್ಲಾಧಿಕಾರಿ ಒ.ಪಿ. ಚೌಧರಿ ಹೇಳಿದ್ದಾರೆ. ನಾವು ಕಟ್ಟಡ ಮತ್ತು ಸೌಲಭ್ಯಗಳನ್ನು ಒದಗಿಸುತ್ತೇವೆ. ಸ್ವಸಹಾಯ ಸಂಸ್ಥೆಗಳು, ಸಾಮಾಜಿಕ ಇದರ ನಿರ್ವಹಣೆ ನೋಡಿಕೊಳ್ಳುತ್ತವೆ. ನಾವು ಇನ್ನೂ ಹೆಚ್ಚಿನ ಸಂಘ ಸಂಸ್ಥೆಗಳ ಭಾಗವಹಿಸುವಿಕೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
MUST WATCH
ಹೊಸ ಸೇರ್ಪಡೆ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ