ಮಾಡೆಲ್ ಮಾನ್ಸಿ ದೀಕ್ಷಿತ್ ಕೊಲೆ
Team Udayavani, Oct 17, 2018, 8:35 AM IST
ಮುಂಬಯಿ: ಮಾಡೆಲಿಂಗ್ ಆಗುವ ಬಯಕೆಯಿಂದ ರಾಜಸ್ಥಾನದ ಕೋಟಾದಿಂದ ಮುಂಬಯಿಗೆ ಆಗಮಿಸಿದ್ದ ಮಾನ್ಸಿ ದೀಕ್ಷಿತ್ (19) ಅವರನ್ನು ಕೊಲೆ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಸ್ನೇಹಿತ ಮುಜಾಮಿಲ್ ಸಯ್ಯದ್ ಎಂಬಾತನನ್ನು ಬಂಗೂರ್ ನಗರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಅಂಧೇರಿಯಲ್ಲಿನ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದ ಹೈದರಾಬಾದ್ ಮೂಲದ ಸಯ್ಯದ್ ಜತೆಗೆ ದೀಕ್ಷಿತ್ ಗೆಳೆತನ ಹೊಂದಿದ್ದರು. ಸೋಮವಾರ ಗೆಳೆಯನನ್ನು ನೋಡಲು ಅವರು ಅಪಾರ್ಟ್ಮೆಂಟ್ಗೆ ತೆರಳಿದ್ದು, ಅಲ್ಲಿ ಅವರಿಬ್ಬರ ನಡುವೆ ಯಾವುದೊ ವಿಚಾರಕ್ಕೆ ಜಗಳವಾಗಿದೆ. ಆಗ, ಕುಪಿತಗೊಂಡ ಸಯ್ಯದ್ ಮಾರಕಾಸ್ತ್ರವೊಂದರಿಂದ ಮಾನ್ಸಿ ಮೇಲೆ ಹಲ್ಲೆ ಮಾಡಿದ್ದು, ಆಕೆ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಸಯ್ಯದ್ ಆಕೆಯ ದೇಹವನ್ನು ಬೃಹತ್ ಸೂಟ್ಕೇಸೊಂದರಲ್ಲಿ ತುಂಬಿ ಮುಂಬಯಿಯ ಮಲಾಡ್ ಪ್ರಾಂತ್ಯಕ್ಕೆ ಸೋಮವಾರ ಮಧ್ಯ ರಾತ್ರಿ ಟ್ಯಾಕ್ಸಿಯೊಂದರಲ್ಲಿ ಕೊಂಡೊಯ್ದು ಬಿಸಾಕಿದ್ದಾನೆ ಎಂದು ಪೊಲೀಸರು ಅನುಮಾನಿಸಿದ್ದಾರೆ. ಸಯ್ಯದ್ ಸೂಟ್ಕೇಸ್ ಬಿಸಾಡಿದ್ದ ರೀತಿಯನ್ನು ಗಮನಿಸಿ ಅನುಮಾನಗೊಂಡ ಟ್ಯಾಕ್ಸಿ ಚಾಲಕ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರಿಂದ ಘಟನೆ ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!