ಎಸ್ಸಿ , ಎಸ್ಟಿ ಕಾಯ್ದೆಗೆ ಮತ್ತೆ ಸುಪ್ರೀಂ ಶಕ್ತಿ


Team Udayavani, Oct 2, 2019, 5:18 AM IST

sc

ಹೊಸದಿಲ್ಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ತೀರ್ಪಿಗೆ ಮತ್ತೆ ಬಲ ಬಂದಿದೆ. ತನ್ನದೊಂದು ತೀರ್ಪಿನ ಕಾರಣದಿಂದಾಗಿ ನಿಸ್ಸಾರವಾಗಿದ್ದ ಈ ಕಾಯ್ದೆಯನ್ನು, ಸ್ವತಃ ಸುಪ್ರೀಂ ಕೋರ್ಟ್‌ ಗಟ್ಟಿಗೊಳಿಸಿದೆ.

ಪರಿಶಿಷ್ಟ ಜಾತಿ, ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಜಾತಿ ನಿಂದನೆ ಪ್ರಕರಣದಲ್ಲಿ ಎಫ್ಐಆರ್‌ ದಾಖಲಾದ ತತ್‌ಕ್ಷಣ ಆರೋಪಿಗಳನ್ನು ಬಂಧಿ ಸುವ ಅವಕಾಶವನ್ನು ರದ್ದುಪಡಿಸಿದ್ದ ಕೋರ್ಟ್‌, ಹೊಸ ಮಾರ್ಗಸೂಚಿಗಳುಳ್ಳ ತೀರ್ಪನ್ನು ಕಳೆದ ವರ್ಷ ಪ್ರಕಟ ಮಾಡಿತ್ತು. ಮಂಗಳವಾರ ನಡೆದ ವಿಚಾರಣೆಯಲ್ಲಿ ಈ ತೀರ್ಪಿನ ಕೆಲವು ಅಂಶಗಳನ್ನು ಅದು ವಾಪಸ್‌ ಪಡೆದು, ತೀರ್ಪನ್ನು ಮತ್ತಷ್ಟು ಗಟ್ಟಿ ಮಾಡಿದೆ. ಅಂದರೆ ಇನ್ನು ಮುಂದೆ ಜಾತಿ ನಿಂದನೆ ದೂರು ದಾಖಲಾದ ಕೂಡಲೇ ಆರೋಪಿಯನ್ನು ಬಂಧಿಸಬಹುದು.

ಕೋರ್ಟ್‌ ಹೇಳಿದ್ದೇನು?
ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ಎ.ಆರ್‌. ಶಾ ಮತ್ತು ಬಿ.ಆರ್‌. ಗವಾಯಿ ಅವರುಳ್ಳ ಪೀಠವು ಹಿಂದಿನ ತೀರ್ಪಿನಲ್ಲಿ ನೀಡಲಾಗಿದ್ದ ಮಾರ್ಗಸೂಚಿಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ. ಸಮಾನತೆಗಾಗಿ ಪರಿಶಿಷ್ಟರು ಈಗಲೂ ಹೋರಾಡುತ್ತಿದ್ದಾರೆ ಎಂದು ಹೇಳಿತು.

ಎಲ್ಲರೂ ಸುಳ್ಳು ದೂರು ನೀಡುವುದಿಲ್ಲ
ಜತೆಗೆ ಯಾರೋ ಒಬ್ಬರು ಎಸ್ಸಿ ಮತ್ತು ಎಸ್ಟಿ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದ ಮಾತ್ರಕ್ಕೆ ಕಾಯ್ದೆಯ ಪರಿಣಾಮಕಾರಿ ಅಂಶಗಳನ್ನು ಬದಲಿಸುವುದು ಸರಿಯಲ್ಲ. ಸುಳ್ಳು ದೂರುಗಳನ್ನು ಕೇವಲ ಪರಿಶಿಷ್ಟರಷ್ಟೇ ನೀಡು ವುದಿಲ್ಲ. ಮೇಲ್ವರ್ಗದ ಜನರೂ ನೀಡುತ್ತಾರೆ ಎಂದು ನ್ಯಾಯಪೀಠ ಹೇಳಿತು.

ಹಿಂದಿನ ಸೂಚನೆಗಳೇನು?
ಸೂಚನೆ 3: ಜಾತಿ ನಿಂದನೆ ಆರೋಪಕ್ಕೆ ಗುರಿ ಯಾಗಿರುವಾತ ಸರಕಾರಿ ನೌಕರನಾಗಿದ್ದಲ್ಲಿ ಆತನನ್ನು ಬಂಧಿಸುವ ಮುನ್ನ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯಬೇಕು. ಆರೋಪಿಯು ಸರಕಾರಿ ನೌಕರನಾಗಿರದಿದ್ದಲ್ಲಿ, ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿಯ ಗಮನಕ್ಕೆ ದೂರನ್ನು ತಂದು, ಅವರಿಂದ ಲಿಖೀತ ರೂಪದ ಅನುಮತಿ ಪಡೆದ ಅನಂತರವಷ್ಟೇ ಬಂಧಿಸಬೇಕು. ಇನ್ನು ಆರೋಪಿಗಳ ಬಂಧನಾವಧಿ ವಿಸ್ತರಣೆಗೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರ ಆಣತಿಯನ್ನು ಪಾಲಿಸಬೇಕು. ಆರೋಪಿಯ ಹೇಳಿಕೆಗಳನ್ನು ದಾಖಲಿಸಬೇಕು ಎಂಬ ಆವಶ್ಯಕತೆ ಕಂಡುಬಂದಲ್ಲಿ ಮಾತ್ರ ಈ ಸೂಚನೆ ಅನುಸರಿಸಬೇಕು.

ಸೂಚನೆ 4: ದೂರುದಾರರು ಮಾಡಿರುವ ಆರೋಪ ಗಳು ಜಾತಿ ನಿಂದನೆ ಆರೋಪಕ್ಕೆ ನಿಜ ವಾಗಿಯೂ ಅರ್ಹವೆ, ಅಲ್ಲವೇ ಎಂಬುದನ್ನು ಡಿಎಸ್‌ಪಿ ನೇತೃತ್ವದಲ್ಲಿ ತನಿಖೆಗೊಳಪಡಿಸಬೇಕು.

ಸೂಚನೆ 5: ಸೂಚನೆ 3 ಮತ್ತು 4ನ್ನು ಉಲ್ಲಂ ಸಿ ದಲ್ಲಿ ಅಂಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು.

ತೀರ್ಪಿನಲ್ಲಿನ ಪ್ರಮುಖಾಂಶಗಳು
– ಕೆಳವರ್ಗದಲ್ಲಿರುವುದರಿಂದ ಕಾಯ್ದೆಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದೇ ತಪ್ಪು ಕಲ್ಪನೆ.

– ಮೀಸಲಾತಿಯ ಹೊರತಾಗಿಯೂ ಅಭಿವೃದ್ಧಿಯ ಫ‌ಲ ಎಸ್‌ಸಿ-ಎಸ್‌ಟಿ ವರ್ಗಕ್ಕೆ ಸಿಕ್ಕೇ ಇಲ್ಲ .

– ಹಲವಾರು ರಾಜ್ಯಗಳಲ್ಲಿ ಇನ್ನೂ ಜಾರಿಯಲ್ಲಿದೆ ಅಸ್ಪ ƒಶ್ಯತೆ

– ಗ್ರಾಮಾಂತರ, ಕುಗ್ರಾಮಗಳಲ್ಲಿ ಪರಿಸ್ಥಿತಿ ಇನ್ನೂ ಚಿಂತಾಜನಕ.

– ಚರಂಡಿ ಸ್ವತ್ಛತಾ ಕಾರ್ಮಿಕರನ್ನೂ ಸರಿಯಾಗಿ ನೋಡಿಕೊಳ್ಳುತ್ತಿಲ್ಲ.

ನ್ಯಾಯಪೀಠ ಹೇಳಿದ್ದೇನು?
ಈ ಮೂರೂ ಮಾರ್ಗಸೂಚಿಗಳು, ಜಾತಿನಿಂದನೆ ಪ್ರಕರಣಗಳ ತನಿಖೆಯ ವೇಗವನ್ನು ಕುಂಠಿತಗೊಳಿಸುತ್ತವೆ. ಸೂಚನೆ 3ರಲ್ಲಿ, ಜಾತಿ ನಿಂದನೆ ಮಾಡಿದ ಸರಕಾರಿ ಅಧಿಕಾರಿಯನ್ನು ಬಂಧಿಸಲು ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯಬೇಕು ಎಂಬುದು ಕ್ರಿಮಿನಲ್‌ ದಂಡ ಸಂಹಿತೆಯ 197ನೇ ಕಲಂನ ಆಶಯಗಳಿಗೆ ಧಕ್ಕೆ ತರುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಇನ್ನುಳಿದ ಮಾರ್ಗಸೂಚಿಯಲ್ಲಿರುವ ಆವಶ್ಯಕತೆ ಬಿದ್ದಲ್ಲಿ ಮಾತ್ರ ತನಿಖೆ ಎಂಬ ವಿಚಾರ, ಜಾತಿನಿಂದನೆಯಿಂದ ಅವಮಾನಕ್ಕೊಳಗಾದ ವ್ಯಕ್ತಿಯು, ತ್ರಿಶಂಕು ಸ್ಥಿತಿಯಲ್ಲಿ ನಿಲ್ಲುವಂತೆ ಮಾಡುತ್ತದೆ. ಜತೆಗೆ, ಮೇಲ್ವರ್ಗದ ವ್ಯಕ್ತಿಗಳು, ಪರಿಶಿಷ್ಟರ ವಿರುದ್ಧವೇ ಮರು ದೂರು ದಾಖಲಿಸಬಹುದಾದ ಅವಕಾಶ ಕಲ್ಪಿಸುವುದರಿಂದ ಇಲ್ಲಿ ಪರಿಶಿಷ್ಟರು ಶೋಷಣೆಗೆ ಈಡಾಗುವ ಅಪಾಯವಿದೆ ಎಂದು ನ್ಯಾಯಪೀಠ ಹೇಳಿತು.

ಟಾಪ್ ನ್ಯೂಸ್

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.