
ಯುಪಿಯಲ್ಲಿ ಹಿಜಾಬ್ ವಿಚಾರಕ್ಕೆ ದೌರ್ಜನ್ಯ: ಪ್ರಾಂಶುಪಾಲೆಯ ಆರೋಪ; ವಿಡಿಯೋ ವೈರಲ್
ಸಿಎಂ ಯೋಗಿ ಎದುರು ಪ್ರತಿಭಟಿಸುತ್ತೇನೆ ಎಂದು ಕಣ್ಣೀರಿಟ್ಟ ಪ್ರಾಂಶುಪಾಲೆ
Team Udayavani, Oct 1, 2022, 3:31 PM IST

ಆಗ್ರಾ : ಹಿಜಾಬ್ ವಿಚಾರಕ್ಕೆ ಕಿರುಕುಳ ನೀಡಿರುವ ಕುರಿತು ಪ್ರಾಂಶುಪಾಲೆಯೊಬ್ಬರು ಆರೋಪಿಸಿರುವ ಘಟನೆಯ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ.
ಜಾಯ್ ಹ್ಯಾರಿಸ್ ಗರ್ಲ್ಸ್ ಇಂಟರ್ ಕಾಲೇಜ್ ಪ್ರಾಂಶುಪಾಲೆ ಮಮತಾ ದೀಕ್ಷಿತ್ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಗುಂಪು ಶಾಲೆಯ ಡ್ರೆಸ್ ಕೋಡ್ ಬಗ್ಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪಿಗಳು ತನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ವೀಡಿಯೊದಲ್ಲಿ, ಮಮತಾ ದೀಕ್ಷಿತ್ ಅವರು ಶಾಲೆಯ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸಲು ಪ್ರಯತ್ನಿಸಿದಾಗ, ಮುಸ್ಲಿಂ ಶಿಕ್ಷಕರು ತನ್ನ ಮೇಲೆ ಕಿರುಕುಳ ಕ್ಕೆ ಪ್ರಯತ್ನಿಸಿದರು ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಚಿತ್ರಮಂದಿರಗಳಲ್ಲಿ ನಾಡಗೀತೆ ಮೊಳಗಲಿ: ನಟ ಝೈದ್ ಖಾನ್ ರಿಂದ ಸಿಎಂ ಗೆ ಮನವಿ
ಈ ಬಗ್ಗೆ ತನಿಖೆ ನಡೆಸುವಂತೆ ನಾನು ಸಿಎಂಗೆ ಮನವಿ ಮಾಡುತ್ತೇನೆ ಇಲ್ಲದಿದ್ದರೆ ನಾನು ಅವರ ಮುಂದೆ ಧರಣಿ ಸತ್ಯಾಗ್ರಹಕ್ಕೆ ಕುಳಿತುಕೊಳ್ಳುತ್ತೇನೆ. ನನಗೆ ನ್ಯಾಯ ಮತ್ತು ಆರೋಪಿಗಳ ವಿರುದ್ಧ ಕ್ರಮ ಬೇಕು. ನನಗೆ ಭದ್ರತೆ ಬೇಕು ಏಕೆಂದರೆ ಆರೋಪಿಗಳು ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಅವರು ನನಗೆ ಏನಾದರೂ ಮಾಡುತ್ತಾರೆ ಎಂದು ನಾನು ಹೆದರುತ್ತಿದ್ದೇನೆ ಎಂದು ಮಮತಾ ನೋವು ತೋಡಿಕೊಂಡಿದ್ದಾರೆ.
ಆಗ್ರಾದ ಜಿಲ್ಲಾ ಇನ್ಸ್ಪೆಕ್ಟರ್ ಆಫ್ ಸ್ಕೂಲ್ ಮನೋಜ್ ಕುಮಾರ್ ಪ್ರತಿಕ್ರಿಯಿಸಿ “ದೂರು ಇತ್ತು. ನಾವು ಎರಡೂ ಕಡೆಯ ಹೇಳಿಕೆಗಳನ್ನು ತೆಗೆದುಕೊಂಡಿದ್ದೇವೆ. ಪ್ರಾಂಶುಪಾಲರು ಅವರ ಹೇಳಿಕೆಯನ್ನು ನೀಡಿದರು. ನಾವು ಸಿಬಂದಿಗಳನ್ನೂ ಸಹ ಪ್ರಶ್ನಿಸಿದ್ದೇವೆ. ಆರಂಭದಲ್ಲಿ ಹೆಚ್ಚಿನ ಶುಲ್ಕ ವಸೂಲಿ ಮಾಡುವ ಬಗ್ಗೆ ದೂರು ಬಂದಿತ್ತು. ಅದನ್ನು ಪರಿಹರಿಸಲಾಗಿದೆ. ನಂತರ, ವೈಯಕ್ತಿಕ ವಿವಾದದ ವಿಷಯಗಳು ಬೆಳಕಿಗೆ ಬರಲಾರಂಭಿಸಿದವು ಎಂದು ಹೇಳಿದ್ದಾರೆ.
“ದೂರುಗಳು ಉಲ್ಬಣಗೊಂಡವು ಮತ್ತು ಪ್ರಾಂಶುಪಾಲರ ವಿಡಿಯೋ ವೈರಲ್ ಆಯಿತು. ನಾವು ಇದನ್ನು ಆಡಳಿತ ಮಂಡಳಿಯೊಂದಿಗೆ ಸಭೆಯ ಮೂಲಕ ಪರಿಹರಿಸುತ್ತೇವೆ. ಹಿಜಾಬ್ ಮತ್ತು ಬುರ್ಖಾದ ಬಗ್ಗೆ ದೂರಿಗೆ ಸಂಬಂಧಿಸಿದಂತೆ, ನಾವು 2 ದಿನಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಜಿ ಕಾನೂನು ಸಚಿವ, ಖ್ಯಾತ ವಕೀಲ ಶಾಂತಿ ಭೂಷಣ್ ಇನ್ನಿಲ್ಲ

ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ಗೆ ದಾಖಲೆ ಹಸ್ತಾಂತರಿಸಿದ ಮಮತಾ ಬ್ಯಾನರ್ಜಿ

ಪಿಎಂ ಕೇರ್ಸ್ ಸರ್ಕಾರದ್ದಲ್ಲ, ಸ್ವತಂತ್ರ ದತ್ತಿ ಸಂಸ್ಥೆ!

ಅಪಪ್ರಚಾರಕ್ಕಾಗಿ ಬಿಬಿಸಿಗೆ ಚೀನಾದಿಂದ ಹಣಕಾಸು ನೆರವು? ಬಿಜೆಪಿ ಸಂಸದ ಮಹೇಶ್ ಜೇಠ್ಮಲಾನಿ

ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ: ಆರೋಪಿ ಶಂಕರ್ ಮಿಶ್ರಾಗೆ ಜಾಮೀನು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
