ಶಬರಿಮಲೆ ದೇಗುಲ ಪ್ರವೇಶಕ್ಕೆ ಯತ್ನಿಸಿದ ಬಿಂದುಗೆ ಬೈಗುಳ
Team Udayavani, Apr 26, 2019, 10:15 AM IST
ತಿರುವನಂತಪುರ: ಕಳೆದ ವರ್ಷ ಅಕ್ಟೋಬರ್ನಲ್ಲಿ ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ ಕೇರಳ ಶಾಲೆ ಶಿಕ್ಷಕಿ ಬಿಂದು ತಂಕಮ್ ಕಲ್ಯಾಣಿಗೆ ಬುಧವಾರ ನಡೆದ ಮತದಾನದ ಚುನಾವಣಾ ಕರ್ತವ್ಯದಲ್ಲಿದ್ದಾಗ ಬೈಗುಳದ ಸುರಿಮಳೆಯಾಗಿದೆ. ಪಟ್ಟಾಂಬಿಯಲ್ಲಿ ಇವರು ಚುನಾವಣೆಗೆ ರಿಸರ್ವ್ ಅಧಿಕಾರಿಯಾಗಿ ನಿಯೋಜಿತರಾಗಿದ್ದರು.
‘ಮತಹಾಕಲು ಆಗಮಿಸಿದ ಬಿಜೆಪಿ ಹಾಗೂ ಆರ್ಎಸ್ಎಸ್ ಕಾರ್ಯಕರ್ತರು ಶಬರಿಮಲೆ ದೇಗುಲ ಪ್ರವೇಶಕ್ಕೆ ಯತ್ನಿಸಿದ್ದು ನಾನೇ ಅಲ್ಲವೆ ಎಂದು ಖಚಿತಪಡಿಸಿ ಕೊಳ್ಳಲು ದುರುಗುಟ್ಟಿ ನೋಡಿದರು. ಅನಂತರ ಕರ್ತವ್ಯ ಮುಗಿಸಿ ತೆರಳುತ್ತಿದ್ದಾಗ ಬಂದು ಬೈಯಲು ಆರಂಭಿಸಿದರು’ ಎಂದು ಬಿಂದು ಹೇಳಿದ್ದಾರೆ. ಈ ಪೈಕಿ ಒಬ್ಬನಂತೂ ‘ನೀನು ಯಾಕೆ ಸಾಯಬಾರದು’ ಎಂದೂ ಕೇಳಿದ್ದಾನೆ ಎಂದು ಬಿಂದು ಆರೋಪಿಸಿದ್ದಾರೆ. ಹೀಗಾಗಿ ನಾನು ಸಹಾ ಯಕ ಚುನಾವಣ ಅಧಿಕಾರಿಗೆ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್