ಕೊರೊನಾ ವೈರಸ್ ಮಾನವನಿರ್ಮಿತ! “ದ ಟ್ರಾತ್ ಎಬೌಟ್ ವುಹಾನ್’ ಪುಸ್ತಕದಲ್ಲಿ ಆಘಾತಕಾರಿ ಅಂಶ
ಅಮೆರಿಕದ ನೆರವಿಂದ ಚೀನ ಮೂಲಕ ಜಗತ್ತಿಗೆ ಸೋಂಕಿನ ಸಂಕಟ
Team Udayavani, Dec 6, 2022, 6:40 AM IST
ನವದೆಹಲಿ: ಮೂರು ವರ್ಷಗಳ ಹಿಂದೆ ಜಗತ್ತಿನ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಕೊರೊನಾ ಸೋಂಕು ಶುರುವಾದದ್ದು ಹೇಗೆ ಎಂಬ ಬಗ್ಗೆ ಈಗಾಗಲೇ ಹಲವು ವಾದಗಳು ಮಂಡನೆಯಾಗಿವೆ. ಅಮೆರಿಕದ ವಿಜ್ಞಾನಿ ಆ್ಯಂಡ್ರೂ ಹಫ್ ಎಂಬವರು ಕಂಡುಕೊಂಡಿರುವ ಪ್ರಕಾರ ಚೀನದ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಲಾಜಿಯ ಪ್ರಯೋಗಶಾಲೆಯಲ್ಲಿಯೇ ವೈರಸ್ ಅನ್ನು ಸೃಷ್ಟಿಸಿ ಸೋರಿಕೆ ಮಾಡಲಾಗಿದೆ. ಹಫ್ ಬರೆದಿರುವ ಹೊಸ ಪುಸ್ತಕ “ದ ಟ್ರಾತ್ ಎಬೌಟ್ ವುಹಾನ್’ ನಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.
ಆದರೆ, ಅದಕ್ಕೆ ವಿತ್ತೀಯ ನೆರವು ಸಿಕ್ಕಿದ್ದು ಅಮೆರಿಕ ಸರ್ಕಾರದಿಂದ. ಅದಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ಭದ್ರತೆ ಇಲ್ಲದ ವ್ಯವಸ್ಥೆಯಲ್ಲಿ ನಡೆಸಲಾಗಿತ್ತು. ಹೀಗಾಗಿಯೇ ವೈರಸ್ ಸೋರಿಕೆಯಾಗಿದೆ ಎಂದು ಅವರು ಬರೆದಿದ್ದಾರೆ. ದಶಕಗಳಿಂದಲೂ ಸಂಸ್ಥೆ ಕೊರೊನಾ ವೈರಸ್ಗಳನ್ನು ಬಾವಲಿಗಳ ಮೂಲಕ ಪ್ರಯೋಗ ನಡೆಸುತ್ತಿತ್ತು. ಚೀನ ಸರ್ಕಾರಕ್ಕೆ ಕುಲಾಂತರಿ ತಂತ್ರಜ್ಞಾನದ ಮೂಲಕ ವೈರಸ್ ಅನ್ನು ಅಭಿವೃದ್ಧಿಪಡಿಸುತ್ತಿರುವ ವಿಚಾರ ಗೊತ್ತಿತ್ತು. ಅದಕ್ಕಾಗಿ ಆ ದೇಶದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಕೂಡ ವಿತ್ತೀಯ ನೆರವು ನೀಡಿದೆ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಕೊರೊನಾ ಸಮಸ್ಯೆ ಉದ್ಭವಿಸುವಲ್ಲಿ ಚೀನದ ಜತೆಗೆ ಅಮೆರಿಕವೂ ಕಾರಣ ಎಂದು ದೂರಿರುವ ಹಫ್, ಅಪಾಯಕಾರಿ ತಂತ್ರಜ್ಞಾನವನ್ನು ಆ ದೇಶ ಚೀನಕ್ಕೆ ಹಸ್ತಾಂತರ ಮಾಡಿತ್ತು ಎಂದು ಆರೋಪಿಸಿದ್ದಾರೆ. ಹಫ್ ಅವರು ಕೆಲಕಾಲ ವುಹಾನ್ನ ಲ್ಯಾಬ್ನಲ್ಲಿ ಕಾರ್ಯನಿರ್ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಪ್ ಕೌನ್ಸಿಲರ್ಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಬಿಜೆಪಿಗೆ ಸಾಧ್ಯವಿಲ್ಲ ಎಂದ ಕೇಜ್ರಿವಾಲ್
ಕೇರಳದ ಪೆಟ್ ಶಾಪ್ ನಲ್ಲಿ ನಾಯಿಮರಿ ಕಳ್ಳತನ; ಉಡುಪಿ ಮೂಲದ ಇಬ್ಬರು ವಿದ್ಯಾರ್ಥಿಗಳ ಬಂಧನ
ಏರ್ ಇಂಡಿಯಾ ವಿಮಾನದ ಇಂಜಿನ್ ನಲ್ಲಿ ಬೆಂಕಿ; ತುರ್ತು ಲ್ಯಾಂಡಿಂಗ್
ಮುಂಬಯಿಯಲ್ಲಿ ತಾಲಿಬಾನ್ ದಾಳಿ: ಎನ್ ಐಎಗೆ ಬೆದರಿಕೆ ಮೇಲ್
ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ: ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂ
MUST WATCH
ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು
ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಹೊಸ ಸೇರ್ಪಡೆ
ಆರ್ಹಾಳ: ಭೂಮಿ ಪೋಡಿ ಮುಕ್ತ ಮಾಡದಿದ್ದರೆ ಮತದಾನ ಬಹಿಷ್ಕಾರ
ಸಕಲೇಶಪುರ: ಅಟ್ಟಾಡಿಸಿಕೊಂಡು ಬಂದ ಕಾಡಾನೆಗಳು; ಕೂದಲೆಳೆ ಅಂತರದಲ್ಲಿ ಇಟಿಎಫ್ ಸಿಬಂದಿ ಪಾರು
ಸಾಮಾಜಿಕ ಉದ್ಯಮಕ್ಕೆ ಹುಬ್ಬಳ್ಳಿ ಮಾಡೆಲ್; ದೇಶಪಾಂಡೆ ಫೌಂಡೇಶನ್ ಅಭಿವೃದ್ಧಿ ಸಂವಾದ’ ಸಮಾವೇಶ
ಆರೋಗ್ಯವೇ ಭಾಗ್ಯ…ರುಚಿಕರವಾದ ವೆಜ್ ಗೋಲ್ಡ್ ಕಾಯಿನ್ ರೆಸಿಪಿ
ಆಪ್ ಕೌನ್ಸಿಲರ್ಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಬಿಜೆಪಿಗೆ ಸಾಧ್ಯವಿಲ್ಲ ಎಂದ ಕೇಜ್ರಿವಾಲ್