ಮೊದಲ ಅಲೆ ಮುಗಿದಿಲ್ಲ ; ಇನ್ನೊಂದು ದೂರವಿಲ್ಲ

ನಿರ್ಲಕ್ಷಿಸಿದರೆ ಕೋವಿಡ್ ಕಾಟ: ಎಚ್ಚರಿಸಿದ ತಜ್ಞರು

Team Udayavani, Oct 3, 2020, 6:25 AM IST

ಮೊದಲ ಅಲೆ ಮುಗಿದಿಲ್ಲ ; ಇನ್ನೊಂದು ದೂರವಿಲ್ಲ

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಭಾರತದಲ್ಲಿ ಇನ್ನೂ ಕೊರೊನಾದ ಮೊದಲ ಅಲೆಯೇ ಮುಗಿದಿಲ್ಲ. ಎರಡನೇ ಅಲೆ ಅಪ್ಪಳಿಸುವ ದಿನಗಳೂ ಹೆಚ್ಚು ದೂರವಿಲ್ಲ!  ಮಾಯಾವಿ ವೈರಾಣುವಿನ ಅಟ್ಟಹಾಸಕ್ಕೆ ದೇಶದಲ್ಲಿ ಲಕ್ಷ ಜೀವಗಳು ಉಸಿರು ಚೆಲ್ಲಿರುವ ನಡುವೆಯೇ ತಜ್ಞರು ಇಂಥ ಎಚ್ಚರಿಕೆ ರವಾನಿಸಿದ್ದಾರೆ. ದೇಶದಲ್ಲಿ ಪ್ರಕರಣ ಸಂಖ್ಯೆ ಕೊಂಚ ಇಳಿಕೆಯತ್ತ ಸಾಗಿದ ಮಾತ್ರಕ್ಕೆ ಕೊರೊನಾ ತೊಲಗಿತು ಎಂದಲ್ಲ. ನಾವಿನ್ನೂ ಮೊದಲ ಅಲೆಯಲ್ಲೇ ಇಂಥ ಏರಿಳಿತಗಳನ್ನು ಕಾಣುತ್ತಿದ್ದೇವಷ್ಟೇ ಎಂದವರು ಹೇಳಿದ್ದಾರೆ.

ಇದುವರೆಗೆ ಮೊದಲ ಅಲೆಯೇ ಮುಗಿದಿಲ್ಲ. ಪ್ರಸ್ತುತ ಕೊರೊನಾ ಆರ್ಭಟದ ಎರಡನೇ ಅಲೆ ಎನ್ನುವ ಪ್ರಶ್ನೆಯೇ ಬೇಡ. ಸೋಂಕು ತೀವ್ರವಾಗಿ ಹಬ್ಬುತ್ತಿರುವುದರಿಂದ ನಾವು ಹೆಚ್ಚು ಜಾಗ್ರತೆ ವಹಿಸಬೇಕಿದೆ ಎಂದು ಖ್ಯಾತ ತಜ್ಞ ವೈದ್ಯ ಡಾ| ರಾಜೇಶ್‌ ಪಾರೀಖ್‌ “ಇಂಡಿಯಾ ಟುಡೇ ಹೆಲ್ತ್‌ಗಿರಿ ಅವಾರ್ಡ್ಸ್‌’ ಸಮಾರಂಭದಲ್ಲಿ ಎಚ್ಚರಿಸಿದ್ದಾರೆ.

ಪ್ರಕರಣಗಳ ಸಂಖ್ಯೆ ನೋಡಿ ಧೈರ್ಯಗೆಟ್ಟರೆ ಅದ ರಿಂದ ನಮಗೇ ತೊಂದರೆ. ಭಾರತ ಮತ್ತು ವಿಶ್ವ ಇಂಥ ಹಲವು ಸಂಕಷ್ಟದ ಸಮಯಗಳನ್ನು ಎದುರಿಸಿದ್ದನ್ನು ನೆನಪಿಸಿ ಕೊಳ್ಳೋಣ. 100 ವರ್ಷಗಳ ಹಿಂದೆ ಇನ್‌ಫ‌ುÉಯೆಂಜಾ ಸಾಂಕ್ರಾಮಿಕ ಕಾಡಿದಾಗ ಭಾರತವೊಂದರಲ್ಲೇ 1.5 ಕೋಟಿ ಮಂದಿ ಸಾವನ್ನಪ್ಪಿದ್ದರು. ಪೋಲಿಯೋ ಕೂಡ ದೇಶವನ್ನು ಹಿಂದೆ ಬೆಚ್ಚಿಬೀಳಿಸಿತ್ತು ಎಂದು ಅವರು ನೆನಪಿಸಿದ್ದಾರೆ.

ಒಂದೆರಡು ವರ್ಷ ಇರಲಿದೆ!
ಕೊರೊನಾದ ಕರಾಳ ಸ್ಥಿತಿ ಕೆಲವು ತಿಂಗಳು-ಒಂದೆರಡು ವರ್ಷಗಳ ವರೆಗೂ ಇರುವ ಸಾಧ್ಯತೆ ಇದೆ. ಆದರೆ ನಾವು ಕುಗ್ಗಬಾರದು. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆ, ಸ್ಯಾನಿಟೈಸೇಶನ್‌- ಇಂಥ ಪ್ರಯತ್ನಗಳಿಂದ ಒಳ್ಳೆಯ ಫ‌ಲಿತಾಂಶ ಸಾಧ್ಯ. ಲಸಿಕೆ ಸಿಗುವ ವರೆಗೂ ನಾವು ಇವುಗಳನ್ನು ಅನುಸರಿಸಬೇಕಿದೆ ಎಂದು ಫೋರ್ಟಿಸ್‌ ಎಸ್ಕಾರ್ಟ್‌ ಹೆಲ್ತ್‌ ಇನ್‌ಸ್ಟಿಟ್ಯೂಟ್‌ನ ಡಾ| ಸೇಠ್ ಹೇಳಿದ್ದಾರೆ.

ಟ್ರಂಪ್‌ ದಂಪತಿಗೆ ಕೋವಿಡ್
ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತವರ ಪತ್ನಿ ಮೆಲಾನಿಯಾ ಟ್ರಂಪ್‌ಗ್ೂ ಕೋವಿಡ್ ಪಾಸಿಟಿವ್‌ ದೃಢಪಟ್ಟಿದೆ. ಅಮೆರಿಕದಲ್ಲಿ ಚುನಾವಣೆ ಪ್ರಚಾರ ತಾರಕ ಕ್ಕೇರಿರುವಾಗಲೇ ಸೋಂಕು ತಗಲಿರುವುದು ರಿಪಬ್ಲಿಕನ್‌ ದಿಗ್ಗಜನಿಗೆ ಚಿಂತೆ ಹೆಚ್ಚಿಸಿದೆ. “ನನಗೆ, ನನ್ನ ಪತ್ನಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. ಈ ವಿಚಾರ ತಿಳಿದ ತತ್‌ಕ್ಷಣದಿಂದಲೇ ನಾವು ಕ್ವಾರಂಟೈನ್‌ಗೆ ಒಳಪಟ್ಟಿದ್ದೇವೆ’ ಎಂದು ತಿಳಿಸಿದ್ದಾರೆ. ಟ್ರಂಪ್‌ ಮತ್ತು ಮೆಲಾನಿಯಾ ಬೇಗ ಚೇತರಿಸಿಕೊಳ್ಳುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಪ್ರಧಾನಿ ಮೋದಿ ಸೇರಿದಂತೆ ಹಲವು ವಿಶ್ವನಾಯಕರು ಟ್ವೀಟ್‌ ಮೂಲಕ ಹಾರೈಸಿದ್ದಾರೆ.

ಪ್ರತೀ 10ರಲ್ಲಿ ಒಬ್ಬ ಭಾರತೀಯ
ಕೊರೊನಾದಿಂದ ಅತೀ ಹೆಚ್ಚು ಸಾವುಗಳನ್ನು ಕಂಡ 3ನೇ ರಾಷ್ಟ್ರ ಭಾರತ. ಇಂದು ಕೊರೊನಾದಿಂದ ಸಾಯುತ್ತಿರುವ ವಿಶ್ವದ ಪ್ರತೀ 10 ಮಂದಿಯಲ್ಲಿ ಒಬ್ಬ ಭಾರತೀಯ ಇರುತ್ತಾನೆ. ಆದರೆ ನಮ್ಮ ಜನಸಂಖ್ಯೆಯ ಎದುರು ಈ ಸಾವಿನ ಸಂಖ್ಯೆ ಏನೇನೂ ಅಲ್ಲ. ವಿಶ್ವದಲ್ಲಿ ಪ್ರತೀ 10 ಲಕ್ಷಕ್ಕೆ 131 ಮಂದಿ ಸಾವನ್ನಪ್ಪಿದ್ದರೆ ಭಾರತದಲ್ಲಿ ಈ ಪ್ರಮಾಣ 10 ಲಕ್ಷಕ್ಕೆ ಕೇವಲ 72.

ಟಾಪ್ ನ್ಯೂಸ್

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಕಾರಿಗೆ ಪೆಟ್ರೋಲ್‌ ಬದಲು ಡೀಸೆಲ್‌ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.