ಕ್ಷಮೆ ಕೋರಲಿದೆ ಇತಿಹಾಸ


Team Udayavani, Sep 7, 2018, 6:00 AM IST

38.jpg

ಹೊಸದಿಲ್ಲಿ:  “ಐಪಿಸಿ 377ನೇ ಸೆಕ್ಷನ್‌, ಸಲಿಂಗಿಗಳ ತೇಜೋವಧೆಗೆ ಈ ಕಾನೂನು ಅಸ್ತ್ರವಾಗಿ ಬಳಕೆಯಾಗಿದ್ದು ವಿಪರ್ಯಾಸ. ಕಾನೂನಿನ ಹೆಸರಿನಲ್ಲಿ ಸಲಿಂಗಿಗಳ ಮೇಲಾಗಿರುವ ದೌರ್ಜನ್ಯಗಳಿಗಾಗಿ ಇತಿಹಾಸ ಅವರಲ್ಲಿ ಕ್ಷಮೆ ಕೋರುತ್ತದೆ. ಗತಿಸಿದ ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ, ಮುಂಬರುವ ಭವಿಷ್ಯವನ್ನು ಸುಭದ್ರವಾಗಿಸಬಹುದು’ – ಸಲಿಂಗ ಕಾಮಕ್ಕೆ ಕಾನೂನು ಮಾನ್ಯತೆ ನೀಡುವ ತೀರ್ಪು ನೀಡುವ ವೇಳೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಹೇಳಿದ ಮಾತುಗಳಿವು.  

ತೀರ್ಪಿನ ಜತೆಗೆ ಸಮಾಜದ ಓರೆ ಕೋರೆಯನ್ನು ತಿದ್ದುವ ಪ್ರಾಮಾಣಿಕ ಪ್ರಯತ್ನ ನ್ಯಾಯ ಪೀಠದಲ್ಲಿದ್ದ ನ್ಯಾಯಮೂರ್ತಿಗಳ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು. ಸಲಿಂಗಿಗಳ ಭವಿಷ್ಯವನ್ನು ಸುಭದ್ರಗೊಳಿಸುವ ಬಗ್ಗೆ ಮಾತನಾಡಿದ ನ್ಯಾ. ಚಂದ್ರಚೂಡ್‌, “ಯಾರ್ಯಾರ ಜತೆಯಲ್ಲಿ ಲೈಂಗಿಕ ಸಂಬಂಧ ಹೊಂದಬೇಕೆಂಬುದು ಆಯಾ ವ್ಯಕ್ತಿಗಳ ತೀರಾ ಖಾಸಗಿ ವಿಚಾರ. ಇದನ್ನು ನಿರ್ಧರಿಸುವ ಹಕ್ಕು ಸಮಾಜಕ್ಕಿಲ್ಲ. ಸಮಾಜದಲ್ಲಿ ಒಬ್ಬನೇ ಒಬ್ಬ ಸಲಿಂಗಿ ಇದ್ದರೂ ಅವನ ಮೂಲಭೂತ ಹಕ್ಕುಗಳನ್ನು ಸಾಮಾಜಿಕ ಕಟ್ಟುಪಾಡುಗಳ ಹೆಸರಿನಲ್ಲಿ ಕಿತ್ತುಕೊಳ್ಳಲು ನ್ಯಾಯಪೀಠ ಅವಕಾಶ ನೀಡುವುದಿಲ್ಲ’ ಎಂದರು. 

ಇನ್ನು, ಸಿಜೆಐ ದೀಪಕ್‌ ಮಿಶ್ರಾ ತಮ್ಮ ತೀರ್ಪಿನ ವೇಳೆ, “ನಾನು ನಾನೇ. ನಾನು ಹೇಗಿದ್ದೇನೆಯೋ ಹಾಗೆಯೇ ನನ್ನನ್ನು ಸ್ವೀಕರಿಸಿ’ ಎಂದು 
ಜರ್ಮನಿಯ ಚಿಂತಕನ ಮಾತು ಸಲಿಂಗಿಗಳ ವಿಚಾರದಲ್ಲಿ ಹೇಳಬೇಕಿದೆ. ಸಲಿಂಗಿಗಳ ಬಗ್ಗೆ ಸಮಾಜದಲ್ಲಿ ಇರುವ ಪೂರ್ವ ಗ್ರಹ ಚಿಂತನೆಗಳಿಗೆ ಇತಿಶ್ರೀ ಹಾಡಬೇಕಿದೆ. ಪ್ರತಿಯೊಂದು ಮೋಡದಲ್ಲೂ ಕಾಮನ ಬಿಲ್ಲನ್ನು ಕಾಣುವಂಥ ದೃಷ್ಟಿ ಕೋನ ತರಬೇಕಿದೆ. ಈ ನಿಟ್ಟಿನಲ್ಲಿ ಎಲ್ಲಾ ನಾಗರಿಕರನ್ನು ಸಬಲೀಕರಣಗೊಳಿಸಬೇಕಿದೆ” ಎಂದು ಆಶಿಸಿದರು. 

ಇನ್ನು, ನ್ಯಾ. ನಾರಿಮನ್‌ ಅವರು, “ನ್ಯಾಯ ಪೀಠ ಇಂದು ನೀಡಿರುವ ತೀರ್ಪಿನ ಬಗ್ಗೆ ಸರಕಾರ ಹಾಗೂ ಮಾಧ್ಯಮಗಳು ವ್ಯಾಪಕವಾಗಿ ಪ್ರಚಾರ ಮಾಡಬೇಕು. ಈ ಮೂಲಕ ಸಾರ್ವಜನಿಕರಲ್ಲಿ ಸಲಿಂಗಗಳಿಗೂ ಎಲ್ಲರಂತೆ ಬದುಕುವ ಹಕ್ಕಿದೆ ಎಂಬುದು ಎಲ್ಲರಿಗೂ ಮನಗಾಣುವಂತೆ ಮಾಡಬೇಕು” ಎಂದರು. ಇನ್ನು, ನ್ಯಾಯಪೀಠದಲ್ಲಿದ್ದ ಮತ್ತೂಬ್ಬ ನ್ಯಾಯ ಮೂರ್ತಿ ಖಾನ್ವಿಳ್ಕರ್‌, “”ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸಾವಿಗೆ ಸಮಾನ. ಹಾಗಾಗಿ, ಸಲಿಂಗಿಗಳಿಗೆ ಅವರಿಗೆ ಸಿಗಬೇಕಾದ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕೊಡಬೇಕಿದೆ” ಎಂದರು. 

ವಿಶ್ವ ಸಂಸ್ಥೆ ಸ್ವಾಗತ
ಸಲಿಂಗ ಕಾಮಕ್ಕೆ ಕಾನೂನು ಮಾನ್ಯತೆ ನೀಡಿದ ಸುಪ್ರೀಂ ಕೋರ್ಟ್‌ ತೀರ್ಪನ್ನು ವಿಶ್ವ ಸಂಸ್ಥೆ ಸ್ವಾಗತಿಸಿದೆ. ಎಲ್‌ಜಿಬಿಟಿಐ ಸಮುದಾಯಕ್ಕೆ ಅವರ ಮೂಲಭೂತ ಹಕ್ಕುಗಳನ್ನು ನೀಡುವಲ್ಲಿ ಇದು ಮೊದಲ ಹೆಜ್ಜೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ. 

ಈ ಮೊದಲೇನಿತ್ತು? 
1864ರಲ್ಲಿ ರೂಪುಗೊಂಡಿದ್ದ ಐಸಿಪಿ ಸೆಕ್ಷನ್‌ 377ರಲ್ಲಿ ಸಲಿಂಗ ಕಾಮವು ಶಿಕ್ಷಾರ್ಹ ಅಪರಾಧ ಎಂದು ಉಲ್ಲೇಖೀಸಲಾಗಿತ್ತ ಲ್ಲದೆ, ಈ ಅಪರಾಧ ಎಸಗಿದವರಿಗೆ ಗರಿಷ್ಠ 10 ವರ್ಷಗಳ ಜೈಲು ವಾಸ ವಿಧಿಸುವ ಅವಕಾಶವಿತ್ತು. 

26ನೇ ದೇಶವಾಗಿ ಭಾರತ
ಸಲಿಂಗಿಗಳಿಗೆ ಕಾನೂನು ಮಾನ್ಯತೆ ನೀಡುವ ಮೂಲಕ ಭಾರತ, ಈ ಐತಿಹಾಸಿಕ ತೀರ್ಮಾನ ಕೈಗೊಂಡಿರುವ ವಿಶ್ವದ 26ನೇ ದೇಶವಾಗಿ ಹೊರಹೊಮ್ಮಿದೆ.  

ವ್ಯಾಪಕ ಸ್ವಾಗತ: ಕೇರಳದ ಸಲಿಂಗಿ ಸಂಘವು  ಸೆ. 6ರ  ಭಾರತದ 2ನೇ ಸ್ವಾತಂತ್ರ್ಯ ದಿನವೆಂದು ಘೋಷಿಸಿದ್ದರೆ, ದಿಲ್ಲಿಯ ಕಾರ್ಯಕರ್ತರು, ಎಲ್‌ಜಿಬಿಟಿಕ್ಯು ಇನ್ನು ಕತ್ತಲೆಯಲ್ಲಿ ಬದುಕುವ ಅವಶ್ಯಕತೆಯಿಲ್ಲ ಎಂದಿದ್ದಾರೆ.

ಮನ ಮುಟ್ಟುವಂತಿದೆ
ಕಾಂಗ್ರೆಸ್‌ ತೀರ್ಪಿನ ಬಗ್ಗೆ ಟ್ವೀಟ್‌ ಮಾಡಿದ್ದು  “ಶತಮಾನಗಳ ವಸಾಹತು ಶಾಹಿ ಸಂಸ್ಕೃತಿಯೊಂದರಿಂದ ರೂಪುಗೊಂಡಿದ್ದ ಕಾನೂನೊಂದಕ್ಕೆ ತಿದ್ದು ಪಡಿ ತಂದಿದೆ. ಇದರಿಂದ ಸಲಿಂಗಿಗಳ ಹಕ್ಕುಗಳ ರಕ್ಷಣೆಯಾಗಿರುವುದರಲ್ಲದೆ, ಉದಾರವಾದ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದೆ’ ಎಂದು ಬರೆದುಕೊಂಡಿದೆ

ಪ್ರಕರಣದ ಹಿನ್ನೋಟ
2001: ಸಮ್ಮತಿಯ ಸಲಿಂಗಕ್ಕೆ ಕಾನೂನು ಮಾನ್ಯತೆ ನೀಡುವಂತೆ ನಾಝ್ ಫೌಂಡೇ ಷನ್‌ನಿಂದ ಅರ್ಜಿ
ಸೆ. 24, 2004:  ನಾಝ್ ಸಂಸ್ಥೆಯ ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌
ಡಿಸೆಂಬರ್‌, 2004: ಸಲಿಂಗ ಕಾಮ ಕಾರ್ಯಕರ್ತರಿಂದ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ. 
ಏ. 3, 2006: ಪ್ರಕರಣದ ಮರು ವಿಚಾರಣೆಗೆ ದಿಲ್ಲಿ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ. 
ಅ. 4, 2006: ಮಾನ್ಯತೆ ನೀಡುವುದರ ವಿರುದ್ಧ ಬಿಜೆಪಿ ನಾಯಕ ಬಿ.ಪಿ. ಸಿಂಘಲ್‌ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ
ಜು. 2, 2009: ಸಲಿಂಗ ಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿದ ದಿಲ್ಲಿ ಹೈಕೋರ್ಟ್‌. 
ಡಿ. 11, 2013: 2009ರಲ್ಲಿ ದಿಲ್ಲಿ ಹೈಕೋರ್ಟ್‌ ಆದೇಶ ಸುಪ್ರೀಂನಿಂದ ರದ್ದು
ಏ. 3, 2013: ಕ್ಯುರೇ ಟಿವ್‌ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ. 
ಫೆ. 2, 2016: ಕ್ಯುರೇಟಿವ್‌ ಅರ್ಜಿಗಳ ವಿಚಾರಣೆ ಐವರು ನ್ಯಾಯ ಮೂರ್ತಿಗಳ ಪೀಠಕ್ಕೆ ಹಸ್ತಾಂತರ. 
ಆ. 24, 2017: ಲೈಂಗಿಕ ಬಯಕೆಗಳು ಆಯಾ ವ್ಯಕ್ತಿಯ ಖಾಸಗಿತನದ ವಿಚಾರ ಹಾಗೂ ಇದೊಂದು ಮೂಲ ಭೂತ ಹಕ್ಕು ಎಂದ ಸುಪ್ರೀಂ ಕೋರ್ಟ್‌. 
ಜ. 8, 2018: 2013ರಲ್ಲಿ  ನೀಡಿದ್ದ ತೀರ್ಪನ್ನು ಪುನರ್‌ ಪರಿಶೀಲನೆ ಮಾಡಲು ಸುಪ್ರೀಂ ಕೋರ್ಟ್‌ ನಿರ್ಧಾರ. 
ಜು. 11, 2018: ಪ್ರಕರಣದ ತೀರ್ಪು ಸರ್ವೋತ್ಛ ನ್ಯಾಯಾಲಯದ ಮರ್ಜಿಗೆ ಬಿಟ್ಟ ವಿಚಾರವೆಂದ ಕೇಂದ್ರ ಸರಕಾರ. 
ಜು. 17, 2018: ವಿಚಾರಣೆ ಅಂತ್ಯಗೊಳಿಸಿ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌ ನ್ಯಾಯ ಪೀಠ. 
ಸೆ. 6, 2018: ಐಪಿಸಿ 377 ಸೆಕ್ಷ ನ್‌ನ ಕೆಲವು ಅಂಶಗಳನ್ನು ರದ್ದುಗೊಳಿಸಿ, ಸಲಿಂಗ ಕಾಮಕ್ಕೆ ಕಾನೂನು ಮಾನ್ಯತೆ ನೀಡಿದ ಸುಪ್ರೀಂ ಕೋರ್ಟ್‌.

ಲವ್‌ ಈಸ್‌ ಲವ್‌. ನಮ್ಮ ದೇಶ ದಲ್ಲಿ ಈದಿನ ಮಹತ್ವದ ದಿನ. ಇಂಥದ್ದೊಂದು ವಿಶೇಷ ತೀರ್ಪಿಗಾಗಿ ಹೋರಾಡಿದ ಎಲ್ಲರಿಗೂ ಧನ್ಯ ವಾದ. 
ಆಲಿಯಾ ಭಟ್‌, ನಟಿ

ಈ ತೀರ್ಪು ನಾಗರಿಕರಿಗೆ ಸಿಕ್ಕಿದ ಸ್ವಾತಂತ್ರ್ಯ. ಕೇವಲ ಒಂದು ವರ್ಗಕ್ಕೆ ಅಲ್ಲ. ಹಿಂದಿನ ಸಂದರ್ಭಗಳಲ್ಲಿ ನಾನು ಹೇಳಿದ್ದ ಮಾತುಗಳನ್ನು ಪುಷ್ಟೀಕರಿಸಿದಂತಿದೆ. 
ಶಶಿ ತರೂರ್‌, ಕಾಂಗ್ರೆಸ್‌ ನಾಯಕ

ಐಪಿಸಿ ಸೆಕ್ಷನ್‌ 377ರ ಕಿರಿಕಿರಿ ಅನುಭವಿಸಿದವರಿಗೆ ಅದರಿಂದ ಇಂದು ಮುಕ್ತಿ ಸಿಕ್ಕಿದೆ. 
ಅಕ್ಷಯ್‌ ಕುಮಾರ್‌, ನಟ

ತೀರ್ಪಿನಿಂದ ಉಸಿರುಗಟ್ಟುತ್ತಿರುವವರಿಗೆ ಆಮ್ಲಜನಕ ನೀಡಿದಂತಾಗಿದೆ. ಇದೊಂದು ಐತಿಹಾಸಿಕ ತೀರ್ಪು. ಎಲ್ಲರಿಗೂ ಸಮಾನ ಹಕ್ಕು ನೀಡಿದ್ದು ಹೆಮ್ಮೆಯೆನಿಸುತ್ತಿದೆ. 
ಕರಣ್‌ ಜೋಹರ್‌, ನಿರ್ದೇಶಕ 

ಸುಪ್ರೀಂ ಕೋರ್ಟ್‌ ತೀರ್ಪು ಸ್ವಾಗತಾರ್ಹವಾದರೂ, ನಿಸರ್ಗದತ್ತವಾಗಿ ಮೂಡುವ ಸಂಬಂಧಗಳಿಗಷ್ಟೇ ಈ ಸಮಾಜ ಮಾನ್ಯತೆ ನೀಡುತ್ತದೆ. ಈ ಬಗ್ಗೆ ಮತ್ತಷ್ಟು ಚರ್ಚೆಗಳಾಗಬೇಕಿದೆ
ಅರುಣ್‌ ಕುಮಾರ್‌, ಆರ್‌ಎಸ್‌ಎಸ್‌ ಮುಖಂಡ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.