ಡ್ರ್ಯಾಗನ್‌ ಮೇಲೆ ನಿಗಾಕ್ಕೆ ಆರು ಉಪಗ್ರಹ ಬೇಕು; ಕೇಂದ್ರಕ್ಕೆ ರಕ್ಷಣಾ ಸಂಸ್ಥೆಗಳ ಕೋರಿಕೆ

ಚೀನ ಸೈನಿಕರ ಮೇಲೆ ಕಣ್ಣಿಡಲು ಸಹಾಯ; ಎಲ್‌ಎಸಿಯ 4,000 ಕಿ.ಮೀ. ಗಡಿ ಕಾಯಲೂ ಅನುಕೂಲ ಎಂದ ಸಂಸ್ಥೆಗಳು

Team Udayavani, Aug 7, 2020, 10:29 AM IST

ಡ್ರ್ಯಾಗನ್‌ ಮೇಲೆ ನಿಗಾಕ್ಕೆ ಆರು ಉಪಗ್ರಹ ಬೇಕು; ಕೇಂದ್ರಕ್ಕೆ ರಕ್ಷಣಾ ಸಂಸ್ಥೆಗಳ ಕೋರಿಕೆ

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಭಾರತ-ಚೀನ ನಡುವಿನ ಸುಮಾರು 4,000 ಕಿ.ಮೀ.ಗಳವರೆಗಿನ ನೈಜ ಗಡಿ ರೇಖೆ (ಎಲ್‌ಎಸಿ)ಯಲ್ಲಿ ಚೀನ ಸೇನೆ ನಡೆಸುತ್ತಿರುವ ಕಾರ್ಯಾಚರಣೆಗಳ ಮೇಲೆ ನಿಗಾ ಇಡಲು ತಮಗೆ ನಾಲ್ಕರಿಂದ ಆರು ಉಪಗ್ರಹಗಳ ಸೇವೆಯ ಆವಶ್ಯಕತೆಯಿದೆ ಎಂದು ರಕ್ಷಣಾ ಸಂಸ್ಥೆಗಳು, ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿವೆ. ಅಲ್ಲದೆ, ಉಪಗ್ರಹಗಳ ಸೇವೆಯಿಂದ ಗಡಿ ಸಮೀಪದ ಭಾರತದ ನೆಲದಲ್ಲಿ ಮಾತ್ರವಲ್ಲದೆ ಗಡಿಯಾಚೆಗಿನ ಚೀನ ನೆಲದೊಳಗೆ ಚೀನ ಸೈನಿಕರು ರೂಪಿಸುವ ತಂತ್ರಗಾರಿಕೆಯನ್ನೂ ಮನನ ಮಾಡಲು ಸಹಾಯವಾಗುತ್ತವೆ ಎಂದು ರಕ್ಷಣಾ ಸಂಸ್ಥೆಗಳು ಕೇಂದ್ರ ಸರಕಾರವನ್ನು ಕೇಳಿಕೊಂಡಿವೆ.

ಗಡಿ ರೇಖೆಯ ಬಳಿಯಲ್ಲಿ ಚೀನ ತನ್ನ ಪ್ರಾಂತ್ಯದೊಳಗಿನ ಕ್ಸಿಂಜಿಯಾಂಗ್‌ ಎಂಬಲ್ಲಿ ಚೀನ ಸೇನೆಯು ಕವಾಯತು ಮತ್ತಿತರ ಚಟುವಟಿಕೆಗಳನ್ನು ನಡೆಸುತ್ತಿದೆ. ಹಂತಹಂತವಾಗಿ ಅಲ್ಲಿ ಸುಮಾರು 40,000 ಯೋಧರನ್ನು ಚೀನ ಜಮಾವಣೆಗೊಳಿಸಿದೆ. ಹಾಗಾಗಿ, ಚೀನ ಸೇನೆಯ ಚಲನವಲನಗಳನ್ನು ಅವಲೋಕಿಸಲು ಉಪಗ್ರಹಗಳ ನೆರವು ಬೇಕಿದೆ ಎಂದು ರಕ್ಷಣಾ ಸಂಸ್ಥೆಗಳು ವಿವರಿಸಿವೆ ಎಂದು “ಎಎನ್‌ಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಚೀನಕ್ಕೆ ತಾಕೀತು: ಮತ್ತೂಂದೆಡೆ, ಪೂರ್ವ ಲಡಾಖ್‌ನ ಗಡಿ ರೇಖೆಯ ಪ್ರಾಂತ್ಯಗಳಿಂದ ಚೀನ ಸರಕಾರ ತನ್ನ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಂಡರಷ್ಟೇ, ತಾನು ತನ್ನ ಸೇನೆಯನ್ನು ಹಿಂಪಡೆಯುವುದಾಗಿ ಭಾರತ, ಚೀನಕ್ಕೆ ಖಡಕ್ಕಾಗಿ ಹೇಳಿದೆ. ಪೂರ್ವ ಲಡಾಖ್‌ನಲ್ಲಿ ಗಡಿ ರೇಖೆಯ ಬಳಿಯವರೆಗೆ ಬಂದು ವಿವಾದಿತ ಭೂ ಪ್ರದೇಶಗಳನ್ನು ತನ್ನ ವಶಕ್ಕೆ ಹವಣಿಸುವ ಪ್ರಯತ್ನವನ್ನು ಚೀನ ಕೈಬಿಡಬೇಕು.ನೀವು ಹಿಂದೆ ಸರಿದರಷ್ಟೇ ನಾವೂ ಹಿಂದೆ ಸರಿಯುತ್ತೇವೆ ಎಂದು ಕಡ್ಡಿ ತುಂಡು ಮಾಡಿದಂತೆ ಉತ್ತರಿಸಿದೆ.

ಹಲವಾರು ದಿನಗಳಿಂದ ನಡೆಯುತ್ತಿರುವ ಭಾರತ-ಚೀನ ಸೇನಾಧಿಕಾರಿಗಳ ಮಾತುಕತೆಯ ಅಂಗವಾಗಿ ಇತ್ತೀಚೆಗೆ ನಡೆದ ಸಭೆಯಲ್ಲಿ ಚೀನದ ಅಧಿಕಾರಿಗಳು, ಪಾಂಗೊಂಗ್‌ ಸರೋವರದ ಉತ್ತರ ಭಾಗದಲ್ಲಿರುವ ಫಿಂಗರ್‌ 3 ವಲಯದಲ್ಲಿ ಭಾರತೀಯ ಸೇನೆ ನಿರ್ಮಿಸಿಕೊಂಡಿರುವ ಧನ್‌ಸಿಂಗ್‌ ಥಾಪಾ ಪೋಸ್ಟ್‌ ಅನ್ನು ತೆರವುಗೊಳಿಸಬೇಕೆಂದು ಭಾರತದ ಅಧಿಕಾರಿಗಳನ್ನು ಕೇಳಿಕೊಂಡಿದ್ದಾರೆ. ಆದರೆ, ಇದಕ್ಕೆ ಸೊಪ್ಪು ಹಾಕದ ಅಧಿಕಾರಿಗಳು ಆ ಪೋಸ್ಟ್‌ ತೊರೆಯುವುದು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಖಡಕ್‌ ಉತ್ತರ: ಬುಧವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಚೀನ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ವಿಚಾರವನ್ನು ಪ್ರ ಸ್ತಾಪ ಮಾಡುವ ವ್ಯರ್ಥ ಪ್ರಯತ್ನ ನಡೆಸಿದೆ. ಇದಕ್ಕೆ ಗುರುವಾರದಂದು ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ಇಲಾಖೆ, “ಚೀನ ಇಂಥ ಅಚಾತುರ್ಯಗಳನ್ನು ಕೆಲ ದಿನಗಳಿಂದ ಮಾಡುತ್ತಲೇ ಬಂದಿದೆ. ಆದರೆ, ಅದಕ್ಕೆ ಜಾಗತಿಕ ಮಟ್ಟದಲ್ಲಿ ಸೂಕ್ತವಾದ ಬೆಂಬಲ ಸಿಗುತ್ತಿಲ್ಲ. ಆದರೂ, ಚೀನ ವ್ಯರ್ಥ ಪ್ರಯತ್ನ ಮುಂದುವರಿಸುತ್ತಲೇ ಇದೆ ಎಂದಿದೆ.

ಏನಿದು ಧನ್‌ಸಿಂಗ್‌ ಪೋಸ್ಟ್‌?
ಫಿಂಗರ್‌ 3ನಲ್ಲಿ ಭಾರತೀಯ ಸೇನೆ ಧನ್‌ ಸಿಂಗ್‌ ಪೋಸ್ಟ್‌ ಎಂಬ ಸೇನಾ ವೀಕ್ಷಣಾ ಗೋಪುರ ನಿರ್ಮಿಸಿದೆ. ಅದನ್ನು ತೆರವುಗೊಳಿಸಬೇಕು ಎಂದು ಚೀನ ಪಟ್ಟು ಹಿಡಿದಿದೆ. ಆದರೆ, ಹಿಂದಿನ ಒಪ್ಪಂದದ ಪ್ರಕಾರ, ಫಿಂಗರ್‌ 3 ಪ್ರಾಂತ್ಯವು ಭಾರತ-ಚೀನ ಗಡಿ ರೇಖೆಗೆ ಹತ್ತಿರದಲ್ಲಿದ್ದು ಅದು ಭಾರತದ ನೆಲದೊಳಗಿನ ಪ್ರದೇಶ. ಹಾಗಾಗಿ, ಅಲ್ಲಿ ಪೋಸ್ಟ್‌ ನಿರ್ಮಿಸಿರುವುದು ಸಹಜವಾಗಿಯೇ ಇದೆ ಎಂದು ಭಾರತ ವಾದ ಮಂಡಿಸಿದೆ. ಆದರೆ, ಚೀನ ಅದನ್ನು ಒಪ್ಪುತ್ತಿಲ್ಲ.

ಟಾಪ್ ನ್ಯೂಸ್

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.