ಬಿಜೆಪಿ ಸಚಿವರ ಬ್ಲಾಕ್ ಮೇಲ್: ಹಿರಿಯ ಪತ್ರಕರ್ತ ಅರೆಸ್ಟ್
Team Udayavani, Oct 27, 2017, 12:34 PM IST
ಹೊಸದಿಲ್ಲಿ : ಬಿಜೆಪಿ ಸಚಿವರೊಬ್ಬರಿಗೆ ಬ್ಲಾಕ್ ಮೇಲ್ ಮಾಡಿ ಸುಲಿಗೆಗೆ ಯತ್ನಿಸಿದ ಪ್ರಕರಣದಲ್ಲಿ ಹಿರಿಯ ಪತ್ರಕರ್ತ ವಿನೋದ್ ವರ್ಮಾ ಅವರನ್ನು ಛತ್ತೀಸ್ಗಢ ಪೊಲೀಸರು ಇಂದು ಶುಕ್ರವಾರ ಗಾಜಿಯಾಬಾದ್ನ ಇಂದಿರಾಪುರಂ ನಲ್ಲಿ ಬಂಧಿಸಿ ನಸುಕಿನ 3.30ರ ವೇಳೆಗೆ ಠಾಣೆಗೆ ಒಯ್ದು ಹಲವು ತಾಸುಗಳ ಕಾಲ ಪ್ರಶ್ನಿಸಿದರು.
ವರ್ಮಾ ಅವರ ಬಳಿ ಛತ್ತೀಸ್ಗಢ ಸಚಿವರ ಕುರಿತಾದ ಹಲವಾರು ಸಿಡಿಗಳು ಇದ್ದವು ಎಂದು ಪೊಲಿಸರು ಹೇಳಿದ್ದಾರೆ. ಸಚಿವರಿಗೆ ನಿಕಟವಿರುವ ಯಾರೋ ಒಬ್ಬರು ವರ್ಮಾ ವಿರುದ್ಧ ದೂರು ದಾಖಲಿಸಿದ್ದರು. ವರ್ಮಾ ಅವರ ಬಳಿಯಿದ್ದ ಹಲವಾರು ಸಿಡಿಗಳು, ಪೆನ್ ಡ್ರೈವ್ಗಳು ಮತ್ತು ಇತರ ಕೆಲವು ದಾಖಲೆಪತ್ರಗಳನ್ನು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರ್ಮಾ ಅವರ ಬಂಧನ ಛತ್ತೀಸ್ಗಢ ಮತ್ತು ಉ.ಪ್ರ. ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ನಡೆದಿದೆ. ವರ್ಮಾ ಅವರು ಈ ಹಿಂದೆ ಅಮರ್ ಉಜಾಲಾ ಮತ್ತು ಬಿಬಿಸಿ ಜತೆಗೆ ಕೆಲಸ ಮಾಡಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್