ವಿಕ್ರಾಂತ ಭೂಷಣ; ಸೆ. 2ರಂದು ಐಎನ್‌ಎಸ್‌ ವಿಕ್ರಾಂತ್‌ ಲೋಕಾರ್ಪಣೆ

ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಚಾಲನೆ; ಸ್ವದೇಶೀಯವಾಗಿ ನಿರ್ಮಿತವಾಗಿರುವ ಸಮರನೌಕೆ

Team Udayavani, Aug 28, 2022, 7:00 AM IST

thumb news vikrant

ಮಧುವಣಗಿತ್ತಿಯಂತೆ ಆಕೆ ಸಿಂಗಾರಗೊಳ್ಳುತ್ತಿದ್ದಾಳೆ. ಸಾವಿರಾರು ಜನ ಆಕೆಯನ್ನು ಸಿಂಗರಿಸುವಲ್ಲಿ ಮಗ್ನರಾಗಿದ್ದಾರೆ. ಅಂದ ಹಾಗೆ ಸಮುದ್ರದ ರಾಣಿ “ಐಎನ್‌ಎಸ್‌ ವಿಕ್ರಾಂತ್‌’ 75ನೇ ಸ್ವಾತಂತ್ರ್ಯದ “ಅಮೃತ’ ಘಳಿಗೆಯಲ್ಲಿ ಭಾರತೀಯ ನೌಕಾಪಡೆಯ ಕೈಹಿಡಿಯಲಿದ್ದಾಳೆ. ಇದಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗಲಿದ್ದಾರೆ. ಆ ಬಂಧನಕ್ಕೆ ಲಗುಬಗೆಯಿಂದ ಸಜ್ಜುಗೊಳ್ಳುತ್ತಿರುವ ಐಎನ್‌ಎಸ್‌ ವಿಕ್ರಾಂತ್‌ ಕೊಚ್ಚಿ ಬಂದರಿನಲ್ಲಿ ಒಂದು ತೇಲುವ ದ್ವೀಪದಂತೆ ಕಂಗೊಳಿಸುತ್ತಿದೆ. ಈ ಸಂಭ್ರಮಕ್ಕೆ ಉದಯವಾಣಿಯೂ ಸಾಕ್ಷಿಯಾಯಿತು.

ಭಾರತಕ್ಕೆ ಶಕ್ತಿ
ಐಎನ್‌ಎಸ್‌ ವಿಕ್ರಾಂತ್‌ ಅನ್ನು ಹೆಚ್ಚುಕಡಿಮೆ ಸಂಪೂರ್ಣವಾಗಿ ದೇಶೀಯವಾಗಿಯೇ ನಿರ್ಮಿಸಲಾಗಿದೆ. ಇದರ ನಿರ್ಮಾಣ ಜವಾ ಬ್ದಾರಿ ಹೊತ್ತದ್ದು ಕೊಚ್ಚಿ ಶಿಪ್‌ಯಾರ್ಡ್‌ ಕಂಪೆ‌ನಿ. 2009ರ ಫೆಬ್ರವರಿಯಲ್ಲಿ ಇದರ ಕೆಲಸ ಆರಂಭವಾಗಿದ್ದು, ಇತ್ತೀಚೆಗಷ್ಟೇ ಮುಗಿದಿದೆ. ಅಲ್ಲದೆ ಹಲವಾರು ಸುತ್ತುಗಳ ಪರೀಕ್ಷೆ ನಡೆಸಿ, ಬಳಿಕ ಭಾರತೀಯ ನೌಕಾಪಡೆಗೆ ಹಸ್ತಾಂತರಿಸ ಲಾಗುತ್ತಿದೆ. ಈ ಸಮರ ನೌಕೆಯ ನಿರ್ಮಾಣದ ಬಗ್ಗೆ ಸಂಪೂರ್ಣ ಹರ್ಷಗೊಂಡಿರುವ ಕೊಚ್ಚಿ ಶಿಪ್‌ಯಾರ್ಡ್‌ ಮುಖ್ಯಸ್ಥ ಮತ್ತು ಎಂಡಿ ಮಧು ನಾಯರ್‌, ಭಾರತವೂ ಎಲೈಟ್‌ ದೇಶಗಳ ಪಟ್ಟಿಗೆ ಸೇರಿದೆ ಎಂದಿದ್ದಾರೆ. ಸದ್ಯ ಜಗತ್ತಿನಲ್ಲಿ ಕೇವಲ ಐದರಿಂದ ಆರು ದೇಶಗಳು ಮಾತ್ರ ಇಂಥ ಸಮರನೌಕೆಗಳನ್ನು ನಿರ್ಮಾಣ ಮಾಡಿಕೊಳ್ಳುವ ಶಕ್ತಿಹೊಂದಿವೆ. ಈ ಸಾಲಿಗೆ ಭಾರತವೂ ಸೇರಿದೆ ಎಂದು ತಿಳಿಸಿದ್ದಾರೆ.

18 ಮಹಡಿ
ಸುಮಾರು 18 ಮಹಡಿಗಳ ಈ ಯುದ್ಧ ವಿಮಾನವಾಹಕ ನೌಕೆಯಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ಕಂಪಾರ್ಟ್‌ ಮೆಂಟ್‌ಗಳಿವೆ. ಅವುಗಳಲ್ಲಿ ಕೆಫೆಟೇರಿಯ, ಗ್ರಂಥಾ ಲಯ, ಎರಡು ಎಟಿಎಂಗಳು, ಜಿಮ್‌, ರನಿಂಗ್‌ ಟ್ರ್ಯಾಕ್‌, ಐದು ಲಿಫ್ಟ್ಗಳೂ ಇವೆ.

ಏಕಕಾಲಕ್ಕೆ ಎರಡು ಟೇಕ್‌ಆಫ್
ಓರೆಯಾದ ರನ್‌ವೇಯಲ್ಲೇ 100 ಮೀಟರ್‌ ಉದ್ದದ ಶಾರ್ಟ್‌ ಮತ್ತು 120 ಮೀಟರ್‌ಗಿಂತ ಉದ್ದದ ಲಾಂಗ್‌ ಟೇಕ್‌ಆಫ್ಗಳಿವೆ. ಒಂದರ ಹಿಂದೊಂದು ಒಟ್ಟಿಗೆ ಎರಡು ಯುದ್ಧ ವಿಮಾನಗಳನ್ನು ಇಲ್ಲಿ ಟೇಕ್‌ಆಫ್ ಮಾಡಬಹುದು. ಮಿಗ್‌- 29, ಕಾಮೊವ್‌- 31, ಎಂಎಚ್‌- 60 ಆರ್‌ ಹೀಗೆ ವಿವಿಧ ಪ್ರಕಾರದ 36 ಯುದ್ಧ ವಿಮಾನಗಳನ್ನು ಟೇಕ್‌ಆಫ್ ಮಾಡಬಹುದಾಗಿದೆ.

ವೈದ್ಯಕೀಯ ಸೌಲಭ್ಯ
ಕೆಳಗಿನ ಮಹಡಿಯಲ್ಲಿ ಮೆಡಿಕಲ್‌ ಕಾಂಪ್ಲೆಕ್ಸ್‌ ತೆರೆಯಲಾಗಿದೆ. ಇಲ್ಲಿ 16 ಹಾಸಿಗೆಗಳ ಸಾಮರ್ಥ್ಯದ ತುರ್ತು ನಿಗಾ ಘಟಕ, ಶಸ್ತ್ರಚಿಕಿತ್ಸಾ ಘಟಕ, ಫಿಸಿಯೋಥೆರಪಿ, ಎಕ್ಸ್‌ರೇ, ಐವರು ತಜ್ಞ ವೈದ್ಯರು, ದಂತ ವೈದ್ಯರು, ಸೇರಿದಂತೆ ಬೆಂಗಳೂರಿನಂತಹ ಒಂದು ನಗರದಲ್ಲಿ ಇರಬೇಕಾದ ಹೈಟೆಕ್‌ ವೈದ್ಯಕೀಯ ಸೌಲಭ್ಯಗಳೆಲ್ಲ­ವನ್ನೂ ಅಲ್ಲಿ ಕಲ್ಪಿಸಲಾಗಿದೆ. ಅಂದಹಾಗೆ, ಸಿಟಿ ಸ್ಕ್ಯಾನ್‌ ಕೂಡ ಅಲ್ಲಿದ್ದು, ಈ ಸೌಲಭ್ಯವನ್ನು ಒಳಗೊಂಡ ಮೊದಲ ಯುದ್ಧವಿಮಾನವಾಹಕ ನೌಕೆ ಇದಾಗಿದೆ.

ಏಕತಾ ಪ್ರತಿಮೆಗಿಂತ ಎತ್ತರ
ಗುಜರಾತಿನ ನರ್ಮದಾ ನದಿ ಮಧ್ಯೆ ನಿರ್ಮಿಸಲಾದ ಅತೀ ಎತ್ತರದ ಪ್ರತಿಮೆ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪ್ರತಿಮೆಗಿಂತ ಐಎನ್‌ಎಸ್‌ ವಿಕ್ರಾಂತ್‌ ಎತ್ತರದ್ದಾಗಿದೆ. ನೌಕೆಯ ಉದ್ದ 262 ಮೀಟರ್‌ ಮತ್ತು 62 ಮೀಟರ್‌ ಅಗಲವಾಗಿದೆ.

ಕನ್ನಡಿಗರ ಉಸ್ತುವಾರಿ
ದೇಶದ ಮೊದಲ ಅತಿದೊಡ್ಡ ವಿಮಾನವಾಹಕ ನೌಕೆ “ಐಎನ್‌ಎಸ್‌ ವಿಕ್ರಾಂತ್‌’ ಸದ್ಯಕ್ಕೆ ಸಾರಥ್ಯ ವಹಿಸಿರುವವರು ಅಪ್ಪಟ ಕನ್ನಡಿಗ. ಧಾರವಾಡ ಮೂಲದ ವೈಸ್‌ಅಡ್ಮಿರಲ್‌ ಎಂ.ಎ. ಹಂಪಿಹೊಳಿ ಒಟ್ಟಾರೆ ದಕ್ಷಿಣ ನೌಕೆಯ ಕಮಾಂಡರ್‌ ಆಗಿದ್ದಾರೆ. ಅದರಡಿಯಲ್ಲೇ ಕೊಚ್ಚಿ ಶಿಪ್‌ಯಾರ್ಡ್‌ ನಲ್ಲಿ ನಿರ್ಮಾಣಗೊಂಡಿರುವ ಐಎನ್‌ಎಸ್‌ ವಿಕ್ರಾಂತ್‌ ಕೂಡ ಬರುತ್ತದೆ. ಹಾಗಾಗಿ ಪರೋಕ್ಷವಾಗಿ ಇದರ ಸಾರಥ್ಯ ವಹಿಸಿದಂತಾಗಿದೆ. ಹಾಗೆಯೇ ಇದರ ರನ್‌ವೇ ನಿಯಂತ್ರಣವೂ ಕನ್ನಡಿಗರದ್ದೇ ಆಗಿದೆ. ಅಂದರೆ ಯುದ್ಧವಿಮಾನಗಳು 250 ಕಿ.ಮೀ. ವೇಗದಲ್ಲಿ ಬಂದು ರನ್‌ವೇಗೆ ಅಪ್ಪಳಿಸುತ್ತಿದ್ದಂತೆ ಅವುಗಳ ವೇಗಕ್ಕೆ ಕಡಿವಾಣ ಹಾಕಲು ವಿಶೇಷವಾದ ಲೋಹದ ವೈರ್‌ಗಳನ್ನು ಅಳವಡಿಸಲಾಗಿರುತ್ತದೆ. ಅವುಗಳ ಮೂಲಕ “ಹಕ್ಕಿ’ಗಳು ಬಂಧಿಸಲ್ಪಡುತ್ತವೆ. ಈ ರನ್‌ವೇಯ ಉಸ್ತುವಾರಿ ಅಪ್ಪಟ ಕನ್ನಡಿಗ ಹಾಗೂ ಬೆಂಗಳೂರು ಮೂಲದ ಲೆಫ್ಟಿನೆಂಟ್‌ ಕಮಾಂಡರ್‌ ಸ್ಕಂದ ಗೌತಮ್‌ ಎನ್ನುವುದು ವಿಶೇಷ.

ಶಿಪ್‌ಯಾರ್ಡ್‌ನ ಮಗಳು!
ಸಾಮಾನ್ಯವಾಗಿ ಸಮರನೌಕೆಗಳಿಗೆ ಪುರುಷರ ಹೆಸರನ್ನೇ ಇಡಲಾಗುತ್ತದೆ. ಆದರೆ ಸಮರನೌಕೆಗಳನ್ನು ಮಹಿಳೆಯ ರೂಪದಲ್ಲೇ ಕರೆಯಲಾಗುತ್ತದೆ. ಅಂದರೆ ನಾವು ಭೂಮಿಯನ್ನು ತಾಯಿ ಎಂದು ಕರೆದಂತೆ. ಈಗಿನ ಐಎನ್‌ಎಸ್‌ ವಿಕ್ರಾಂತ್‌, ಕೊಚ್ಚಿ ಶಿಪ್‌ಯಾರ್ಡ್‌ಗೆ ಒಂದು ರೀತಿ ಮಗಳಿದ್ದ ಹಾಗೆ. ನಾವು ತವರಿನಿಂದ ಕಳುಹಿಸುತ್ತಿದ್ದೇವೆ ಎಂದೂ ಮಧು ನಾಯರ್‌ ಹೇಳಿದ್ದಾರೆ. ಅಲ್ಲದೆ ಈ ಹಸ್ತಾಂತರ ಪ್ರಕ್ರಿಯೆ ನಮಗೊಂದು ರೀತಿಯ ವಿವಾಹ ಕಾರ್ಯಕ್ರಮವಿದ್ದಂತೆ ಎಂದೂ ಸಂತಸ ವ್ಯಕ್ತಪಡಿಸಿದ್ದಾರೆ.

-ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.