ಬರಲಿದೆ ಮೂತ್ರ ಬ್ಯಾಂಕ್!
Team Udayavani, Nov 15, 2017, 6:00 AM IST
ನಾಗ್ಪುರ: ಮಾನವರ ಮೂತ್ರಕ್ಕೊಂದು ಬ್ಯಾಂಕ್ ಸ್ಥಾಪಿಸಿದರೆ ಹೇಗಿರುತ್ತದೆ? ಎಂಥ ಮಾತು ಎಂದು ಬೈದುಕೊಳ್ಳಬೇಡಿ. ಇಂಥ ಒಂದು ಐಡಿಯಾ ಕೊಟ್ಟದ್ದೇ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ. ಮಹಾರಾಷ್ಟ್ರದ ನಾಗ್ಪುರದಲ್ಲಿ ಮಾತನಾಡಿದ ಅವರು “ಪ್ರತಿಯೊಂದು ತಾಲೂಕುಗಳಲ್ಲಿಯೂ ಮೂತ್ರ ಬ್ಯಾಂಕ್ ಸ್ಥಾಪಿಸಬೇಕು. ಈ ಮೂಲಕ ರೈತರಿಗೆ ಅಗತ್ಯವಿರುವ ಯೂರಿಯಾವನ್ನು ಉತ್ಪಾದಿಸಿ ನೀಡಲು ಅನುಕೂಲವಾಗುತ್ತದೆ. ಇಂಥ ಕ್ರಮದಿಂದಾಗಿ ವಿದೇಶಗಳಿಂದ ಯೂರಿ ಯಾವನ್ನು ಆಮದು ಮಾಡಿ ಕೊಳ್ಳುವುದನ್ನು ಕಡಿಮೆ ಮಾಡಬಹುದು’-ಹೀಗೆಂದು ಹೇಳಿದ್ದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ. ನಾಗ್ಪುರ ಸಮೀಪದ ಧಪೇವಾಡದಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಇದೊಂದು ಕೇವಲ ಪ್ರಾಥಮಿಕ ಹಂತದ ಯೋಜನೆ. ಅದಕ್ಕಾಗಿ ಸ್ವೀಡನ್ನ ವಿಜ್ಞಾನಿಗಳ ಜತೆ ಚರ್ಚೆ ನಡೆಸಲಾಗುತ್ತಿದೆ. ಮಾನವರ ಮೂತ್ರದಲ್ಲಿ ಯೂರಿಯಾ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ. ಅದು ವ್ಯರ್ಥವಾಗಿ ಹೋಗು ತ್ತಿದೆ. ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು ಆದ್ಯತೆಯ ವಿಚಾರ. ರಂಜಕ ಮತ್ತು ಪೊಟಾಸಿಯಂಗೆ ಪರ್ಯಾ ಯವಾಗಿ ಸಾವಯವ ವಸ್ತುಗಳು ಇವೆ. ಅದಕ್ಕೆ ನೈಟ್ರೋಜನ್ ಅನ್ನು ಸೇರಿಸಿದರೆ ಉತ್ತಮವಾಗಲಿದೆ’ ಎಂದಿದ್ದಾರೆ.
ಸರಕಾರದ ವತಿಯಿಂದ ರೈತರಿಗೆ ಮೂತ್ರ ಸಂಗ್ರಹಿಸಲು ಹತ್ತು ಲೀಟರ್ನ ಕ್ಯಾನ್ ನೀಡಬೇಕು. ಪ್ರತಿ ಲೀಟರ್ಗೆ 1 ರೂ.ನಂತೆ ನೀಡಿದರೆ ಅದು ಪ್ರೋತ್ಸಾಹದಾಯಕವೂ ಆಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಜಾರಿ ತರಬಹುದು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ