ಪಶ್ಚಿಮ ಬಂಗಾಲದಲ್ಲಿ ಸಿಡಿಲಿಗೆ ಏಳು ಸಾವು
Team Udayavani, May 17, 2018, 6:30 AM IST
ಕೋಲ್ಕತಾ/ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ಸಿಡಿಲು ಬಡಿದ ಪರಿಣಾಮವಾಗಿ ವಿವಿಧ ಜಿಲ್ಲೆಗಳಲ್ಲಿ ಏಳು ಮಂದಿ ಅಸುನೀಗಿ, 9ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ನಾಡಿಯಾ ಜಿಲ್ಲೆಯಲ್ಲಿ ಸಿಡಿಲು ಸಹಿತ ಮಳೆಯಾಗಿದ್ದರಿಂದ ನಾಲ್ವರು ಅಸುನೀಗಿದ್ದಾರೆ. ಬಂಕುರ ಜಿಲ್ಲೆಯಲ್ಲಿ ಸಿಡಿಲು ಅಪ್ಪಳಿಸಿದ್ದರಿಂದ ರೈತ ಕೊನೆಯುಸಿರೆಳೆದಿದ್ದಾನೆ. ಪಶ್ಚಿಮ ಬಂಗಾಲದಲ್ಲಿ ಮಳೆ, ಸಿಡಿಲಿನಿಂದಾಗಿ ಇದುವರೆಗೆ 25 ಮಂದಿ ಅಸುನೀಗಿದ್ದಾರೆ. ಇದೇ ವೇಳೆ ಮುಂದಿನ 72 ಗಂಟೆಗಳ ವರೆಗೆ ದಿಲ್ಲಿ ಸೇರಿದಂತೆ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಧೂಳು ಮಿಶ್ರಿತಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದೇ ವೇಳೆ ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಬೆಳಗ್ಗೆ ಬೀಸಿದ ಗಾಳಿಗೆ ಒಬ್ಬ ಅಸುನೀಗಿದ್ದಾನೆ.