ವಘೇಲಾ ಜನ ವಿಕಲ್ಪ ತೃತೀಯ ರಂಗ; ಬಿಜೆಪಿ ಕಾಂಗ್ರೆಸ್ಗೆ ಸಡ್ಡು ?
Team Udayavani, Sep 19, 2017, 3:31 PM IST
ಅಹ್ಮದಾಬಾದ್ : ವಿಧಾನಸಭಾ ಚುನಾವಣೆಯತ್ತ ಮುಖ ಮಾಡಿರುವ ಗುಜರಾತ್ನಲ್ಲಿ ಇದೀಗ ಪ್ರಮುಖ ತೃತೀಯ ರಂಗವೊಂದು ರೂಪುಗೊಳ್ಳುವ ಸಾಧ್ಯತೆಗಳು ನಿಚ್ಚಳವಾಗುತ್ತಿವೆ.
ಕಾಂಗ್ರೆಸ್ ಬಂಡುಕೋರ ಶಂಕರ್ ಸಿಂಗ್ ವಘೇಲಾ ಅವರು ಇಂದು ಮಂಗಳವಾರ ತನ್ನ ಬೆಂಬಲಿಗರು ಹುಟ್ಟು ಹಾಕಿರುವ ಜನ ವಿಕಲ್ಪ ಎಂಬ ಹೆಸರಿನ ರಾಜಕೀಯ ಪಕ್ಷವನ್ನು ತಾನು ಸೇರಿರುವುದಾಗಿ ಪ್ರಕಟಿಸಿದ್ದಾರೆ.
“ಗುಜರಾತ್ನಲ್ಲಿ ಯಾವುದೇ ಪರ್ಯಾಯ ರಾಜಕೀಯ ಶಕ್ತಿ ಕೆಲಸ ಮಾಡದು ಎಂಬುದು ಕೇವಲ ಒಂದು ಮಿಥ್ಯೆ’ ಎಂದು 77ರ ಹರೆಯದ ಹಿರಿಯ ನಾಯಕ ವಘೇಲಾ ಅವರು ಕಿಕ್ಕಿರಿದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಗುಜರಾತ್ನ ಈ ಮೂರನೇ ರಂಗವು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ತನ್ನೊಂದಿಗೆ ಹೆಸರು ನೋಂದಾಯಿಸಿಕೊಳ್ಳುವ ಪಕ್ಷೇತರ ಅಭ್ಯರ್ಥಿಗಳನ್ನು ಬೆಂಬಲಿಸುವುದು ಎಂದು ವಘೇಲಾ ಹೇಳಿದರು.
ಗುಜರಾತ್ ಜನರು ಬಿಜೆಪಿ ಮತ್ತು ಕಾಂಗ್ರೆಸ್ನಿಂದ ಬೇಸತ್ತು ಹೋಗಿದ್ದಾರೆ; ಹಾಗಾಗಿ ಅವರು ಪರ್ಯಾಯ ಶಕ್ತಿಯನ್ನು ಹೊಂದಲು ಕಾತರದಿಂದ ಇದ್ದಾರೆ ಎಂದು ವಘೇಲಾ ಹೇಳಿದರು.
ವಘೇಲಾ ಅವರು ಕಾಂಗ್ರೆಸ್ ತಮ್ಮನ್ನು ಉಚ್ಚಾಟಿಸುವ ಒಂದು ದಿನ ಮೊದಲು ಗುಜರಾತ್ ವಿಧಾನಸಭೆಯಲ್ಲಿನ ತಮ್ಮ ವಿಪಕ್ಷ ನಾಯಕನ ಹುದ್ದೆಗೆ ಕಳೆದ ಜು.24ರಂದು ರಾಜೀನಾಮೆ ನೀಡಿ ಹೊರ ಬಂದಿದ್ದರು. ವಘೇಲಾ ಅವರ ರಾಜೀನಾಮೆಯಿಂದ ಪಕ್ಷದಲ್ಲಿ ಬಂಡಾಯ ಉಂಟಾಗಿ ಇನ್ನೂ ಏಳು ಮಂದಿ ಕೈ ಶಾಸಕರು ಉಚ್ಚಾಟನೆಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ