ಕುಮಾರ ಗುಪ್ತನ ಕಾಲದ ಶಂಖಲಿಪಿ ಶಾಸನ ಉ.ಪ್ರ.ದಲ್ಲಿ ಪತ್ತೆ
Team Udayavani, Sep 9, 2021, 9:00 PM IST
ಆಗ್ರಾ: ಭಾರತದ ಪುರಾತತ್ವ ಇಲಾಖೆ (ಎಎಸ್ಐ) ಮಹತ್ವದ ಸಂಶೋಧನೆಯೊಂದನ್ನು ಮಾಡಿದೆ.
5ನೇ ಶತಮಾನದ ಗುಪ್ತ ಸಾಮ್ರಾಜ್ಯಕ್ಕೆ ಸೇರಿದ ಶಂಖಲಿಪಿ ಶಾಸನವೊಂದನ್ನು ಉತ್ತರಪ್ರದೇಶದ ಎಟಾಹ ಜಿಲ್ಲೆಯ ಬಿಲ್ಸಢ ಎಂಬ ಹಳ್ಳಿಯಲ್ಲಿ ಪತ್ತೆ ಹಚ್ಚಿದೆ. ಇದು ದೇವಸ್ಥಾನದ ಮೆಟ್ಟಿಲೊಂದರಲ್ಲಿ ಕಂಡಿದೆ.
ಎಎಸ್ಐನಿಂದ ಸಂರಕ್ಷಿಸಲ್ಪಡುತ್ತಿರುವ ಈ ದೇವಸ್ಥಾನವನ್ನು ಸ್ವಚ್ಛ ಮಾಡುವಾಗ ಈ ಅಪರೂಪದ ಲಿಪಿ ಕಾಣಿಸಿದೆ. ಅದರಲ್ಲಿ ಶ್ರೀ ಮಹೇಂದ್ರಾ ದಿತ್ಯ ಎಂದು ಬರೆಯಲಾಗಿದೆ. ಅದು ಆ ಕಾಲದ ಗುಪ್ತ ಚಕ್ರವರ್ತಿ ಕುಮಾರಗುಪ್ತನಿಗೆ ಸೇರಿದೆ ಎಂದು ಎಎಸ್ಐ ತಿಳಿಸಿದೆ.
ಈ ಲಿಪಿಗೊಂದು ವಿಶೇಷವಿದೆ. ಅದರಲ್ಲಿನ ಅಕ್ಷರಗಳು ಶಂಖವನ್ನು ಹೋಲುತ್ತವೆ. ಇದು ಬ್ರಾಹ್ಮೀ ಲಿಪಿಯಿಂದ ಬಂದಿರಬಹುದೆಂದು ಅಂದಾಜಿಸಲಾಗಿದೆ. ಕುಮಾರ ಗುಪ್ತನ ಕಾಲಕ್ಕೆ ಸೇರಿದ ಕಲ್ಲಿನ ಕುದುರೆಯೊಂದರಲ್ಲೂ ಇಂತಹದ್ದೇ ಶಾಸನ ಈ ಹಿಂದೆ ಪತ್ತೆಯಾಗಿತ್ತು.
ಇದನ್ನೂ ಓದಿ:ನೀಟ್ ಪರೀಕ್ಷೆ ಹಿನ್ನೆಲೆ: ಹುಬ್ಬಳ್ಳಿ- ಗಂಗಾವತಿ ರೈಲು ಸಂಚಾರ ಸಮಯ ಬದಲಾವಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
MUST WATCH
ಹೊಸ ಸೇರ್ಪಡೆ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ