ಜೆಡಿಯು 2 ಹೋಳಾಗಿದೆ ಎಂದ ಶರದ್ ಯಾದವ್
Team Udayavani, Aug 11, 2017, 6:55 AM IST
ಪಟ್ನಾ: ಬಿಹಾರದಲ್ಲಿನ ಮಹಾಘಟಬಂಧನ್ ಒಡೆದ ಬಳಿಕ ಸಿಎಂ ನಿತೀಶ್ ಕುಮಾರ್ ವಿರುದ್ಧ ತೀವ್ರ ಅಸಮಾಧಾನ ಗೊಂಡಿರುವ ಪಕ್ಷದ ನಾಯಕ ಶರದ್ ಯಾದವ್ ಅವರು ಇದೀಗ ನಿತೀಶ್ರಿಂದ ದೂರವಾಗುವ ಸುಳಿವು ನೀಡಿದ್ದಾರೆ.
ಗುರುವಾರ ಸೋನೆಪುರ್ನಲ್ಲಿ ಬಹುಜನ್ ಚೌಪಾಲ್ ಯಾತ್ರೆಯಲ್ಲಿ ಪಾಲ್ಗೊಂಡು ನಿತೀಶ್ ವಿರುದ್ಧ ತೀಕ್ಷ್ಣ ವಾಗಿಯೇ ವಾಗ್ಧಾಳಿ ನಡೆಸಿದ್ದಾರೆ. “ಸರಕಾರಿ ಜನತಾದಳದ ಜನ ಈಗ ಮುಖ್ಯಮಂತ್ರಿ, ಸಚಿವರಾಗಿದ್ದಾರೆ. ಆದರೆ, ನೈಜ ಜನತಾದಳದ ವ್ಯಕ್ತಿಗಳು ಜನಸಾಮಾನ್ಯರಲ್ಲಿದ್ದಾರೆ’ ಎನ್ನುವ ಮೂಲಕ ಶರದ್ ಅವರು ಜೆಡಿಯು 2 ಭಾಗವಾಗಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಜತೆಗೆ, ಮಹಾಘಟ ಬಂಧನ್ ಅನ್ನು ಮುರಿಯುವ ಮೂಲಕ ನಿತೀಶ್ ಅವರು ರಾಜ್ಯದ 11 ಕೋಟಿ ಮಂದಿಯ ನಂಬಿಕೆಗೆ ದ್ರೋಹ ಬಗೆದಿ ದ್ದಾರೆ ಎಂದೂ ಹೇಳಿದ್ದಾರೆ.
ಶರದ್ ಅವರು ರಾಜ್ಯಾದ್ಯಂತ ಪ್ರವಾಸ ಬೆಳೆಸಿ, ಆರ್ಜೆಡಿ-ಜೆಡಿಯು ಮೈತ್ರಿ ಕಡಿತ ಮತ್ತು ಹೊಸ ಸರಕಾರದ ಕುರಿತು ಜನರ ಅಭಿಪ್ರಾಯ ಪಡೆಯಲಿ ದ್ದಾರೆ. ಇದೇ ವೇಳೆ, ಶರದ್ಗೆ ಪ್ರತಿಕ್ರಿಯಿಸಿರುವ ಜೆಡಿಯು, ಮಿತಿಮೀರಿ ವರ್ತಿಸಬೇಡಿ ಎಂದು ಎಚ್ಚರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ