ನಾನು ಸಾಮಾನ್ಯ,ಮೂರ್ಖ ಜೀವಿ; ಸಾಧ್ವಿಯೊಂದಿಗೆ ಹೋಲಿಕೆ ಬೇಡ
Team Udayavani, Apr 28, 2019, 11:04 AM IST
ಭೂಪಾಲ್ : ನಾನು ಸಾಮಾನ್ಯಳು ಮತ್ತು ಮೂರ್ಖ ಜೀವಿ, ನನ್ನನ್ನು ಸಾಧ್ವಿಪ್ರಜ್ಞಾ ಸಿಂಗ್ ಅವರೊಂದಿಗೆ ಹೋಲಿಕೆ ಮಾಡಬೇಡಿ ಎಂದು ಕೇಂದ್ರ ಸಚಿವೆ ಉಮಾ ಭಾರತಿ ಹೇಳಿಕೆ ನೀಡಿದ್ದಾರೆ.
ಭೂಪಾಲ್ನಿಂದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರಜ್ಞಾ ಸಿಂಗ್ ಅವರು ಭವಿಷ್ಯದಲ್ಲಿ ನಿಮ್ಮನ್ನು ಪ್ರತಿನಿಧಿಸುತ್ತಾರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉಮಾ ಭಾರತಿ ಈ ಉತ್ತರ ನೀಡಿದ್ದಾರೆ.
ಪ್ರಜ್ಞಾ ಸಿಂಗ್ ಅವರು ಮಾಹಾನ್ ಸಂತರ ಸಾಲಿಗೆ ಸೇರಿದವರು.ನನ್ನನ್ನು ಆವರೊಂದಿಗೆ ಹೋಲಿಸಬೇಡಿ ಎಂದರು.
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಾಧ್ವಿ ಅವರು ಜಾಮೀನಿನ ಮೇಲೆಬಿಡುಗಡೆಯಾಗಿದ್ದಾರೆ.