ಯುಪಿ ಜೈಲಿಗೆ  ಸ್ಥಳಾಂತರಿಸಲು ಅಬೂ ಸಲೇಂ ಪತ್ರ


Team Udayavani, Sep 14, 2017, 11:52 AM IST

656.jpg

ಮುಂಬಯಿ:1993ರ ಮುಂಬಯಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ವಿಶೇಷ ಟಾಡಾ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿ ಯಾಗಿರುವ ಅಬೂ ಸಲೇಂ ತನ್ನನ್ನು ಉತ್ತರಪ್ರದೇಶ ಜೈಲಿಗೆ ಸ್ಥಳಾಂತರಿಸುವಂತೆ  ಕೋರಿ ಸಲ್ಲಿಸಿದ್ದ  ಮನವಿಯನ್ನು ವಿಶೇಷ ಟಾಡಾ ನ್ಯಾಯಾಲಯ ತಳ್ಳಿಹಾಕಿದ ಬಳಿಕ ಇದೀಗ ಸಲೇಂ ಇದೇ ಮನವಿಯನ್ನು ಮುಂದಿಟ್ಟು ಕಾರಾಗೃಹ ಇಲಾಖೆ ಮಹಾ ನಿರ್ದೇಶಕ, ಕಾರಾಗೃಹ ಇಲಾಖೆಯ ಮಹಾನಿರೀಕ್ಷಕ ಮತ್ತು  ಟಲೋಜಾ ಜೈಲಿನ ಅಧೀಕ್ಷಕರಿಗೆ  ಪತ್ರ  ಬರೆದಿದ್ದಾನೆ. ಜೈಲಿನಲ್ಲಿನ ತನ್ನ ಸನ್ನಡತೆ ಮತ್ತು ನನ್ನ ಕುಟುಂಬ ಉತ್ತರಪ್ರದೇಶದಲ್ಲಿ ರುವುದರಿಂದ  ನನ್ನನ್ನು ಉತ್ತರಪ್ರದೇಶದ  ಜೈಲಿಗೆ ಸ್ಥಳಾಂತರಿಸುವಂತೆ  ಸಲೇಂ ಪತ್ರದಲ್ಲಿ  ಮನವಿ ಮಾಡಿಕೊಂಡಿದ್ದಾನೆ. ಉತ್ತರ ಪ್ರದೇಶದಲ್ಲಿ ನನಗೆ ಯಾರೂ ವೈರಿ ಗಳಿಲ್ಲ  ಎಂದೂ  ಆತ  ತನ್ನ  ಪತ್ರದಲ್ಲಿ  ವಿಶೇಷವಾಗಿ  ಉಲ್ಲೇಖೀಸಿದ್ದಾನೆ. 

ಈ ಹಿಂದೆ  ನ್ಯಾಯಾಲಯಕ್ಕೆ ಸಲ್ಲಿಸಿದ್ದ  ಮನವಿಯಲ್ಲಿ ಅಬೂ ಸಲೇಂ ನಾನು ಸ್ಥಳೀಯ  ಜೈಲಿನಲ್ಲಿ  ಅಭದ್ರತೆಯ ಭೀತಿಯನ್ನು ಎದುರಿಸುತ್ತಿರುವುದಾಗಿ ಹೇಳಿಕೊಂಡಿದ್ದನು. 

ಜೈಲು  ಅಧಿಕಾರಿಗಳು ನನ್ನ ವಿರುದ್ಧ  ಯಾವುದೇ  ವ್ಯತಿರಿಕ್ತವಾದ  ದೂರುಗಳನ್ನು  ನೀಡಿಲ್ಲ. ನಾನು ನ್ಯಾಯಾಂಗ ಬಂಧನದಲ್ಲಿದ್ದ  ಸಂದರ್ಭದಲ್ಲಿ  ವಿಚಾರಣಾ  ನ್ಯಾಯಾಲಯ  ನನಗೆ  ಮನೆ ಊಟ,ಟೇಬಲ್‌ ಫ್ಯಾನ್‌,ಡಂಬೆಲ್ಸ್‌ ಮತ್ತಿತರ  ಸೌಲಭ್ಯಗಳನ್ನು  ಒದಗಿಸಿತ್ತು.ಆದರೆ ಇವೆಲ್ಲವನ್ನೂ  ನಾನು  ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿದ್ದು  ಇವುಗಳಿಗೆ ಯಾವುದೇ  ಹಾನಿ ಉಂಟು ಮಾಡಿರಲಿಲ್ಲ. ನಾನು ಉತ್ತರಪ್ರದೇಶದ ಅಜಾಮ್‌ಗಢದ ಖಾಯಂ ನಿವಾಸಿಯಾಗಿದ್ದು  ಇಲ್ಲಿಯೇ ನನ್ನ  ಕುಟುಂಬದ  ಇತರೆ ಸದಸ್ಯರು ಮತ್ತು ಸಂಬಂಧಿಕರು ವಾಸವಾಗಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ  ನನ್ನನ್ನು ಉತ್ತರಪ್ರದೇಶದ ಜೈಲಿಗೆ ಸ್ಥಳಾಂತರಿಸುವಂತೆ ಅಬೂ ಸಲೇಂ ಉನ್ನತ ಪೊಲೀಸ್‌ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ  ವಿನಂತಿಸಿಕೊಂಡಿದ್ದಾನೆ. 

ಒಂದು  ವೇಳೆ ನನ್ನನ್ನು ಉತ್ತರಪ್ರದೇಶ ಜೈಲಿಗೆ ಸ್ಥಳಾಂತರಿಸಿದ್ದೇ ಆದಲ್ಲಿ ನನ್ನ ಕುಟುಂಬದ  ಸದಸ್ಯರಿಗೆ ನನ್ನ ಭೇಟಿ ಸುಲಭಸಾಧ್ಯವಾಗಲಿದೆ ಮಾತ್ರವಲ್ಲದೆ ನನ್ನ ಕಾನೂನು ಹೋರಾಟಕ್ಕೂ ಸಹಾಯಕವಾಗಲಿದೆ ಎಂದಾತ ತಿಳಿಸಿದ್ದಾನೆ.

ಟಾಪ್ ನ್ಯೂಸ್

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-

ಕಂಗನಾ ವಿರುದ್ಧ ಪೋಸ್ಟ್: ಕೈ ನಾಯಕಿಗೆ‌ ಟಿಕೆಟ್‌ ಡೌಟ್‌

14-

Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್‌ ಬಿಜೆಪಿಗೆ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

15-

ಕಂಗನಾ ವಿರುದ್ಧ ಪೋಸ್ಟ್: ಕೈ ನಾಯಕಿಗೆ‌ ಟಿಕೆಟ್‌ ಡೌಟ್‌

14-

Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್‌ ಬಿಜೆಪಿಗೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.