ಮುಂಬಯಿಯಲ್ಲಿ ಗೋಶಾಲೆ: ಬಿಜೆಪಿ ಯೋಜನೆಗೆ ಶಿವಸೇನೆ ವಿರೋಧ!


Team Udayavani, Jul 22, 2017, 3:29 PM IST

98744.jpg

ಮುಂಬಯಿ: ನಗರದೊಳಗೆ  ಗೋಶಾಲೆಗಳನ್ನು ತೆರೆಯಲು ಹೆಚ್ಚುವರಿ ಭೂಮಿಯನ್ನು  ಕೋರಿ ಬಿಜೆಪಿಯು  ಮಂಡಿಸಿರುವ ಪ್ರಸ್ತಾವನೆಯನ್ನು ಶಿವ ಸೇನೆಯು ಆಕ್ಷೇಪಿಸಿ ಬದಿಗಿಟ್ಟಿದೆ.

ಮುಂಬಯಿಯಲ್ಲಿ ಹೆಚ್ಚುವರಿ ಗೋಶಾಲೆಗಳನ್ನು ತೆರೆಯಲು ಅವಕಾಶ ನೀಡುವ ಯಾವುದೇ ರೀತಿಯ ನಡೆಗೆ ನಾವು ಅನುಮತಿಸುವುದಿಲ್ಲ ಎಂದು ಶಿವಸೇನೆ ಸ್ಪಷ್ಟಪಡಿಸಿದೆ.  ನಗರದಲ್ಲಿ ಈಗಾಗಲೇ ಹೆಚ್ಚಿನ ಸಂಖ್ಯೆ ಯಲ್ಲಿ ಗೋಶಾಲೆಗಳನ್ನು ತೆರೆಯಲಾಗಿದೆ.  ಹೊಸ ಗೋಶಾಲೆಗಳನ್ನು ಇನ್ನು ಬೇಕಾದರೆ ನಗರದ ಹೊರವಲಯದಲ್ಲಿ ಸ್ಥಾಪಿಸಬೇಕು ಎಂದು ಪಕ್ಷ ಹೇಳಿದೆ.

ಮುಂಬಯಿಯ ಮಾಜಿ ಮೇಯರ್‌ ಮತ್ತು ಬಿಜೆಪಿ ನಗರಸೇವಕ ಡಾ| ರಾಮ್‌ ಬಾರೋಟ್‌ ಅವರು, ಮುಂಬಯಿ, ಪೂರ್ವ ಮತ್ತು ಪಶ್ಚಿಮ ಉಪನಗರಗಳಲ್ಲಿ 3 ಹೊಸ ಗೋಶಾಲೆಗಳನ್ನು ತೆರೆಯಲು ಅಭಿವೃದ್ಧಿ ಯೋಜನೆಯಲ್ಲಿ 10,000 ಚದರ ಅಡಿ ಭೂಮಿಯನ್ನು ಮೀಡಲಿಡುವಂತೆ ಒತ್ತಾಯಿಸಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯಲ್ಲಿ ಪ್ರಸ್ತಾವನೆಯೊಂದನ್ನು ಮಂಡಿಸಿದ್ದು, ಅದಕ್ಕೆ ಸಭಾಗೃಹದಿಂದ ಅನುಮೋದನೆಯೂ ಸಿಕ್ಕಿತ್ತು. ಆದರೆ, ಈಗ ಮಹಾನಗರ ಪಾಲಿಕೆ ಆಡಳಿತವು ಅದನ್ನು ಏಕಾಏಕಿಯಾಗಿ ರದ್ದುಗೊಳಿಸಿದೆ. ಈ ಸಂಬಂಧ ಆಡಳಿತದ ಕಡೆಯಿಂದ ಸುಧಾರಣಾ ಸಮಿತಿಗೆ ಅಭಿಪ್ರಾಯವನ್ನು ಮಂಡಿಸಲಾಗಿದ್ದು, ಗುರುವಾರ  ಸುಧಾರಣೆ ಸಮಿತಿ ಸಭೆಯಲ್ಲಿ ಆ ಬಗ್ಗೆ  ಚರ್ಚೆ ನಡೆಯಿತು.

ಆಡಳಿತದ ಅಭಿಪ್ರಾಯದ ಕುರಿತ ಚರ್ಚೆಯ ವೇಳೆ ಬಿಜೆಪಿ ನಗರಸೇವಕರು ಗೋವಿನ ಉಪಯುಕ್ತತೆಗಳ ಬಗ್ಗೆ ವಿವರಿಸುತ್ತ, ತಮ್ಮ ಪ್ರಸ್ತಾವನೆಯನ್ನು ಅಂಗೀಕರಿಸುವಂತೆ ಒತ್ತಾಯಿಸಿದರು.  ಆದರೆ, ಶಿವಸೇನೆಯು ನಗರದಲ್ಲಿ ಗೋಶಾಲೆಗಳ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುತ್ತ, ಬಿಜೆಪಿಯ ಬೇಡಿಕೆಗೆ ತಿರಸ್ಕರಿಸಿತು.

ನಗರವು ಮಳೆಗಾಲದ ಸಮಯದಲ್ಲಿ ಪ್ರವಾಹ ಮತ್ತು ನೀರು ಜಮಾವಣೆಯಂತಹ ಘಟನೆಗಳಿಗೆ ಈಡಾಗುತ್ತದೆ. ಸಾಮಾನ್ಯವಾಗಿ, ಗೋಶಾಲೆಗಳ ಸಗಣಿ ಮತ್ತು ತ್ಯಾಜ್ಯಗಳನ್ನು ನಗರದ ನದಿ ಮತ್ತು ನಾಲೆಗಳಲ್ಲೇ ವಿಲೇವಾರಿ ಮಾಡಲಾಗುತ್ತದೆ.  2005ರಲ್ಲಿ ಉಂಟಾದ ಪ್ರವಾಹಕ್ಕೆ ಗೋಶಾಲೆಯೂ ಒಂದು ಕಾರಣವಾಗಿದೆ. ಎಲ್ಲೆಲ್ಲಿ  ಗೋಶಾಲೆಗಳು ಇದ್ದವೋ, ಅಲ್ಲಲ್ಲಿ ನದಿ-ನಾಲೆಗಳ ಪರಿಸ್ಥಿತಿ ಕೆಟ್ಟದಾಗಿತ್ತು ಎಂದು ಮಾಜಿ ಮೇಯರ್‌ ಮತ್ತು ಶಿವಸೇನೆ ನಗರಸೇವಕಿ ಶ್ರದ್ಧಾ ಜಾಧವ್‌ ಹೇಳಿದ್ದಾರೆ.

ಗೋಶಾಲೆಗೆ ನಮ್ಮ ವಿರೋಧವಿಲ್ಲ. ಅದನ್ನು ನಗರದ ಹೊರವಲಯಗಳಲ್ಲಿ ಸ್ಥಾಪಿಸಬೇಕೆಂಬುದು ನಮ್ಮ ವಾದವಾಗಿದೆ  ಎಂದವರು ತಿಳಿಸಿದ್ದಾರೆ.

ಟಾಪ್ ನ್ಯೂಸ್

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.