ದೇಶದ ಹಳೆಯ ಕಾಂಗ್ರೆಸ್ ಮತ್ತು ಎನ್ ಸಿಪಿ ಪಕ್ಷ ಖಾಲಿ, ಖಾಲಿ; ಸಾಮ್ನಾ ಲೇಖನದಲ್ಲಿ ವ್ಯಂಗ್ಯ
Team Udayavani, Oct 10, 2019, 11:07 AM IST
ಮುಂಬೈ: ಕಾಂಗ್ರೆಸ್ ಪಕ್ಷ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್ ಮತ್ತು ಜ್ಯೋತಿರಾದಿತ್ಯ ಸಿಂದಿಯಾ ಬಹಿರಂಗವಾಗಿ ಒಪ್ಪಿಕೊಂಡ ಬೆನ್ನಲ್ಲೇ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಪಕ್ಷ ದೇಶದ ಹಳೆಯ ಕಾಂಗ್ರೆಸ್ ಈಗ ಖಾಲಿಯಾದ ಪಕ್ಷವಾಗಿಬಿಟ್ಟಿದೆ ಎಂದು ವ್ಯಂಗ್ಯವಾಡಿದೆ.
ಶಿವಸೇನಾದ ಮುಖವಾಣಿ ಸಾಮ್ನಾದಲ್ಲಿ ಕಟು ಶಬ್ದಗಳಿಂದ ಲೇಖನದಲ್ಲಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದೆ. ಕಾಂಗ್ರೆಸ್ ಹಾಗೂ ಮಹಾರಾಷ್ಟ್ರದ ನ್ಯಾಷನಲಿಸ್ಟ್ ಕಾಂಗ್ರೆಸ್ ಖಾಲಿಯಾದ ಪಕ್ಷವಾಗಿದೆ ಎಂದು ಹೇಳಿದೆ.
ದೇಶದ ಹಳೆಯ ಪಕ್ಷದಲ್ಲಿ ಈಗ ವಯಸ್ಸಾದ ಮುಖಂಡರೇ ತುಂಬಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಭವಿಷ್ಯವನ್ನು ಮೇಲಕ್ಕೆತ್ತಲು ಯುವ ಮತ್ತು ಡೈನಾಮಿಕ್ ಮುಖಂಡರ ಅಗತ್ಯವಿದೆ ಎಂದು ಲೇಖನದಲ್ಲಿ ತಿಳಿಸಿದ್ದು, ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಪಕ್ಷ ಕೂಡಾ ಹಳೆಯದಾಗಿದೆ ಎಂದು ಟೀಕಿಸಿದೆ.