ಸುಪ್ರೀಂ ತೀರ್ಪಿನ ನಂತರ ಪಿಎಫ್ ದೂರು ಕಡಿಮೆ?
Team Udayavani, Mar 16, 2019, 12:30 AM IST
ಕೋಲ್ಕತಾ: ಉದ್ಯೋಗಿಗಳಿಗೆ ಕಂಪನಿಗಳು ಒದಗಿಸುವ ವಿಶೇಷ ಭತ್ಯೆಗಳು ಕೂಡ ಮೂಲ ವೇತನದ ಭಾಗವಾಗಿವೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರದಲ್ಲಿ ಭವಿಷ್ಯ ನಿಧಿ ಇಲಾಖೆಗೆ ಬರುತ್ತಿದ್ದ ದೂರುಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ. ಈ ತೀರ್ಪಿನಿಂದಾಗಿ ವೇತನದಲ್ಲಿ ಪಿಎಫ್ ಕಡಿತದ ಗೊಂದಲಗಳು ಕಡಿಮೆಯಾಗಿವೆ.
ಈಗಾಗಲೇ ಇರುವ ನಿಯಮವನ್ನೇ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಕಂಪನಿಗಳು ವಿಧಿಸುವ ವಿಶೇಷ ಭತ್ಯೆಗಳೂ ಮೂಲ ವೇತನದ ಭಾಗವೇ ಆಗಿರುತ್ತದೆಯೇ ಎಂಬ ಬಗ್ಗೆ ಎಲ್ಲರಲ್ಲೂ ಗೊಂದಲವಿತ್ತು. ಆದರೆ ಕೋರ್ಟ್ ಇದನ್ನು ಸ್ಪಷ್ಟಪಡಿಸಿದ್ದು, ದೂರು ನೀಡುವವರ ಸಂಖ್ಯೆ ಕಡಿಮೆಯಾಗಲಿದೆ. ಇನ್ನೊಂದೆಡೆ ಉದ್ಯೋಗಿಯು ಕಂಪನಿ ಬದಲಿಸಿದಾಗ, ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಪಿಎಫ್ ಖಾತೆ ಬದಲಾವಣೆ ಮಾಡುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಿದೆ. ಈ ವ್ಯವಸ್ಥೆಯನ್ನು ಸಂಪೂರ್ಣ ಸ್ವಯಂಚಾಲಿತಗೊಳಿಸಲಾಗಿದ್ದು, ಈಗಿರುವಂತೆ ನೌಕ ರರು ಅರ್ಜಿ ಸಲ್ಲಿಸುವ ಹಾಗೂ ಅದನ್ನು ಇಪಿಎಫ್ಒ ಅಧಿಕಾರಿಗಳು ಅನುಮೋದಿಸುವ ಪ್ರಕ್ರಿಯೆಯನ್ನು ಕೈಬಿಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ