ದೇಶ-ವಿದೇಶಗಳಲ್ಲಿ ಗುರುನಾನಕ್ ಜಯಂತಿ, ಸಿಖ್ಖ್ ಭಕ್ತರ ಗುರು ಪೂರ್ಣಿಮಾ ಸಂಭ್ರಮ
Team Udayavani, Nov 12, 2019, 12:22 PM IST
ನವದೆಹಲಿ: ಇಂದು ದೇಶ-ವಿದೇಶಗಳಲ್ಲಿ ಸಿಖ್ಖರ ಧರ್ಮಗುರು ಗುರುನಾನಕ್ ಅವರ 550ನೇ ಜನ್ಮ ಜಯಂತಿಯನ್ನು ಆಚರಿಸಲಾಗುತ್ತಿದ್ದು, ನವದೆಹಲಿಯ ಕೊನ್ನಾಟ್ ಪ್ರದೇಶದಲ್ಲಿರುವ ಗುರುದ್ವಾರ ಬಾಂಗ್ಲಾ ಸಾಹೀಬ್ ಗೆ ಸಾವಿರಾರು ಭಕ್ತರು ಭೇಟಿ ನೀಡಿ ಪ್ರಾರ್ಥನೆ, ಪೂಜೆ ಸಲ್ಲಿಸಿದ್ದಾರೆ.
ದಿಲ್ಲಿಯಲ್ಲಿರುವ ಗುರುದ್ವಾರ ಬಾಂಗ್ಲಾ ಸಾಹೀಬ್ ಸಿಖ್ಖ್ ಸಮುದಾಯದ ಪ್ರಮುಖ ಗುರುದ್ವಾರಗಳಲ್ಲಿ ಒಂದಾಗಿದೆ. ಈ ಗುರುದ್ವಾರದ ಒಳಪ್ರಾಂಗಣದಲ್ಲಿ ಸರೋವರ ಕೂಡಾ ಇದೆ. ಗುರುನಾನಕ್ ಸಿಖ್ಖ್ ರ ಮೊದಲ ಗುರುವಾಗಿದ್ದಾರೆ. ಇಂದು ಗುರು ಪುರಬ್(ಗುರು ಪೂರ್ಣಿಮಾ) ಅನ್ನು ಸಿಖ್ಖ್ ರು ದೇಶ, ವಿದೇಶಗಳಲ್ಲಿ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ.
ಅದೇ ರೀತಿ ಪಂಜಾಬ್ ನಲ್ಲಿರುವ ಬೇರ್ ಸಾಹೀಬ್ ಗುರುದ್ವಾರದಲ್ಲಿ, ಅಮೃತಸರ್ ದಲ್ಲಿರುವ ಸ್ವರ್ಣ ಮಂದಿರದಲ್ಲಿ ಸಾವಿರಾರು ಸಿಖ್ಖ್ ಭಕ್ತರು ಪಾಲ್ಗೊಂಡು ಗುರು ಪುರಬ್ ಆಚರಿಸುತ್ತಾರೆ ಎಂದು ವರದಿ ತಿಳಿಸಿದೆ.
ಹಿಂದೂ ಪಂಚಾಂಗದ ಕಾರ್ತಿಕ ಮಾಸದ ಪ್ರಕಾರವಾಗಿ ಪೂರ್ಣ ಹುಣ್ಣಿಮೆಯ ದಿನ ಸಿಖ್ಖ್ ರು ಹಬ್ಬ ಆಚರಿಸುತ್ತಾರ. ಇದನ್ನು ಕಾರ್ತಿಕ ಪೂರ್ಣಿಮಾ ಎಂದು ಕರೆಯುತ್ತಾರೆ. ಈ ವರ್ಷ ಗುರುಪೂರ್ಣಿಮಾ ನವೆಂಬರ್ 12ರಂದು ಆಚರಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…