ತಿಮ್ಮಪ್ಪನ ಬೆಳ್ಳಿ ಕಿರೀಟ ನಾಪತ್ತೆ!
2016ರ ಆಡಿಟ್ನಲ್ಲೇ ತಿಳಿದುಬಂದಿದ್ದ ಸಂಗತಿ
Team Udayavani, Aug 29, 2019, 5:28 AM IST
ತಿರುಪತಿ: ಇಲ್ಲಿನ ಜಗದ್ವಿಖ್ಯಾತ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ದೇವರ ಅಲಂಕಾರಕ್ಕಾಗಿ ಉಪಯೋಗಿಸುತ್ತಿದ್ದ ಬೆಳ್ಳಿಯ ಕಿರೀಟ, ಎರಡು ಚಿನ್ನದ ನೆಕ್ಲೆಸ್ ಹಾಗೂ ಎರಡು ಬಂಗಾರದ ಉಂಗುರಗಳು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
2017ರ ಆಗಸ್ಟ್ನಿಂದ ಅಕ್ಟೋಬರ್ವರೆಗೆ ದೇವಸ್ಥಾನದ ಆಭರಣಗಳ ಬಗ್ಗೆ ಆಡಿಟ್ ನಡೆಸಲಾಗಿತ್ತು. ಆಗಲೇ ಆಭರಣ ನಾಪತ್ತೆಯಾಗಿರುವುದು ತಿಳಿದುಬಂದಿತ್ತು. ಆದರೆ, ಆ ವಿಚಾರ ಮಾತ್ರ ಬಹಿರಂಗ ಆಗಿರಲಿಲ್ಲ. ಬುಧವಾರದಂದು, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್ನ ಮಾಜಿ ಸದಸ್ಯ ಹಾಗೂ ಬಿಜೆಪಿ ನಾಯಕ ಜಿ. ಭಾನುಪ್ರಕಾಶ್ ರೆಡ್ಡಿ ಅವರು, 2017ರ ಆಡಿಟಿಂಗ್ನ ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ, ಆಭರಣಗಳ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. ಇದಕ್ಕೆ ಟಿಟಿಡಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಲ್, ಪ್ರಕರಣದ ತನಿಖೆಗೆ ಆದೇಶಿಸಿರುವುದಾಗಿ ಹೇಳಿದ್ದಾರೆ. ನಾಪತ್ತೆಯಾದ ಕಿರೀಟ 5.4 ಕೆ.ಜಿ. ತೂಕವಿದ್ದು, 2002ರಲ್ಲಿ ಭಕ್ತರೊಬ್ಬರು ಅದನ್ನು ದೇಣಿಗೆ ನೀಡಿದ್ದರು. ಅದರ ಇಂದಿನ ಮಾರುಕಟ್ಟೆ ಬೆಲೆ 6.50 ಲಕ್ಷ ರೂ. ಆಗಿದೆಯಾದರೂ ದೇವರ ಕಿರೀಟವಾದ್ದರಿಂದ ಅದರ ಮೌಲ್ಯ ಅಗಾಧವಾಗಿದೆ ಎನ್ನಲಾಗಿದೆ.
ಸೇವೆಯಿಂದ ವಜಾ?: ಈ ನಡುವೆ, ಟಿಟಿಡಿ ದೇಗುಲಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಿಂದೂಯೇತರ ಸಿಬಂದಿಯನ್ನು ಸೇವೆಯಿಂದ ವಜಾಗೊಳಿಸ ಲಾಗುತ್ತದೆ ಎಂದು ಆಂಧ್ರಪ್ರದೇಶ ಸರಕಾರದ ಮುಖ್ಯ ಕಾರ್ಯದರ್ಶಿ ಎಲ್.ವಿ. ಸುಬ್ರಹ್ಮಣ್ಯಂ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್