ಇಂಜಿನಿಯರಿಂಗ್ ವಿದ್ಯಾರ್ಥಿ ಅಪಹರಣ; 6 ಮಂದಿ ಅರೆಸ್ಟ್
Team Udayavani, Oct 6, 2017, 5:32 PM IST
ಭುವನೇಶ್ವರ : ನಗರದಲ್ಲಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯನ್ನು ಅಪಹರಿಸಿದ ಆರೋಪದ ಮೇಲೆ ನಗರ ಪೊಲೀಸ್ ಕಮಿಷನರೇಟ್ ಆರು ಮಂದಿಯನ್ನು ಬಂಧಿಸಿದ್ದಾರೆ; ಇವರಲ್ಲಿ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದಾರೆ.
ಬಂಧಿತರನ್ನು ದೇವ ಅರ್ಪಿತ್ ಮಿಶ್ರಾ, ಪ್ರಿಯ ರಂಜನ್ ಮಲ್ಲಿಕ್, ಜ್ಯೋತಿ ಪ್ರಕಾಶ್ ಮೋಹಂತಿ, ಚಂದನ್ ದಕುವಾ, ಗಿರೀಶ್ ನಾಯ್ಡು ಮತ್ತು ಅಭಿಮನ್ಯು ದಾಸ್ ಎಂದು ಗುರುತಿಸಲಾಗಿದೆ.
ನಿನ್ನೆ ಗುರುವಾರ ಆರೋಪಿಗಳು ಖಂಡಗಿರಿಯಲ್ಲಿನ ಜಗಮಾರಾ ಪ್ರದೇಶದ ನಿವಾಸಿಯಾಗಿರುವ ಅನುಜ್ ಝಾ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಅಪಹರಿಸಿ ಆತನ ಬಿಡುಗಡೆಗೆ ಒತ್ತೆ ಹಣವನ್ನು ಕೇಳಿದ್ದರು. ಅನುಜ್ ಝಾ ನ ಹಿರಿಯ ಸಹೋದರ ಅಪಹರಣದ ಬಗ್ಗೆ ದೂರು ದಾಖಲಿಸಿದ್ದರು. ಆ ಪ್ರಕಾರ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು.
ಗುರುವಾರ ರಾತ್ರಿ ಆರೋಪಿಗಳು ನಗರದತ್ತ ಬರವಾಗ ಅವರನ್ನು ಪೊಲೀಸ್ ಕಮಿಷನರೇಟ್ ಸಿಬಂದಿಗಳು ಫೂಲ್ನಖರಾ ಸಮೀಪ ಬಂಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು