ಕೆಲವೊಮ್ಮೆ ಬಾಲ ನೆಟ್ಟಗೆ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ: ಪಾಕ್ ಗೆ ಕುಟುಕಿದ ಸಚಿವ
Team Udayavani, Oct 21, 2019, 8:35 AM IST
ಹೊಸದಿಲ್ಲಿ: “ಕೆಲವೊಮ್ಮೆ ಬಾಲವನ್ನು ನೇರ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ’’ ಇದು ಮಾಜಿ ಸೇನಾ ಮುಖ್ಯಸ್ಥ, ಕೇಂದ್ರ ಸಚಿವ ವಿಕೆ ಸಿಂಗ್ ಅವರು ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ಥಾನಕ್ಕೆ ಕುಟುಕಿದ ಪರಿ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು, ಪಾಕಿಸ್ಥಾನ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡುತ್ತದೆ. ‘ಕೆಲವೊಮ್ಮೆ ಬಾಲವನ್ನು ನೇರ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ಪ್ರತ್ಯುತ್ತರ ನೀಡಲು ನಮ್ಮ ಸೇನೆ ಎಂದಿಗೂ ಸಿದ್ದವಾಗಿರುತ್ತದೆ ಎಂದರು.
‘’ಭಾರತೀಯ ಸೇನೆ ಎಂದಿಗೂ ಸಿದ್ದವಾಗಿರುತ್ತದೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಶತ್ರುವಿನ ಮೇಲೆ ದಾಳಿ ಮಾಡಲು ನಮ್ಮ ಸೈನ್ಯ ಎಂದಿಗೂ ಸಿದ್ದವಾಗಿರುತ್ತದೆ’’ ಎಂದು ವಿಕೆ ಸಿಂಗ್ ಹೇಳಿದರು.