ಡಿಸ್ಕ್ ಜಾಕಿ ಜತೆ ಹಾಡಿಗಾಗಿ ಜಗಳ: ಕಸಿನ್ ಸಹೋದರರಿಬ್ಬರಿಗೆ ಗುಂಡೇಟು
Team Udayavani, Dec 4, 2018, 4:04 PM IST
ಹೊಸದಿಲ್ಲಿ : ಕುಟುಂಬ ಕಾರ್ಯಕ್ರಮವೊಂದರಲ್ಲಿ ಒಂದೇ ಹಾಡನ್ನು ಪದೇ ಪದೇ ಪ್ಲೇ ಮಾಡುವಂತೆ ಡಿಸ್ಕ್ ಜಾಕಿಯನ್ನು ಒತ್ತಾಯಿಸಿ, ಆತ ನಿರಾಕರಿಸಿದ ಕಾರಣಕ್ಕೆ ಆತನೊಂದಿಗೆ ಜಗಳ ತೆಗೆದು, ಜಗಳದ ಪರಾಕಾಷ್ಠೆಯಲ್ಲಿ ಡಿಸ್ಕ್ ಜಾಕಿಯ ಸಂಗಡಿಗರಿಬ್ಬರು ಹಾರಿಸಿದ ಗುಂಡಿಗೆ ಜಗಳ ಕಾದ ಕಸಿನ್ ಸಹೋದರಿಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಕಳೆದ ಭಾನುವಾರ ಇಲ್ಲಿ ನಡೆಯಿತೆಂದು ಪೊಲೀಸರು ತಿಳಿಸಿದ್ದಾರೆ.
ಕಸಿನ್ ಸಹೋದರರಾದ ಶಾಂಕಿ ಭಾರದ್ವಾಜ್ ಮತ್ತು ತುಷಾರ್ ಭಾರದ್ವಾಜ್ ಅವರ ಕೆಳಹೊಟ್ಟೆಗೆ ಗುಂಡೇಟು ತಗಲಿದ್ದು ಅವರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಕಳೆದ ಭಾನುವಾರ ಪಶ್ಚಿಮ ದಿಲ್ಲಿಯ ಪಾಲಮ್ ಗ್ರಾಮದಲ್ಲಿ ರಾತ್ರಿ ನಡೆದಿದ್ದ ಕುಟುಂಬ ಸಮಾರಂಭದ ವೇಳೆ ರಾತ್ರಿ 10.24ರ ಸುಮಾರಿಗೆ ಜಗಳದ ಪರಾಕಾಷ್ಠೆಯಲ್ಲಿ ಗುಂಡು ಹಾರಾಟ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ : ಶಾಂಕಿ ಮತ್ತು ತುಷಾರ್ ಕಸಿನ್ ಸಹೋದರರು 19ರ ಹರೆಯದ ಡಿಸ್ಕ್ ಜಾಕಿ ಅಕ್ಷಯ್ ನಲ್ಲಿ ತಮಾಚೆ ಪೆ ಡಿಸ್ಕೋ ಎಂಬ ಹಾಡನ್ನು ಪದೇ ಪದೇ ನುಡಿಸುವಂತೆ ಒತ್ತಾಯಪಡಿಸುತ್ತಿದ್ದರು. ಹಲವು ಬಾರಿ ಈ ಹಾಡನ್ನು ನುಡಿಸಿದ ಬಳಿಕ ‘ಇನ್ನು ಸಾಧ್ಯವಿಲ್ಲ’ ಎಂದು ಡಿಜೆ ಅಕ್ಷಯ್ ಹೇಳಿದ. ಇದರಿಂದ ಕ್ರುದ್ಧರಾದ ಕಸಿನ್ ಸಹೋದರರು ಆತನೊಂದಿಗೆ ಜಗಳ ಕಾದರು.
ಆಗ ಅಕ್ಷಯ್ ತನ್ನನ್ನು ನೇಮಿಸಿಕೊಂಡ ಸಂಜಯ್ (29) ಮತ್ತು ಆತನ ಸಹೋದರ ಆಶಿಶ್ (23) ಅವರನ್ನು ಕರೆದ. ಇವರೂ ಜಗಳದಲ್ಲಿ ಕೂಡಿಕೊಂಡರು. ಸಿಟ್ಟಿನ ಪರಾಕಾಷ್ಠೆಯಲ್ಲಿ ಕಸಿನ್ ಸಹೋದರರ ಮೇಲೆ ಇವರು ಗುಂಡೆಸೆದರು.
ಒಡನೆಯೇ ವಿಷಯ ತಿಳಿದು ಧಾವಿಸಿ ಬಂದ ಪೊಲೀಸರು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಾಂಕಿ ಮತ್ತು ತುಷಾರ್ ನನ್ನು ದ್ವಾರಕಾ ಆಸ್ಪತ್ರೆಗೆ ಒಯ್ದರು. ಚಿಕಿತ್ಸೆ ನೀಡಿದ ವೈದ್ಯರು, ಕಸಿನ್ ಸಹೋದರರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿಸಿದ್ದಾರೆ. ಆದರೆ ಅವರಿನ್ನೂ ಆಸ್ಪತ್ರೆಯಲ್ಲೇ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಡಿಸ್ಕ್ ಜಾಕಿ ಅಕ್ಷಯ್, ಸಂಜಯ್ ಮತ್ತು ಆಶಿಶ್ನನ್ನು ಬಂಧಿಸಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ