ತಲೆ ಬೋಳಿಸಿಕೊಂಡ ಸೋನು: 10 ಲ.ರೂ. ಕೊಡಲು ಮೌಲ್ವಿಗೆ ಸವಾಲು
Team Udayavani, Apr 20, 2017, 3:45 AM IST
ಮುಂಬಯಿ: ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಬಳಕೆ ಕುರಿತು ಟ್ವೀಟಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಖ್ಯಾತ ಗಾಯಕ ಸೋನು ನಿಗಮ್, ಬುಧವಾರ ಮಧ್ಯಾಹ್ನ ತಲೆ ಬೋಳಿಸಿಕೊಂಡಿದ್ದಾರೆ!
ಸೋನು ನಿಗಮ್ರ ತಲೆ ಬೋಳಿಸಿ ಹಳೇ ಬೂಟಿನ ಹಾರ ಹಾಕುವ ವ್ಯಕ್ತಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಮೌಲ್ವಿಯೊಬ್ಬರು ಘೋಷಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, “ಇಂದು ಮಧ್ಯಾಹ್ನ 2 ಗಂಟೆಗೆ ಆಲಿಮ್ ಹಕೀಮ್ (ಸೆಲಬ್ರಿಟಿ ಕೇಶ ವಿನ್ಯಾಸಗಾರ) ಬಂದು ನನ್ನ ತಲೆ ಬೋಳಿಸುತ್ತಾರೆ. 10 ಲಕ್ಷ ಸಿದ್ಧ ಮಾಡಿಕೊಳ್ಳಿ ಮೌಲ್ವಿ,’ ಎಂದು ಸೋನು ಬುಧವಾರ ಬೆಳಗ್ಗೆ ಟ್ವೀಟ್ ಮಾಡಿದ್ದರು. ಅದರಂತೆ ಸೋನು ಕೇಶ ಮುಂಡನ ಮಾಡಿಸಿಕೊಂಡಿದ್ದಾರೆ. ಜತೆಗೆ, ಈಗ ಆಲಿಮ್ಗೆ 10 ಲಕ್ಷ ರೂ. ಕೊಡಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಮಧ್ಯಾಹ್ನದ ನಂತರ ತಮ್ಮ ಮನೆಯಲ್ಲಿ ಪತ್ರಿಕಾಗೋಷ್ಠಿ ಕರೆದ ಸೋನು ನಿಗಮ್, “ನನಗೆ ತಲೆ ಬೋಳಿಸಲು ಇನಾಮು ಘೋಷಿಸಿದ್ದ ಮೌಲ್ವಿಧಿಗಳ ಬಳಿ 10 ಲಕ್ಷ ರೂ. ಇದ್ದರೆ ನನಗೆ ಕೊಡಲಿ. ನಾನು ಅದನ್ನ ಒಂದಷ್ಟು ಒಳ್ಳೆ ಕಾರ್ಯಗಳಿಗೆ ಬಳಸುತ್ತೇನೆ,” ಎಂದು ಹೇಳಿದ್ದಾರೆ. ಇದೇ ವೇಳೆ ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಸೋನು ನಿಗಂ ವಿರುದ್ಧ ಲಿಖೀತ ದೂರು ಸಲ್ಲಿಕೆಯಾಗಿದೆ.
ಪ್ರಿಯಾಂಕಾ ವೀಡಿಯೋ ವೈರಲ್!: ಸೋನು ನಿಗಮ್ರ ವಿವಾದಾತ್ಮಕ ಹೇಳಿಕೆ ನಂತರ ಇದೀಗ ನಟಿ ಪ್ರಿಯಾಂಕಾ ಚೋಪ್ರಾ ವರ್ಷದ ಹಿಂದೆ ಮುಸ್ಲಿಂ ಪ್ರಾರ್ಥನೆ ಪರವಾಗಿ ನೀಡಿದ ಹೇಳಿಕೆ ಒಳಗೊಂಡ ವೀಡಿಯೋ ವೈರಲ್ ಆಗಿದೆ. 2016ರಲ್ಲಿ “ಜೈ ಗಂಗಾಜಲ್’ ಚಿತ್ರದ ಪ್ರಚಾರ ಸಂದರ್ಭದಲ್ಲಿ ಭೂಪಾಲ್ಗೆ ತೆರಳಿದ್ದ ಪ್ರಿಯಾಂಕಾ, “ಸಂಜೆ ವೇಳೆ ಮನೆಯ ಟೆರೇಸ್ಗೆ ತೆರಳಿ, ಸುತ್ತ ಇರುವ ಐದಾರು ಮಸೀದಿಗಳ ಧ್ವನಿವರ್ಧಕಗಳಿಂದ ಹೊರಬರುವ ಪ್ರಾರ್ಥನೆ ಕೇಳುತ್ತಾ ಸೂರ್ಯಾಸ್ತ ನೋಡುವುದು ನನಗೆ ತುಂಬಾ ಇಷ್ಟ,’ ಎಂದು ಹೇಳಿದ ವೀಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
MUST WATCH
ಹೊಸ ಸೇರ್ಪಡೆ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ