ಮೂರು ದಿನಗಳ ಮೊದಲೇ ಅಂಡಮಾನ್ಗೆ ಮುಂಗಾರು
Team Udayavani, May 15, 2017, 10:01 AM IST
ಹೊಸದಿಲ್ಲಿ: ನಿರೀಕ್ಷೆಗೂ ಮೊದಲೇ ನೈಋತ್ಯ ಮುಂಗಾರು ಭಾರತದ ಅಂಡಮಾನ್-ನಿಕೋಬಾರ್ ದ್ವೀಪ ಸಮೂಹ ಪ್ರವೇಶಿಸಿದೆ. ನೈಋತ್ಯ ದಿಕ್ಕಿನಿಂದ ಗಾಳಿ ಪ್ರಬಲವಾಗುತ್ತಿದ್ದು ರವಿವಾರ ಅಂಡಮಾನ್ ಇಡೀ ದ್ವೀಪ ಸಮೂಹವನ್ನು ಮೋಡಗಳು ಆವರಿಸಿದ್ದು, ಉತ್ತಮ ಮಳೆಯನ್ನೂ ಸುರಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಆದರೆ ಕೇರಳ ಕರಾವಳಿಯನ್ನು ಮುಂಗಾರು ಯಾವಾಗ ತಲುಪಬಹುದು ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಮೋಡಗಳ ಚಲನೆ ಮತ್ತು ಗಾಳಿಯನ್ನು ಅನುಸರಿಸಿ ಮುಂಗಾರು ಒಂದು ದಿನ ಮೊದಲು ಅಥವಾ ಜೂ.1, 2ರ ಬಳಿಕ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ರಮೇಶ್ ಹೇಳಿದ್ದಾರೆ.
ಬಂಗಾಲದಲ್ಲಿ ಮುಂಗಾರು ಲಕ್ಷಣಗಳು ಮತ್ತಷ್ಟು ಬಲಗೊಳ್ಳುತ್ತಿವೆ. ಇದು ವಿಸ್ತರಿಸಿಕೊಳ್ಳುತ್ತಿದ್ದು, ಅಂಡಮಾನ್ನಾದ್ಯಂತ ಚಾಚಿಕೊಂಡಿದೆ. ಮುಂದಿನ 72 ಗಂಟೆಗಳಲ್ಲಿ ಅಂಡಮಾನ್ ದ್ವೀಪ ಸಮೂಹ ಮತ್ತು ಪೂರ್ವ-ಮಧ್ಯ ಬಂಗಾಲಕೊಲ್ಲಿ ಭಾಗದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಂಡಮಾನ್ನಲ್ಲಿ ಸಮುದ್ರ ಕೂಡ ಪ್ರಕ್ಷುಬ್ದವಾಗಿದ್ದು, ಮೀನುಗಾರರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಸಾಮಾನ್ಯವಾಗಿ ಜೂ.1ರ ವೇಳೆಗೆ ಕೇರಳದ ಮೂಲಕ ಮುಂಗಾರು ಪ್ರವೇಶಿಸುತ್ತದೆ. ಅದಕ್ಕೂ ಮೊದಲು ಮೇ 17ರಂದು ಅಂಡಮಾನ್ ದ್ವೀಪ ಸಮೂಹವನ್ನು ಮುಂಗಾರು ಪ್ರವೇಶಿಸುತ್ತದೆ. ಸ್ಕೈಮೆಟ್ ಖಾಸಗಿ ಹವಾಮಾನ ಸಂಸ್ಥೆ ಪ್ರಕಾರ ಈ ಬಾರಿ ಜೂ.1ರ ಆಸುಪಾಸಿನಲ್ಲಿ ಮುಂಗಾರು ಕೇರಳ ಪ್ರವೇಶಿಸುವ ನಿರೀಕ್ಷೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು