ಚಂದ್ರಯಾನ 2ರಲ್ಲಿ ಗ್ರಾಮೀಣ ಪ್ರತಿಭೆ ಚಂದ್ರಕಾಂತ್ ಶ್ರಮ
ಕಲ್ಕತ್ತಾದ ಶಿಬ್ಪುರ್ ಗ್ರಾಮದ ಕೃಷಿಕನ ಮಗ
Team Udayavani, Jul 22, 2019, 8:54 PM IST
ಮಣಿಪಾಲ: ‘ಭಾರತದ ಕನಸಿನ ಯೋಜನೆ ಚಂದ್ರಯಾನ 2 ಯಶಸ್ವಿಯಾಗಿ ಉಡ್ಡಯನಗೊಂಡಿದೆ. ಇದಕ್ಕಾಗಿ ಇಡೀ ವಿಶ್ವವೇ ‘ಭಾರತದತ್ತ ನೋಡುತ್ತಿತ್ತು. ಈ ಯೋಜನೆಯ ಹಿಂದೆ ಹಲವಾರು ವಿಜ್ಞಾನಿಗಳು ಕೆಲಸಮಾಡಿದ್ದಾರೆ. ಅವರ ಶ್ರಮ ಪ್ರಾಥಮಿಕವಾಗಿ ಯಶಸ್ವಿಯಾಗಿದೆ. ಆ ತಂಡದಲ್ಲಿ ಕೊಲ್ಕತಾದ ಕೃಷಿಕನ ಮಗನೂ ಸೇರಿದ್ದ ಎಂಬ ಸಂಗತಿ ಬಯಲಾಗಿದೆ.
ಕೊಲ್ಕತಾದ ಹೂಗ್ಲಿಯ ಶಿಬ್ಪುರ್ ಗ್ರಾಮದ ಕೃಷಿಕ ಮಧುಸೂದನ್ ಅವರ ಪುತ್ರ ಚಂದ್ರಕಾಂತನ ಪಾತ್ರ ಮಹತ್ವದ್ದಾಗಿತ್ತು. ಬಡ ರೈತ ಕುಟುಂಬ ಅವರದು. ತಮ್ಮ ಮಗನಿಗೆ ಸೂರ್ಯಕಾಂತ್ ಎಂದು ಹೆಸರು ಇಡಲು ಇಚ್ಚೆ ಹೊಂದಿದ್ದರಂತೆ. ಆದರೆ, ಶಿಕ್ಷಕರೊಬ್ಬರು ಚಂದ್ರಕಾಂತ್ ಎಂದು ಹೆಸರು ಇಡಲು ಸೂಚಿಸಿದ್ದರು. ಆ ಪ್ರಕಾರ ಚಂದ್ರಕಾಂತ್ ಎಂದು ಹೆಸರು ಇಟ್ಟಿದ್ದರು.
ಇದೀ ಚಂದ್ರಯಾನ 2ರ ತಂಡದಲ್ಲಿ ಚಂದ್ರಕಾಂತ್ ಎಂಬ ಹೆಸರಿನ ವಿಜ್ಞಾನಿ ಸೇರಿಕೊಂಡಿದ್ದು, ಕಾಕತಾಳೀಯವಾಗಿದೆ. ಚಂದ್ರಕಾಂತ್ ಚಂದ್ರಯಾನದಲ್ಲಿ ಹಿರಿಯ ವಿಜ್ಞಾನಿಯಾಗಿ ಬದಲಾಗಿದ್ದಾರೆ. ಚಂದ್ರಕಾಂತ್ ಅವರು ಉಪಗ್ರಹದ ಅಂಟೇನಾ ಸಿಸ್ಟಮ್ ಅನ್ನು ರೂಪಿಸಿದ್ದಾರೆ. ಚಂದ್ರಯಾನ-1, ಜಿಎಸ್ಎಟಿ-12 ಸೇರಿ ಮೊದಲಾದ ಕಾರ್ಯಗಳಲ್ಲಿ ಇವರು ಬಹಳ ಮುಖ್ಯಪಾತ್ರ ವಹಿಸಿದ್ದಾರೆ. ಪ್ರಸ್ತುತ ಚಂದ್ರಕಾಂತ್ ಉಪ ಯೋಜನಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
2001ರಲ್ಲಿ ಇಸ್ರೋ ಸೇರಿದ ಇವರು ತಮ್ಮ ಪರಿಶ್ರಮ ಮತ್ತು ಕಾರ್ಯ ಬದ್ಧತೆಗೆ ಗುರುತಿಸಿಕೊಂಡಿದ್ದರು. ಚಂದ್ರಕಾಂತ್ ಅವರ ಹಿರಿಯ ಸಹೋದರ ಶಶಿಕಾಂತ್ ಅವರೂ ವಿಜ್ಞಾನಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ