ಲಂಕೆಯ ನೆರವಿಗೆ ಸದಾ ಸಿದ್ಧ : ಕೇಂದ್ರ ಸರಕಾರ
Team Udayavani, Apr 8, 2022, 5:30 AM IST
ಹೊಸದಿಲ್ಲಿ/ಕೊಲೊಂಬೋ: ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿಗೆ ತುತ್ತಾಗಿರುವ ಶ್ರೀಲಂಕಾಕ್ಕೆ ಯಾವತ್ತೂ ನೆರವು ನೀಡಲು ಸಿದ್ಧರಿದ್ದೇವೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಹೊಸದಿಲ್ಲಿಯಲ್ಲಿ ಗುರುವಾರ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಗಚಿ, ನೆರೆಹೊರೆಯ ರಾಷ್ಟ್ರಗಳೇ ಮೊದಲು ಎಂಬ ಆದ್ಯತೆ ಎಂಬ ನಿಲುವಿನ ಅನ್ವಯ ಈಗಾಗಲೇ ತೈಲೋತ್ಪನ್ನ, ಅಗತ್ಯ ಆಹಾರ ವಸ್ತುಗಳನ್ನು ಪೂರೈಸಲಾಗುತ್ತಿದೆ ಎಂದು ಹೇಳಿದ್ದಾರೆ. ಇದುವರೆಗೆ ದ್ವೀಪರಾಷ್ಟ್ರಕ್ಕೆ 2.5 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ನೆರವು ನೀಡಲಾಗಿದೆ. ಅದರಲ್ಲಿ ವಿತ್ತೀಯ ನೆರವು, ಆಹಾರ, ಇಂಧನ ಅಗತ್ಯಗಳೂ ಸೇರಿವೆ ಎಂದಿದ್ದಾರೆ.
ಕಳೆದ ತಿಂಗಳ ಮಧ್ಯಭಾಗದಿಂದ ಇದುವರೆಗೆ 2.70 ಲಕ್ಷ ಮೆಟ್ರಿಕ್ ಟನ್ ಡೀಸೆಲ್ ಮತ್ತು ಪೆಟ್ರೋಲ್ ಅನ್ನು ಅಲ್ಲಿಗೆ ಪೂರೈಸಲಾಗಿದೆ ಎಂದಿದ್ದಾರೆ ಅರಿಂದಂ ಬಗಚಿ. ಎರಡೂ ದೇಶಗಳ ನಡುವೆ ಇತಿಹಾಸ ಕಾಲದಿಂದಲೂ ಸದೃಢ ಬಾಂಧವ್ಯ ಇದೆ ಎನ್ನುವುದನ್ನು ಮರೆಯಲಾಗದು ಎಂದಿದ್ದಾರೆ.
ವಿತ್ತ ಸಚಿವ ಸ್ಥಾನಕ್ಕೆ ಯಾರು?: ಇದೇ ವೇಳೆ, ವಿತ್ತ ಸಚಿವ ಸ್ಥಾನಕ್ಕೆ ನೇಮಕಗೊಂಡಿದ್ದ ಅಲಿ ಸಬ್ರೆ ರಾಜೀನಾಮೆ ನೀಡಿದ ಬಳಿಕ ಆ ಸ್ಥಾನ ವಹಿಸಿಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಇದೇ ವೇಳೆ, ಹಾಲಿ ಬಿಕ್ಕಟ್ಟು ನಿರ್ವಹಿಸಲು ಲಂಕಾ ಸರಕಾರ ಸಮಿತಿ ನೇಮಕ ಮಾಡಿದೆ. ಮತ್ತೂಂದು ಬೆಳವಣಿಗೆಯಲ್ಲಿ ವಿಪಕ್ಷಗಳೂ ಕೂಡ ಹಾಲಿ ಸರಕಾರವನ್ನು ಪತನಗೊಳಿಸಲು ಬಯಸುವುದಿಲ್ಲ ಎಂದು ಹೇಳಿವೆ. ಈ ನಡುವೆ, ವೈದ್ಯರೂ ಮುಷ್ಕರಕ್ಕೆ ಇಳಿದಿರುವುದರಿಂದ ಆಸ್ಪತ್ರೆಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ