ಛತ್ತೀಸ್ಗಢದಿಂದ ಬಿಜೆಪಿ ಉಚ್ಚಾಟನೆಗೆ ದೊಣ್ಣೆ-ಬುಲೆಟ್: ಕೈ ಶಾಸಕ
Team Udayavani, Apr 11, 2018, 12:04 PM IST
ಕೋರ್ಬಾ : ”ಛತ್ತೀಸ್ಗಢದಲ್ಲಿ ಅಧಿಕಾರರೂಢವಾಗಿರುವ ಭಾರತೀಯ ಜನತಾ ಪಕ್ಷವನ್ನು ಹೊಡೆದೋಡಿಸಲು ಅಗತ್ಯವಿದ್ದರೆ ದೊಣ್ಣೆ ಮತ್ತು ಬುಲೆಟ್ ಉಪಯೋಗಿಸಲು ಕೂಡ ನಾವು ಹಿಂಜರಿಯವುದಿಲ್ಲ” ಎಂದು ಕಾಂಗ್ರೆಸ್ ಶಾಸಕ ರಾಮದಯಾಳ್ ಉಯಿಕೆ ಹೇಳಿರುವ ಮಾತುಗಳು ಈಗ ವೈರಲ್ ಆಗಿವೆ; ವಿವಾದಕ್ಕೂ ಕಾರಣವಾಗಿವೆ.
ಛತ್ತೀಸ್ಗಢದಲ್ಲಿ ಈ ವರ್ಷಾಂತ್ಯ ವಿಧಾನಸಭಾ ಚುನಾವಣೆಗಳು ನಡೆಯಲಿಕ್ಕಿವೆ. ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದೇ ತೀರುವೆವು ಎಂಬ ಶಪಥವನ್ನು ಪಕ್ಷದ ಕಾರ್ಯಕತರರಿಗೆ ಬೋಧಿಸುವ ಕಾರ್ಯಕ್ರಮ ಸಿಂಥಿಯಾ ಗ್ರಾಮಲ್ಲಿ ನಡೆದಿದ್ದಾಗ ಪಾಲಿತನಖರ್ ಕ್ಷೇತ್ರದ ಶಾಸಕರಾಗಿರುವ ಉಯಿಕೆ ಅವರು ಆಳುವ ಬಿಜೆಪಿಯನ್ನು ರಾಜ್ಯದಿಂದ ಹೊಡೆದೋಡಿಸಲು ದೊಣ್ಣೆ ಮತ್ತು ಬುಲೆಟ್ ಉಪಯೋಗಿಸುವ ಮಾತುಗಳನ್ನು ಆಡಿದರು.
ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕಾಂಗ್ರೆಸ್ನ ಛತ್ತೀಸ್ಗಢ ವ್ಯವಹಾರಗಳ ಪ್ರಭಾರಿಯಾಗಿರುವ ಪಿ ಎಲ್ ಪುಣಿಯಾ ಅವರು, ಶಾಸಕ ಉಯಿಕೆ ಅವರು ಮಾತುಗಳನ್ನು ಸಮರ್ಥಿಸಿ “ಪ್ರಾಸಬದ್ಧತೆಗಾಗಿ ಉಯಿಕೆ ಅವರು ದೊಣ್ಣೆ – ಬುಲೆಟ್ ಪದಪುಂಜವನ್ನು ಉಪಯೋಗಿಸಿಕೊಂಡಿದ್ದಾರೆ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ