“ಟ್ರೈನ್18’ಗೆ ಮತ್ತೆ ಕಲ್ಲು
Team Udayavani, Feb 21, 2019, 12:30 AM IST
ಹೊಸದಿಲ್ಲಿ: ಚಾಲನೆ ಸಿಕ್ಕ ದಿನದಿಂದ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮತ್ತೆ ಸುದ್ದಿಯಾಗಿದೆ. ರೈಲು ತುಂಡ್ಲಾ ಜಂಕ್ಷನ್ ಹಾದು ಹೋಗುವಾಗ ದುಷ್ಕರ್ಮಿಗಳು ಅದರ ಮೇಲೆ ಕಲ್ಲೆಸೆದಿದ್ದಾರೆ. ಪರಿಣಾಮ ರೈಲಿನ ಒಂದು ಕಿಟಕಿಯ ಗಾಜು ಒಡೆದುಹೋಗಿದೆ. 2 ತಿಂಗಳಲ್ಲಿ ಇದು ಮೂರನೇ ಬಾರಿ ನಡೆಯುತ್ತಿರುವ ಕಲ್ಲು ಎಸೆತದ ಪ್ರಕರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನೊಂದೆಡೆ, ಬುಧವಾರ ಉತ್ತರಪ್ರದೇಶದ ಅಲಹಾಬಾದ್ ಸಮೀಪದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬೈಕೊಂದಕ್ಕೆ ಢಿಕ್ಕಿ ಹೊಡೆದಿದೆ. ಹಳಿಯನ್ನು ಅಕ್ರಮವಾಗಿ ದಾಟುತ್ತಿದ್ದ ವೇಳೆ ರೈಲು ಬರುತ್ತಿದ್ದುದನ್ನು ನೋಡಿದ ಬೈಕ್ ಸವಾರ, ಬೈಕನ್ನೇ ಹಳಿಯಲ್ಲೇ ಬಿಟ್ಟು ಓಡಿಹೋಗಿದ್ದಾನೆ. ಹೀಗಾಗಿ ಅದು ಬೈಕಿಗೆ ಢಿಕ್ಕಿ ಹೊಡೆದಿದೆ. ಆದರೆ, ಯಾವುದೇ ಹಾನಿ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.