ಭಾರತದ ವಿದ್ಯಾರ್ಥಿಗಳು ಕ್ರಿಯೇಟಿವ್ ಅಲ್ಲ
Team Udayavani, Feb 27, 2018, 10:05 AM IST
ಹೊಸದಿಲ್ಲಿ: “”ಭಾರತದ ಯುವಜನರು ಎಂಬಿಎಯಂಥ ದೊಡ್ಡ ಡಿಗ್ರಿಗಳನ್ನು ಪಡೆಯಬಹುದು. ಉತ್ತಮ ನೌಕರಿಗೂ ಹೋಗಿ, ಮುಂದೊಂದು ದಿನ ಮರ್ಸಿಡಿಸ್ ಬೆಂಝ್ ಕಾರನ್ನೂ ಕೊಳ್ಳಬಹುದು. ಆದರೆ, ಅವರಲ್ಲಿ, ರಚನಾತ್ಮಕ ಕ್ರಿಯೇಟಿವಿಟಿ ಇರುವುದಿಲ್ಲ” ಎಂದು ಆ್ಯಪಲ್ ಸಂಸ್ಥೆಯ ಸಹ ಸಂಸ್ಥಾಪಕ ಸ್ಟೀವ್ ವೊಸ್ನಿಯಾಕ್ ಅಭಿಪ್ರಾಯಪಟ್ಟಿದ್ದಾರೆ.
ಆ್ಯಪಲ್ ಕಂಪೆನಿಯ 2ನೇ ಸ್ಟೀವ್ ಜಾಬ್ಸ್ (ಆ್ಯಪಲ್ ಕಂಪೆನಿಯ ಸಂಸ್ಥಾಪಕ) ಎಂದೇ ಖ್ಯಾತಿ ಗಳಿಸಿರುವ ವೊಸ್ನಿಯಾಕ್, ಎಕನಾಮಿಕ್ ಟೈಮ್ಸ್ಗೆ ನೀಡಿರುವ ಸಂದರ್ಶನದಲ್ಲಿ ಹೀಗೆ ಹೇಳಿದ್ದು, “”ಭಾರತೀಯ ಶಿಕ್ಷಣ ಪದ್ಧತಿಯ ಅನುಸಾರ ಇಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತಮ್ಮ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕಗಳಿಸುವುದು, ಉತ್ತಮ ಉದ್ಯೋಗ ಗಳಿಸುವುದು, ಉನ್ನತ ಜೀವನ ಸಾಗಿಸುವ ಕಡೆಗೆ ಪ್ರೇರೇಪಿಸಲಾಗುತ್ತದೆ. ಹಾಗಾಗಿಯೇ ಇಲ್ಲಿ, ಕ್ರಿಯೇಟಿವಿಟಿ ಕಡಿಮೆ” ಎಂದಿದ್ದಾರೆ.
ಕ್ರಿಯಾಶೀಲತೆ ಕಡಿಮೆ ಆಗಿರುವುದರಿಂದಲೇ, ಐಟಿ ಕ್ಷೇತ್ರದಲ್ಲಿ ಭಾರತ ಸಾಧನೆ ಮಾಡಿದ್ದರೂ ಇಲ್ಲಿ ಗೂಗಲ್, ಫೇಸ್ಬುಕ್ ಅಥವಾ ಆ್ಯಪಲ್ಗಳಂಥ ಕಂಪೆನಿಗಳು ಸ್ಥಾಪನೆಗೊಂಡಿಲ್ಲ. ಇನ್ಫೋಸಿಸ್ ಸಂಸ್ಥೆ ಭಾರತೀಯ ಐಟಿ ಕ್ಷೇತ್ರದ ದೊಡ್ಡ ಕಂಪೆನಿಯಾಗಿದ್ದರೂ ಅದು ರಚನಾತ್ಮಕ ಕಂಪನಿ ಎನಿಸಿಕೊಂಡಿಲ್ಲ. ಹಾಗಾಗಿ, ಅದು ಗೂಗಲ್ ಮಟ್ಟಕ್ಕೆ ಬೆಳೆಯುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
ಮತದಾರರ ಚೀಟಿಯಲ್ಲಿ ಕ್ಯುಆರ್ ಕೋಡ್! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ