ಮುಗ್ಗರಿಸಿದ ವಿಶ್ವ ಮಾರುಕಟ್ಟೆ; ಮುಂಬಯಿ ಷೇರುಪೇಟೆಗೂ ಶಾಕ್
Team Udayavani, Feb 7, 2018, 11:05 AM IST
ಮುಂಬಯಿ/ಲಂಡನ್: ಜಗತ್ತಿನಾದ್ಯಂತದ ಷೇರು ಮಾರುಕಟ್ಟೆಗಳಿಗೆ ಮಂಗಳವಾರ ಕರಾಳದಿನವಾಗಿ ಪರಿಣಮಿಸಿತು. ವಾಲ್ಸ್ಟ್ರೀಟ್ನಲ್ಲಿ ಉಂಟಾದ ದಾಖಲೆಯ ಕುಸಿತವು ಏಷ್ಯಾ, ಯುರೋಪ್ನ ಮಾರುಕಟ್ಟೆಗಳಲ್ಲೂ ಸಂಚಲನ ಮೂಡಿಸಿದ್ದಲ್ಲದೆ, ಹೂಡಿಕೆದಾರರನ್ನು ಭಾರೀ ನಷ್ಟಕ್ಕೆ ತಳ್ಳಿತು. ಹಣದುಬ್ಬರದ ಪ್ರಮಾಣ ಏರಿಕೆಯಾಗುತ್ತಿದ್ದು, ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಏರಿಕೆ ಮಾಡಬಹುದು ಎಂಬ ಭೀತಿಯೇ ವಾಲ್ಸ್ಟ್ರೀಟ್ ವಾಷ್ಔಟ್ ಆಗಲು ಕಾರಣ.
ಅತ್ತ ವಾಲ್ಸ್ಟ್ರೀಟ್ನಲ್ಲಿ ಮಾರುಕಟ್ಟೆ ಕುಸಿಯುತ್ತಿದಂತೆ, ಇತ್ತ ಮುಂಬಯಿ ಷೇರುಪೇಟೆಯಲ್ಲೂ ಅದರ ಎಫೆಕ್ಟ್ ಕಾಣತೊಡಗಿತು. ಹೂಡಿಕೆದಾರರು ಷೇರುಗಳ ಭಾರೀ ಮಾರಾಟದಲ್ಲಿ ತೊಡಗಿದ ಕಾರಣ, ವಹಿವಾಟಿನ ಒಂದು ಹಂತದಲ್ಲಿ ಸೆನ್ಸೆಕ್ಸ್ 1,275 ಅಂಕ ಕುಸಿಯಿತು. ಆದರೆ, ಅನಂತರ ಚೇತರಿಸಿಕೊಂಡು, ದಿನಾಂತ್ಯಕ್ಕೆ 561 ಅಂಕ ಕುಸಿತ ಕಂಡು, 34,195ರಲ್ಲಿ ಕೊನೆಗೊಂಡಿತು. ಇನ್ನು ನಿಫ್ಟಿ ಕೂಡ ಸತತ 6ನೇ ದಿನವೂ ಕುಸಿತಕ್ಕೆ ಸಾಕ್ಷಿಯಾಗಿ, 168 ಅಂಕ ಕುಸಿತ ದಾಖಲಿಸಿ, ದಿನಾಂತ್ಯಕ್ಕೆ 10,498ರಲ್ಲಿ ಕೊನೆಗೊಂಡಿತು. ಒಟ್ಟಿನಲ್ಲಿ ಕಳೆದ 6 ದಿನಗಳಲ್ಲಿ ಹೂಡಿಕೆದಾರರಿಗೆ 10 ಲಕ್ಷ ಕೋಟಿ ರೂ. ನಷ್ಟ ಉಂಟುಮಾಡಿತು.
ವಾಲ್ಸ್ಟ್ರೀಟ್ ಕುಸಿತದ ಪರಿಣಾಮವಾಗಿ ಟೋಕಿಯೋ, ಹಾಂಕಾಂಗ್, ಸಿಡ್ನಿ, ಸಿಂಗಾಪುರ ಸಹಿತ ಎಲ್ಲ ಷೇರು ಮಾರುಕಟ್ಟೆಗಳೂ ಆಘಾತಕ್ಕೆ ಸಾಕ್ಷಿಯಾದವು. ಈ ಕುರಿತು ಪ್ರತಿಕ್ರಿಯಿಸಿರುವ ಆಕ್ಸಿ ಟ್ರೇಡರ್ ವಿಶ್ಲೇಷಕ ಜೇಮ್ಸ್ ಹ್ಯೂಸ್, “ಭರವಸೆ, ದುರಾಸೆ, ದಿಗಿಲು ಮತ್ತು ಭಯ… ಹೀಗೆ ನಾಲ್ಕು ಹಂತಗಳಲ್ಲಿ ಷೇರುಪೇಟೆ ಕುಸಿತ ಕಾಣುತ್ತದೆ. ನಾವಿಂದು ಭಯದ ಪರಿಸ್ಥಿತಿಗೆ ತಲುಪಿಲ್ಲ, ಆದರೆ, ದಿಗಿಲು ಮಾತ್ರ ಖಂಡಿತಾ ಇದೆ. 1,175ರಷ್ಟು (ಶೇ.4.6) ಅಂಕ ಕುಸಿತ ಕಂಡಾಗ ಯಾರಿಗೆ ತಾನೇ ಆತಂಕವಾಗದೇ ಇರಲು ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.
24 ಗಂಟೆಗಳಲ್ಲಿ ವಾರೆನ್ ಬಫೆಟ್ಗೆ 32,800 ಕೋಟಿ ರೂ. ನಷ್ಟ
ಅಮೆರಿಕದ ವಾಲ್ಸ್ಟ್ರೀಟ್ನಲ್ಲಾದ ಬ್ಲಿಡ್ಬಾತ್ ವಿಶ್ವದ ಮೂರನೇ ಅತಿ ಶ್ರೀಮಂತ ಎಂದೇ ಖ್ಯಾತಿಯಾಗಿರುವ ಕೋಟ್ಯಧಿಪತಿ ವಾರೆನ್ ಬಫೆಟ್ ಅವರ ಆಸ್ತಿಯನ್ನು ಕೇವಲ 24 ಗಂಟೆಗಳಲ್ಲಿ 32,800 ಕೋಟಿ ರೂ. (5.1 ಶತಕೋಟಿ ಡಾಲರ್)ನಷ್ಟು ಕಡಿಮೆಯಾಗಿಸಿತು. ಅವರು ಈ ಪ್ರಮಾಣದ ನಷ್ಟ ಅನುಭವಿಸಿ ರುವುದಾಗಿ ಬ್ಲೂಮ್ಬರ್ಗ್ ಬಿಲಿಯನೇರ್ ಸೂಚ್ಯಂಕದ ವರದಿ ಹೇಳಿದೆ. ಇನ್ನು ಫೇಸ್ಬುಕ್ ಸಿಇಒ ಮಾರ್ಕ್ ಝುಕರ್ಬರ್ಗ್ 23,100 ಕೋಟಿ ರೂ. ನಷ್ಟ ಅನುಭವಿಸಿದರು. ಒಟ್ಟಿನಲ್ಲಿ ಮಂಗಳವಾರ ವಾಲ್ಸ್ಟ್ರೀಟ್ನಲ್ಲಾದ ಕುಸಿತವು ವಿಶ್ವದ 500 ಸಿರಿವಂತರ 114 ಶತಕೋಟಿ ಡಾಲರ್(7.33 ಲಕ್ಷ ಕೋಟಿ ರೂ.) ಮೌಲ್ಯದ ಸಂಪತ್ತನ್ನು ಕರಗಿಸಿತು ಎಂದು ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ