ಬಿಜೆಪಿ ಶಾಸಕನ ನಾಲಿಗೆ ಕತ್ತರಿಸಿ ತಂದರೆ 5 ಲಕ್ಷ ರೂ ಇನಾಮು:ಕೈ ನಾಯಕ
Team Udayavani, Sep 7, 2018, 12:06 PM IST
ಮುಂಬಯಿ: ಹುಡಿಯನ್ನು ಕಿಡ್ನ್ಯಾಪ್ ಮಾಡಲು ನಾನು ಸಹಾಯ ಮಾಡುತ್ತೇನೆ ಎಂದು ಯುವಕನೊಬ್ಬನಿಗೆ ಸಾರ್ವಜನಿಕವಾಗಿ ಆಶ್ವಾಸನೆ ನೀಡಿ ವಿವಾದಕ್ಕೆ ಗುರಿಯಾಗಿರುವ ಬಿಜೆಪಿ ಶಾಸಕ ರಾಮ್ ಕದಂ ಅವರ ನಾಲಿಗೆ ಕತ್ತರಿಸಿದವರೆ 5 ಲಕ್ಷ ರೂಪಾಯಿ ಇನಾಮನ್ನು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಸುಬೋಧ್ ಸೌಜಿ ಘೋಷಿಸಿದ್ದಾರೆ.
ನಾನು ಕದಂ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸುತ್ತೇನೆ. ಇದು ಓರ್ವ ಜನಪ್ರತಿನಿಧಿ ನೀಡುವ ಹೇಳಿಕೆಯಾ ಎಂದ ಸೌಜಿ, ನಾನು ಕದಂ ನಾಲಿಗೆ ಕತ್ತರಿಸಿ ತಂದವರಿಗೆ 5 ಲಕ್ಷ ರೂಪಾಯಿ ನೀಡುತ್ತೇನೆ ಎಂದಿದ್ದಾರೆ.
ಘಾಟ್ಕೋಪರ್ನಲ್ಲಿ ನಡೆದ ದಹಿ ಹಂಡಿ ಕಾರ್ಯಕ್ರಮದಲ್ಲಿ ನಾಲಿಗೆ ಹರಿಯ ಬಿಟ್ಟಿದ್ದ ಕದಂ ಯುವಕನೊಬ್ಬನಿಗೆ ನಿನು ಪ್ರಪೋಸ್ ಮಾಡಿದ ಯುವತಿ ಒಪ್ಪಿಕೊಳ್ಳದಿದ್ದರೆ ನಾನು ಆಕೆಯನ್ನು ಕಿಡ್ನ್ಯಾಪ್ ಮಾಡಲು ಸಹಾಯ ಮಾಡುತ್ತೇನೆ.ಯುವ ಜನತೆಯ ಯಾವ ಕೆಲಸಕ್ಕೂ ನಾನು ನೆರವಾಗುತ್ತೇನೆ ಎಂದಿದ್ದರು.
ಕದಂ ಹೇಳಿಕೆ ಬಿಜೆಪಿಗೆ ತೀವ್ರ ಮುಜುಗರ ತಂದಿಟ್ಟಿತ್ತು. ಶಿವಸೇನೆ, ಕಾಂಗ್ರೆಸ್ ವ್ಯಾಪಕ ಆಕ್ರೋಶ ಹೊರ ಹಾಕಿತ್ತು.
ಮಹಾರಾಷ್ಟ್ರದ ಮಹಿಳಾ ಆಯೋಗ ಈಗಾಗಲೇ ಶಾಸಕ ರಾಮ್ ಕದಂಗೆ ನೊಟೀಸ್ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು