ಪಂಜಾಬ್ ಸಿಎಂ ಮನೆ ಮುಂದೆ ಪ್ರತಿಭಟನೆ : ಸುಖ್ಬೀರ್ ಸಿಂಗ್ ಬಾದಲ್ ಬಂಧನ
Team Udayavani, Jun 15, 2021, 2:27 PM IST
ನವದೆಹಲಿ: ಚಂಡೀಗಡ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಸಿಧು ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಮನೆ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಅವರನ್ನು ಬಂಧಿಸಲಾಗಿದೆ.
ಕೋವಿಡ್ ಲಸಿಕೆಗಳ ಮಾರಾಟ ಮತ್ತು ಕೋವಿಡ್ -19 ರೋಗಿಗಳ ವೈದ್ಯಕೀಯ ಕಿಟ್ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಅಕಾಲಿ ದಳದ ಮುಖ್ಯಸ್ಥರು ಸಿಬಿಐ ತನಿಖೆ ನಡೆಸಿವಂತೆ ಪ್ರತಿಭಟನೆ ಮಾಡಿದ್ದಾರೆ.
ಅಕಾಲಿ ದಳದ ಈ ಪ್ರತಿಭಟನೆಯಲ್ಲಿ ಬಿಎಸ್ಪಿಯ ರಾಜ್ಯ ಅಧ್ಯಕ್ಷ ಜಸ್ಬೀರ್ ಸಿಂಗ್ ಗರ್ಹಿ ಕೂಡ ಭಾಗವವಿಸಿದ್ದರು.