ಕಾವೇರಿ ಗದ್ದಲ: ಡಿಎಂಕೆಗೆ ಬಿಸಿ ಮುಟ್ಟಿಸಿದ ಸಂಸದೆ ಸುಮಲತಾ
Team Udayavani, Aug 2, 2019, 5:53 AM IST
ನವದೆಹಲಿ: ಸಂಸತ್ತಿನಲ್ಲಿ ಗುರುವಾರ ಕಾವೇರಿ ವಿವಾದ ಪ್ರತಿಧ್ವನಿಸಿತು. ಡಿಎಂಕೆಯ ಸಂಸದ ದಯಾನಿಧಿ ಮಾರನ್ ಅವರು, ಕರ್ನಾಟಕವು ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯಾಧಿಕರಣ ನೀಡಿದ್ದ ತೀರ್ಪನ್ನು ಪದೇಪದೆ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದಾಗ, ಮಂಡ್ಯ ಸಂಸದೆ ಸುಮಲತಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ನ್ಯಾಯಾಧಿಕರಣದ ತೀರ್ಪನ್ನು ಕರ್ನಾಟಕ ಎಂದಿಗೂ ಉಲ್ಲಂಘಿಸಿಲ್ಲ. ನಮ್ಮ ರಾಜ್ಯವು ನ್ಯಾಯಾಲಯದ ಆದೇಶವನ್ನು ಯಾವತ್ತೂ ಪಾಲಿಸುತ್ತಲೇ ಬಂದಿದೆ. ನಾವು ಶಾಂತಿಯನ್ನು ಬಯಸುವ ಜನ. ಹಾಗಾಗಿ, ನೆರೆ ರಾಜ್ಯದವರಿಗೆ ಕಷ್ಟ ಕೊಡಲು ಒಪ್ಪುವುದಿಲ್ಲ ಎಂದರು. ಕಾವೇರಿ ಕಣಿವೆಯಲ್ಲಿನ ಸದ್ಯದ ಪರಿಸ್ಥಿತಿ ವಿವರಿಸಿದ ಅವರು, ಕೃಷ್ಣರಾಜ ಸಾಗರದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 124 ಟಿಎಂಸಿ ನೀರು ಇತ್ತು. ಈ ವರ್ಷ, 85ರಿಂದ 86 ಟಿಎಂಸಿ ನೀರು ಇದೆ. ಕರ್ನಾಟಕದ 150 ತಾಲೂಕುಗಳಲ್ಲಿ ಕುಡಿಯಲೂ ನೀರಿಲ್ಲ. ಇಡೀ ರಾಜ್ಯವೇ ಬರಪೀಡಿತವಾಗಿದೆ. ಹೀಗಿರುವಾಗ ನಿಮ್ಮ ರಾಜ್ಯಕ್ಕೆ (ತಮಿಳುನಾಡಿಗೆ) ನೀರು ಬಡಲು ಹೇಗೆ ಸಾಧ್ಯ ಎಂದರು.
ವಿಪರ್ಯಾಸವೆಂದರೆ, ಸದನದಲ್ಲಿ ಹೀಗೆ ಬಿಸಿ ಬಿಸಿ ಚರ್ಚೆಯಾಗುತ್ತಿದ್ದಾಗ ಕರ್ನಾಟಕದ ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಆಗ, ಸುಮಲತಾ ಅವರ ಬೆಂಬಲಕ್ಕೆ ಹಾವೇರಿ ಸಂಸದ ಶಿವಕುಮಾರ್ ಉದಾಸಿ ಬಂದರು. ಕರ್ನಾಟಕ ನೀರು ಬಿಡದಿದ್ದರೆ ನಿಮಗೆ ಹೇಗೆ ನೀರು ಸಿಗುತ್ತಿತ್ತು ಎಂದು ಮರುಪ್ರಶ್ನೆ ಎಸೆಯುವ ಮೂಲಕ ಮಾರನ್ ಅವರನ್ನು ತಕ್ಕಮಟ್ಟಿಗೆ ತರಾಟೆಗೆ ತೆಗೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್