“ಕ್ಯಾಟಿ’ಗಾಗಿ ನಡೆಯುತ್ತಿತ್ತು ಜಗಳ
Team Udayavani, Sep 1, 2019, 5:55 AM IST
ಹೊಸದಿಲ್ಲಿ: ಸುನಂದಾ ಪುಷ್ಕರ್ ನಿಗೂಢ ಸಾವಿಗೆ ಸಂಬಂಧಿಸಿ ಅವರ ಪತಿ, ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಅಥವಾ ಕೊಲೆ ಆರೋಪದಲ್ಲಿ ದೋಷಾರೋಪ ನಿಗದಿಪಡಿಸುವಂತೆ ದಿಲ್ಲಿಯ ಸಿಟಿ ಕೋರ್ಟ್ಗೆ ಪೊಲೀಸರು ಮನವಿ ಮಾಡಿದ್ದಾರೆ. ಹೀಗಾಗಿ, ಪ್ರಸ್ತುತ ಜಾಮೀನಿನ ಮೇಲೆ ಹೊರಗಿರುವ ತರೂರ್ಗೆ ಸಂಕಷ್ಟ ಶುರುವಾಗಿದೆ.
ದೋಷ ನಿಗದಿಗೆ ಸಂಬಂಧಿಸಿ ವಾದ ಮಂಡಿಸಿದ ಹಿರಿಯ ಸರ್ಕಾರಿ ವಕೀಲ ಅತುಲ್ ಶ್ರೀವಾಸ್ತವ, ಈ ಕೋರಿಕೆ ಸಲ್ಲಿಸಿದ್ದಾರೆ. ತರೂರ್-ಸುನಂದಾ ಮನೆಯ ಕೆಲಸದಾಳುವಿನ ಹೇಳಿಕೆಯನ್ನು ಓದಿ ಹೇಳಿದ ಅವರು, “ಕ್ಯಾಟಿ ಎಂಬ ಹೆಸರಿನ ಯುವತಿಗೆ ಸಂಬಂಧಿಸಿ ಮತ್ತು ಬ್ಲ್ಯಾಕ್ಬೆರ್ರಿ ಸಂದೇಶಗಳಿಗೆ ಸಂಬಂಧಿಸಿ ದಂಪತಿ ಆಗಾಗ್ಗೆ ಜಗಳವಾಡುತ್ತಿದ್ದರು. ದುಬಾೖಗೆ ಹೋಗಿದ್ದಾಗಲೂ ತರೂರ್ ಮತ್ತು ಸುನಂದಾ ಪರಸ್ಪರ ಜಗಳವಾಡಿದ್ದರು. ಒಂದು ಹಂತದಲ್ಲಿ ಅಂದು ಸುನಂದಾ ಅವರು ತರೂರ್ಗೆ ಹೊಡೆದಿದ್ದರು’ ಎಂದಿದ್ದಾರೆ. ಅಲ್ಲದೆ, ವಿಷದಿಂದಾಗಿ ಸುನಂದಾ ಸಾವಿಗೀಡಾಗಿದ್ದು, ಅವರ ಶರೀರದ ವಿವಿಧ ಭಾಗಗಳಲ್ಲಿ 15 ಗಾಯದ ಗುರುತುಗಳಿದ್ದವು ಎಂಬುದನ್ನೂ ವಕೀಲರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಗೆ ಸಿದ್ಧತೆ!
ಸಾವಿಗೂ ಮುನ್ನ ಸುನಂದಾ ಅವರು ಐಪಿಎಲ್ ವಿಚಾರಕ್ಕೆ ಸಂಬಂಧಿಸಿ ಸುದ್ದಿಗೋಷ್ಠಿ ಕರೆಯಲು ಸಿದ್ಧತೆ ನಡೆಸಿಕೊಂಡಿದ್ದರು. ಅಲ್ಲದೆ ನಾನು ಅವರನ್ನು (ತರೂರ್) ಸುಮ್ಮನೆ ಬಿಡುವುದಿಲ್ಲ ಎಂದೂ ಹೇಳಿದ್ದರು. ಅಲ್ಲದೆ, ಪಾಕಿಸ್ಥಾನದ ಪತ್ರಕರ್ತೆ ಮೆಹರ್ ತರಾರ್ ಜತೆಗಿನ ತರೂಲ್ ಸಂಬಂಧವೂ ಸುನಂದಾಗೆ ಆಘಾತ ಮೂಡಿಸಿತ್ತು. ಚುನಾವಣೆ ಮುಗಿದೊಡನೆ ತರೂರ್ ನನಗೆ ವಿಚ್ಛೇದನ ನೀಡಿ, ಮೆಹರ್ ತರಾರ್ರನ್ನು ವಿವಾಹವಾಗಲಿದ್ದಾರೆ ಎಂದು ಸುನಂದಾ ತಮ್ಮ ಗೆಳತಿ ನಳಿನಿ ಸಿಂಗ್ ಜತೆ ಹೇಳಿಕೊಂ ಡಿದ್ದರು ಎಂದು ವಕೀಲರು ಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ