ಸುನಂದಾ ಪುಷ್ಕರ್ ಳನ್ನು ಕೊಲೆ ಮಾಡಲಾಗಿತ್ತು: ‘ರಹಸ್ಯ ವರದಿ’
Team Udayavani, Mar 12, 2018, 3:33 PM IST
ಹೊಸದಿಲ್ಲಿ : ಸುನಂದಾ ಪುಷ್ಕರ್ ನಿಗೂಢ ಸಾವಿಗೆ ಈಗ ಹೊಸದೊಂದು ತಿರುವು ಲಭಿಸಿದೆ. ರಹಸ್ಯ ವರದಿಯೊಂದರ ಪ್ರಕಾರ ಸುನಂದಾ ಪುಷ್ಕರ್ ಅವರನ್ನು ಆಕೆಯ ಪತಿ, ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರೇ ಕೊಂದಿರುವುದಾಗಿ ಈ ವರದಿ ಹೇಳುತ್ತದೆ.
ಸುನಂದಾ ಪುಷ್ಕರ್ ಳನ್ನು ಯಾರು ಕೊಂದರೆಂಬುದು ತನಿಖಾಧಿಕಾರಿಗಳಿಗೆ ಆರಂಭದಿಂದಲೇ ಗೊತ್ತಿತ್ತು; ಆದರೆ ಆಕೆಯ ಸಾವು ಇಂದಿನ ವರೆಗೂ ನಿಗೂಢವಾಗಿಯೇ ಉಳಿದಿದೆ ಎಂದು “ಡಿಎನ್ಎ” ಗೆ ಸಿಕ್ಕಿರುವ ಈ ವರದಿಯಲ್ಲಿ ಹೇಳಲಾಗಿದೆ.
ಸುನಂದಾ ಪುಷ್ಕರ್ ಮೃತ ದೇಹ ಪತ್ತೆಯಾದ ಲೀಲಾ ಹೊಟೇಲ್ ಕೋಣೆಯ ತಪಾಸಣೆ ಮತ್ತು ತನಿಖೆ ನಡೆಸಿದ್ದ ದಿಲ್ಲಿಯ ವಸಂತ ವಿಹಾರ್ನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರಿಗೆ ಇದು ಆತ್ಮಹತ್ಯೆ ಪ್ರಕರಣ ಅಲ್ಲ ಎಂಬ ಸ್ಪಷ್ಟವಾದ ಅಭಿಪ್ರಾಯವಿತ್ತು ಎಂದು ಈ ಪ್ರಕರಣದ ಮೊದಲ ವರದಿಯನ್ನು ಸಿದ್ಧಪಡಿಸಿದ್ದ ಆಗಿನ ಉಪ ಪೊಲೀಸ್ ಆಯುಕ್ತ ಬಿ ಎಸ್ ಜೈಸ್ವಾಲ್ ಮೊದಲ ವರದಿಯಲ್ಲಿ ಹೇಳಿರುವುದನ್ನು ಈ ರಹಸ್ಯ ವರದಿಯು ಉಲ್ಲೇಖೀಸಿದೆ.
ಇನ್ಕ್ವೆಸ್ಟ್ ನಡವಳಿಕೆಯಿಂದ ಅಸಂತೃಪ್ತರಾಗಿದ್ದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟರು ಸರೋಜಿನಿ ನಗರ ಠಾಣಾಧಿಕಾರಿಯಿಂದ ಈ ಪ್ರಕರಣವನ್ನು ಕೊಲೆ ಕೇಸಾಗಿ ತನಿಖೆ ನಡೆಸಲು ಸೂಚಿಸಿದ್ದರು.
ಅಟಾಪ್ಸಿ ವರದಿಯಲ್ಲಿ “ಸುನಂದಾ ಪುಷ್ಕರ್ ಸಾವಿಗೆ ವಿಷಪ್ರಾಷನವೇ ಕಾರಣವಾಗಿದೆ; ಸಾಂದರ್ಭಿಕ ಸಾಕ್ಷ್ಯಗಳು ಆಲ್ಪ್ರಝೋಲಾಂ ವಿಷ ಇರುವುದನ್ನು ಸೂಚಿಸುತ್ತವೆ. ಆಕೆಯ ದೇಹದ ಮೇಲಿನ ಗಾಯಗಳು ಮಾರಣಾಂತಿಕವಾಗಿರಲಿಲ್ಲ; ಆವು ದೈಹಿಕ ಜಗಳದ ಪರಿಣಾಮವಾಗಿ ಉಂಟಾಗಿರುವುದು ಸ್ಪಷ್ಟವಿತ್ತು”
”ಆದರೆ ಆಕೆಯ ದೇಹದ ಮೇಲೆ ಕಂಡುಬಂದಿರುವ ಇಂಜೆಕ್ಷನ್ನ ಹತ್ತು ಗಾಯಗಳು ಮಾತ್ರ ಭಿನ್ನ ಸ್ವರೂಪದ್ದಾಗಿದ್ದವು. 12ನೇ ನಂಬರ್ನ ಗಾಯವು ಹಲ್ಲಿನಿಂದ ಕಚ್ಚಿದ ಪರಿಣಾಮವಾಗಿ ಉಂಟಾದ ಗಾಯವಾಗಿತ್ತು. ನಂಬರ್ 1ರಿಂದ 15ರ ವರೆಗಿನ ಗಾಯಗಳು 12 ತಾಸುಗಳಿಂದ ನಾಲ್ಕು ದಿನಗಳ ವರೆಗಿನ ಅವಧಿಯಲ್ಲಿ ಉಂಟಾಗದವುಗಳೆಂದು ತೋರಿ ಬರುತ್ತದೆ” ಎಂದು ಹೇಳಲಾಗಿದೆ.
ಇಂಜೆಕ್ಷನ್ ಗಾಯದ ಗುರುತುಗಳು ತಾಜಾ ಸ್ವರೂಪದ್ದಾಗಿದ್ದವು ಎಂದು ವರದಿ ಹೇಳುತ್ತದೆ. ಸುನಂದಾ ದೇಹದ ಮೇಲೆ ಜಗಳದ ಪರಿಣಾಮವಾಗಿ ಉಂಟಾದ ಅನೇಕ ಗಾಯಗಳು ಕಂಡು ಬರುತ್ತವೆ ಎಂದು ವರದಿ ಹೇಳುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ