ಖಾಪ್‌ಗೆ ಕಡಿವಾಣ: ವಯಸ್ಕರ ಮದುವೆಯಲ್ಲಿ ಹಸ್ತಕ್ಷೇಪ ಸಲ್ಲ ಎಂದ ಸುಪ್ರೀಂ


Team Udayavani, Mar 28, 2018, 9:10 AM IST

Khap-Panchayat-27-3.jpg

ನವದೆಹಲಿ: ಇಬ್ಬರು ವಯಸ್ಕರ ಮದುವೆ ವಿಚಾರದಲ್ಲಿ ಖಾಪ್‌ ಪಂಚಾಯತ್‌ಗಳು ಮೂಗು ತೂರಿಸುವಂತಿಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಇದರಿಂದಾಗಿ, ಖಾಪ್‌ ಪಂಚಾಯತ್‌ನಂಥ ಸ್ವಘೋಷಿತ ನ್ಯಾಯಾಲಯಗಳಿಂದ ಬೆದರಿಕೆ ಎದುರಿಸುತ್ತಿದ್ದ ಅಂತರ್‌ಜಾತಿ, ಅಂತರ್‌ಧರ್ಮೀಯ ಜೋಡಿಗಳು ನಿಟ್ಟುಸಿರು ಬಿಡುವಂತಾಗಿದೆ.

ಇಬ್ಬರು ವಯಸ್ಕರು ಮದುವೆಯಾಗಲು ನಿಶ್ಚಯಿಸಿದರೆ, ಅವರ ಸಂಬಂಧಿಗಳಾಗಲೀ, ಮೂರನೇ ವ್ಯಕ್ತಿಯಾಗಲೀ, ಖಾಪ್‌ ಪಂಚಾಯತ್‌ಗಳಾಗಲೀ ಹಸ್ತಕ್ಷೇಪ ಮಾಡುವುದು, ಬೆದರಿಕೆ ಹಾಕುವುದು ಅಥವಾ ಹಿಂಸಿಸುವುದು ಕಾನೂನು ಬಾಹಿರ. ಇಂಥ ಕೃತ್ಯಗಳು ಸಮಾ ಜದ ಮೇಲೆ ವಿಧ್ವಂಸಕ ಪರಿಣಾಮ ಬೀರಲಿದೆ  ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಹೇಳಿದೆ. ಜತೆಗೆ, ಮರ್ಯಾದಾ ಹತ್ಯೆಗಳು ಮಾನವನ ಘನತೆಯ ಮೇಲಿನ ಹಲ್ಲೆ. ಖಾಪ್‌ ಗಳು ಜೂಲಿಯಸ್‌ ಸೀಸರ್‌ ನ ಪೂರ್ವಜರೇನೂ ಅಲ್ಲವಲ್ಲ ಎಂದೂ ಪೀಠ ಖಾರವಾಗಿ ನುಡಿದಿದೆ. ಅಲ್ಲದೆ, ಇಂಥ ಹಸ್ತಕ್ಷೇಪಗಳನ್ನು ತಡೆಯಲು ಮಾರ್ಗಸೂಚಿಗಳನ್ನೂ ನ್ಯಾಯಪೀಠ ರಚಿಸಿದ್ದು, ಸೂಕ್ತ ಕಾನೂನು ಜಾರಿ ಆಗುವವರೆಗೆ ಈ ಮಾರ್ಗಸೂಚಿ ಚಾಲ್ತಿಯಲ್ಲಿರುತ್ತವೆ ಎಂದಿದೆ. ಇದೇ ವೇಳೆ, ‘ಖಾಪ್‌ ಪಂಚಾಯತ್‌’ಗಳನ್ನು ಈ ಹೆಸರಿಂದ ಕರೆಯುವುದಿಲ್ಲ ಎಂದಿರುವ ಪೀಠ, ಇವುಗಳನ್ನು ಕೆಲವು ವ್ಯಕ್ತಿಗಳ ಗುಂಪು ಎಂದು ಪರಿಗಣಿಸುವುದಾಗಿ ಹೇಳಿದೆ. ಜತೆಗೆ, ಇಂಥ ವ್ಯಕ್ತಿಗಳು ಗುಂಪುಗೂಡುವುದನ್ನು ತಡೆಯಲು ಸೆಕ್ಷನ್‌ 144 ಬಳಸುವಂತೆಯೂ ಸೂಚಿಸಿದೆ.

ಕೇಂದ್ರದಿಂದಲೂ ಬೆಂಬಲ: ಮರ್ಯಾದಾ ಹತ್ಯೆಗಳಿಂದ ದಂಪತಿಗಳಿಗೆ ರಕ್ಷಣೆ ಕೋರಿ ಶಕ್ತಿ ವಾಹಿನಿ ಎಂಬ NGO 2010ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ವಿಚಾರಣೆ ವೇಳೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸರ್ಕಾರ, ಇಂಥ ದಂಪತಿಗಳಿಗೆ ಆಯಾ ರಾಜ್ಯ ಸರ್ಕಾರಗಳು ರಕ್ಷಣೆ ಒದಗಿಸಬೇಕು. ಅಲ್ಲದೆ, ಬೆದರಿಕೆ ಎದುರಿಸುತ್ತಿರುವಂಥ ವ್ಯಕ್ತಿಗಳು ಆ ಕುರಿತು ದೂರು ನೀಡಬೇಕು ಎಂದು ಹೇಳಿತ್ತು. 

ಏನಿದು ಖಾಪ್‌ ಪಂಚಾಯತ್‌? ಒಂದು ಸಮುದಾಯ ಅಥವಾ ಜಾತಿಯನ್ನು ಪ್ರತಿನಿಧಿಸುವ ಸಮೂಹ ಇದಾಗಿದ್ದು, ಉತ್ತರ ಭಾರತದ ಬಹುತೇಕ ಗ್ರಾಮಗಳಲ್ಲಿ ಇವು ಅಸ್ತಿತ್ವದಲ್ಲಿವೆ. ಇವುಗಳು ಅರೆ – ನ್ಯಾಯಾಂಗ ಸಂಸ್ಥೆಗಳಂತೆ ವರ್ತಿಸುವುದಲ್ಲದೆ, ಹಲವು ಬಾರಿ ಪ್ರಾಚೀನ ಸಂಪ್ರದಾಯದ ಹೆಸರಲ್ಲಿ ಕಠಿಣ ಶಿಕ್ಷೆಗಳನ್ನೂ ಘೋಷಿಸಿದ್ದಿದೆ. ಹರ್ಯಾಣ, ಉತ್ತರಪ್ರದೇಶ, ರಾಜಸ್ಥಾನದಂಥ ರಾಜ್ಯಗಳಲ್ಲಿ ಖಾಪ್‌ ಪಂಚಾಯತ್‌ಗಳ ಪ್ರಭಾವ ಹೆಚ್ಚಿದ್ದು, ಪ್ರೇಮಿಗಳು, ಆಧುನಿಕ ಮನಸ್ಥಿತಿ ಹೊಂದಿರುವ ಯುವಜನರು, ಮಹಿಳೆಯರು ಇವುಗಳಿಂದ ಶಿಕ್ಷೆಗೆ ಒಳಗಾದ ಅನೇಕ ಪ್ರಕರಣಗಳು ವರದಿಯಾಗಿವೆ.

ಒಂದೇ ಗೋತ್ರದವರ ವಿವಾಹಕ್ಕೆ ಅವಕಾಶ ಇಲ್ಲ
ಸುಪ್ರೀಂಕೋರ್ಟ್‌ ತೀರ್ಪಿಗೆ ಖಾಪ್‌ ಪಂಚಾಯತ್‌ಗಳ ಮುಖ್ಯಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಒಂದೇ ಗೋತ್ರ ಅಥವಾ ಒಂದೇ ಗ್ರಾಮದವರ ನಡುವೆ ವಿವಾಹಕ್ಕೆ ಅವಕಾಶ ನೀಡುವುದಿಲ್ಲ. ಏಕೆಂದರೆ, ಇದು ಹಲವು ತಲೆಮಾರುಗಳಿಂದಲೂ ನಾವು ಆಚರಿಸಿಕೊಂಡು ಬಂದಿರುವಂಥ ಸಂಪ್ರದಾಯವಾಗಿದೆ ಎಂದು ಖಾಪ್‌ ನಾಯಕರು ಹೇಳಿದ್ದಾರೆ. ಜತೆಗೆ, ಪಂಜಾಯತ್‌ ಸಭೆ ಸೇರಿ ಈ ಕುರಿತು ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದೂ ಹೇಳಿದ್ದಾರೆ.

ಕೆಲವು ಖಾಪ್‌ ತೀರ್ಪುಗಳು
– 2007 ರಲ್ಲಿ ಸಾಮಾಜಿಕ ಪದ್ಧತಿಗೆ ವಿರುದ್ಧವಾಗಿ ವಿವಾಹವಾದ ಜೋಡಿಯನ್ನು ಖಾಪ್‌ ಪಂಚಾಯತ್‌ ಆದೇಶದಂತೆ ಕೊಲೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹರ್ಯಾಣ ಹೈಕೋರ್ಟ್‌ ಐವರು ಆರೋಪಿಗಳಿಗೆ ಗಲ್ಲುಶಿಕ್ಷೆ ಮತ್ತು ಒಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

– 2015ರ ಏಪ್ರಿಲ್‌ನಲ್ಲಿ ರಾಜಸ್ಥಾನದ ಮಹಿಳೆಯೊಬ್ಬಳ ಪತಿಯು ಇನ್ನೊಬ್ಬ ವ್ಯಕ್ತಿಯ ಪತ್ನಿಯೊಂದಿಗೆ ಓಡಿಹೋಗಿದ್ದ ಹಿನ್ನೆಲೆಯಲ್ಲಿ, ಆ ವ್ಯಕ್ತಿಯೊಂದಿಗೆ ಸಂಸಾರ ನಡೆಸುವಂತೆ ಮಹಿಳೆಗೆ ಖಾಪ್‌ ಪಂಚಾಯತ್‌ ಸೂಚಿಸಿತ್ತು.

– 2014ರಲ್ಲಿ ಉತ್ತರಪ್ರದೇಶದ ಖಾಪ್‌ ಪಂಚಾಯತ್‌, ಯುವತಿಯರು ಜೀನ್ಸ್‌ ಧರಿಸುವುದಕ್ಕೆ ಹಾಗೂ ಮೊಬೈಲ್‌ ಫೋನ್‌ ಬಳಸುವುದಕ್ಕೆ ನಿಷೇಧ ಹೇರಿತ್ತು.

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.