ನಿರಂತರ ಆರೋಪಗಳು ಕ್ರೌರ್ಯಕ್ಕೆ ಸಮ: ಸುಪ್ರೀಂ
Team Udayavani, Sep 15, 2021, 7:10 AM IST
ಹೊಸದಿಲ್ಲಿ: ಪತಿ ಅಥವಾ ಪತ್ನಿಯ ವಿರುದ್ಧ ನಿರಂತರ ಆರೋಪಗಳು, ಅರ್ಜಿಗಳು ಹಾಗೂ ಪತಿ/ಪತ್ನಿಯನ್ನು ಉದ್ಯೋಗದಿಂದ ಕಿತ್ತುಹಾಕುವ ಉದ್ದೇಶದಿಂದ ನೀಡುವ ದೂರುಗಳನ್ನು ಹಿಂದೂ ವಿವಾಹ ಕಾಯ್ದೆಯನ್ವಯ ಕ್ರೌರ್ಯವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣ ಹೇಳಿ ಅಂಥವರಿಗೆ ವಿಚ್ಛೇದನ ನೀಡಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ವ್ಯಕ್ತಿಯೊಬ್ಬರು ತಮ್ಮ ಪತ್ನಿಯಿಂದ ವಿಚ್ಛೇದನ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಪೀಠ ಈ ರೀತಿ ಹೇಳಿದೆ. ಆ ವ್ಯಕ್ತಿ 20 ವರ್ಷಗಳಿಂದಲೂ ಕೋರ್ಟ್ಗೆ ವಿಚ್ಛೇದನಕ್ಕಾಗಿ ಅಲೆದಾಡುತ್ತಿದ್ದಾರೆ. ಅವರ ವಿವಾಹವು ಟೇಕ್ ಆಫ್ ಆಗುವ ಮುನ್ನವೇ ಪತನಗೊಂಡಿದೆ. ಮದುವೆಯ ದಿನವೇ ಪತ್ನಿ ಹೊರಟು ಹೋಗಿದ್ದಾಳೆ. ಅನಂತರ ಆಕೆ ಹಿಂದಿರುಗಿಲ್ಲ. ಅಲ್ಲದೇ ಪದೇ ಪದೆ ಸಂಗಾತಿಯ ವಿರುದ್ಧ ದೂರು ಸಲ್ಲಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮ. ಹೀಗಿರುವಾಗ, ಹೊಂದಾಣಿಕೆ ಏರ್ಪಡಲು ಸಾಧ್ಯವೇ ಇಲ್ಲ ಎಂಬ ಸಂದರ್ಭದಲ್ಲಿ ಆ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಗೊಳಿಸುವುದು ಉತ್ತಮ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ