ಆಧಾರ್ ‘ಐಚ್ಛಿಕ’ ಎಂಬ ಆದೇಶ ಊರ್ಜಿತ : ಸುಪ್ರೀಂ
Team Udayavani, Apr 28, 2017, 1:42 AM IST
ಹೊಸದಿಲ್ಲಿ: ಸರಕಾರಿ ಯೋಜನೆಗಳಿಗೆ ಆಧಾರ್ ಬಳಕೆ ಐಚ್ಛಿಕ ಎಂದು ಈ ಹಿಂದೆ ತಾನು ನೀಡಿರುವ ಆದೇಶ ಇನ್ನೂ ಊರ್ಜಿತದಲ್ಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಪ್ಯಾನ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡಬೇಕು ಎಂದು ಕೇಂದ್ರದ ಆದೇಶ ಪ್ರಶ್ನಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅರ್ಜಿದಾರರ ಪರ ವಾದಿಸಿದ ಹಿರಿಯ ನ್ಯಾಯವಾದಿ ಶ್ಯಾಮ್ ದಿವಾನ್ ಕಾಯ್ದೆ ಅಸಾಂವಿಧಾನಿಕವಾದದ್ದು ಎಂದರು. ಅದಕ್ಕೆ ಉತ್ತರಿಸಿದ ಕೇಂದ್ರದ ಪರ ವಕೀಲರು ತೆರಿಗೆ ವಂಚನೆ ತಡೆಯುವ ನಿಟ್ಟಿನಲ್ಲಿ ಇಂಥ ಕ್ರಮ ಕೈಗೊಳ್ಳಲಾಗಿದೆ ಎಂದರು.