ಫುಟ್ ಬಾಲ್ ಅಮಾನತು ತೆರವಿಗೆ ಸುಪ್ರೀಂ ಕೋರ್ಟ್ ಸೂಚನೆ
Team Udayavani, Aug 17, 2022, 10:29 PM IST
ಹೊಸದಿಲ್ಲಿ: ಭಾರತೀಯ ಫುಟ್ ಬಾಲ್ ಫೆಡರೇಷನ್ಗೆ ಫಿಫಾ ವಿಧಿಸಿದ ಅಮಾನತು ತೆರವುಗೊಳಿಸಲು ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ. ಇದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಆ. 22ಕ್ಕೆ ಮುಂದೂಡಿದೆ.
ಕೇಂದ್ರ ಸರಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿಚಾರಣೆಗೆ ಹಾಜರಾಗಿದ್ದರು. ಇವರ ಕೋರಿಕೆಯ ಮೇರೆಗೆ ವನಿತೆಯರ ಅಂಡರ್-17 ವಿಶ್ವಕಪ್ ಆಯೋಜಿಸಲು ಫಿಫಾ ವಿಧಿಸಿರುವ ಅಮಾನತು ತೆರವುಗೊಳಿಸಲು ಸಕ್ರಿಯ ಪಾತ್ರ ವಹಿಸುವಂತೆ ಕೇಂದ್ರಕ್ಕೆ ಸೂಚಿಸಿದರು.
ವನಿತೆಯರ ಅಂಡರ್-17 ವಿಶ್ವಕಪ್ ಪಂದ್ಯಾವಳಿಯಿಂದ ಭಾರತೀಯ ಫುಟ್ ಬಾಲ್ಗೆ ಪ್ರಯೋಜನವಾಗಲಿದೆ ಎಂದು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ.
ಅಮಾನತು ತೆರವು ಮತ್ತು ವಿವಾದ ಪರಿಹರಿಸಲು ಏನು ಕ್ರಮ ತೆಗೆದುಕೊಳ್ಳಬೇಕು ಎಂಬ ಕುರಿತು ಕೇಂದ್ರವು ಮಂಗಳವಾರವೇ ಫಿಫಾ ಜತೆ ಎರಡು ಸುತ್ತಿನ ಮಾತುಕತೆ ನಡೆಸಿದೆ ಎಂಬುದಾಗಿ ತುಷಾರ್ ಮೆಹ್ತಾ ತಿಳಿಸಿದರು. ಭಾರತೀಯ ಫುಟ್ ಬಾಲ್ ಫೆಡರೇಶನ್ನಲ್ಲಿ ತೃತೀಯ ವ್ಯಕ್ತಿಯ ಮಿತಿಮೀರಿದ ಹಸ್ತಕ್ಷೇಪ ಕಂಡುಬಂದುದರಿಂದ ಫಿಫಾ ಈ ಕ್ರಮಕ್ಕೆ ಮುಂದಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ