ನಿರ್ಭಯಾ ಅತ್ಯಾಚಾರಿಗಳ ಪ್ರತಿಕ್ರಿಯೆಗೆ ಸೂಚನೆ
Team Udayavani, Feb 7, 2020, 2:15 AM IST
ಹೊಸದಿಲ್ಲಿ: ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಹೊಸದಾಗಿ ಡೆತ್ ವಾರಂಟ್ ನೀಡುವಂತೆ ಕೋರಿ, ತಿಹಾರ್ ಜೈಲಾಧಿಕಾರಿಗಳು ಸಲ್ಲಿಸಿರುವ ಮೇಲ್ಮನವಿಗೆ ಶುಕ್ರವಾರದೊಳಗೆ (ಫೆ. 7) ಉತ್ತರ ನೀಡುವಂತೆ ಅಪರಾ ಧಿಗಳಿಗೆ ದಿಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.
ತಿಹಾರ್ ಜೈಲಾಧಿಕಾರಿಗಳ ಅರ್ಜಿಯಲ್ಲಿ, ‘ಗಲ್ಲು ಶಿಕ್ಷೆಯಿಂದ ಪಾರಾಗಲು ಅಪರಾಧಿಗಳು ತಮಗಿರುವ ಎಲ್ಲ ಕಾನೂನು ಅವಕಾಶಗಳನ್ನು ಇನ್ನು ಏಳು ದಿನಗಳೊಳಗಾಗಿ ಬಳಸಿಕೊಳ್ಳು ವಂತೆ ಹೈಕೋರ್ಟ್ ಈಗಾಗಲೇ ತೀರ್ಪು ನೀಡಿದೆ.
ಮೂವರು ಅಪರಾಧಿಗಳ ಕ್ಷಮಾದಾನ ಅರ್ಜಿಗಳನ್ನು ರಾಷ್ಟ್ರಪತಿಯವರು ತಿರಸ್ಕರಿಸಿದ್ದಾರೆ. ಅಪರಾಧಿಗಳಲ್ಲೊಬ್ಬನಾದ ಪವನ್, ಇನ್ನೂ ಗಲ್ಲು ಶಿಕ್ಷೆಯ ವಿರುದ್ಧ ಕ್ಯುರೇಟಿವ್ ಅರ್ಜಿ ಸಲ್ಲಿಸಿಲ್ಲ. ಹಾಗಾಗಿ, ಅವರ ಗಲ್ಲು ಶಿಕ್ಷೆಗೆ ಹೊಸ ದಿನಾಂಕ, ವೇಳೆ ನಿಗದಿಪಡಿಸಿ ಹೊಸ ಡೆತ್ ವಾರಂಟ್ ಹೊರಡಿಸಬೇಕು’ ಎಂದು ಕೋರಲಾಗಿದೆ.