ಸುಪ್ರೀಂ ಬಿಕ್ಕಟ್ಟು : ಸಂಧಾನ ?
Team Udayavani, Jan 15, 2018, 6:00 AM IST
ಹೊಸದಿಲ್ಲಿ: ಸುಪ್ರೀಂ ಕೋರ್ಟ್ನಲ್ಲಿ ಸದ್ಯ ಉಂಟಾಗಿರುವ ಬಿಕ್ಕಟ್ಟು ಸೋಮವಾರವೇ ಮುಕ್ತಾಯವಾಗುವ ಸಾಧ್ಯತೆ ಇದೆ. ಸೋಮವಾರ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ನ ಪೂರ್ಣಪೀಠ ಸಭೆ ನಡೆಸಲಿದ್ದು, ಇಲ್ಲಿ ಎಲ್ಲ ಜಡ್ಜ್ಗಳು ಭಾಗವಹಿಸಲಿದ್ದಾರೆ.
ನ್ಯಾಯವಾದಿಗಳ ಪರಮೋಚ್ಚ ಸಂಸ್ಥೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ)ದ ಏಳು ಮಂದಿ ಸಮಿತಿ ಸದಸ್ಯರು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾರನ್ನು ರವಿವಾರ ಸಂಜೆ 50 ನಿಮಿಷ ಕಾಲ ಭೇಟಿಯಾದ ಬಳಿಕ ಈ ಅಂಶ ವ್ಯಕ್ತವಾಗಿದೆ.
“ಈ ಸಭೆಯಲ್ಲಿ ಮುಖ್ಯ ನ್ಯಾಯಮೂರ್ತಿ ಪರವಾಗಿಯೇ ಹೆಚ್ಚಿನ ಅಭಿಪ್ರಾಯಗಳು ವ್ಯಕ್ತ ವಾಗಬಹುದು. ಹೀಗಾಗಿ ನಾಲ್ವರು ನ್ಯಾಯಮೂರ್ತಿಗಳು ಪ್ರಸ್ತಾವ ಮಾಡಿರುವ ಆಕ್ಷೇಪಗಳನ್ನು ಬಗೆಹರಿಸಲು ನ್ಯಾಯಾಲಯದ ಪೂರ್ಣ ಪೀಠ ಸಭೆ ಸೇರಬೇಕು ಎಂದು ಪ್ರತಿಪಾದಿಸಿಲ್ಲ’ ಎಂದು ಬಿಸಿಐ ಮೂಲಗಳು ತಿಳಿಸಿದ್ದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದೇ ವೇಳೆ ನ್ಯಾ| ಜೆ. ಚಲಮೇಶ್ವರ್ ಅವರನ್ನು ಡಿ. ರಾಜಾ ಭೇಟಿಯಾಗಿದ್ದು ರಾಜಕೀಯ ಪ್ರೇರಿತ ಎಂದು ಬಿಸಿಐ ಸದಸ್ಯ ಸಂತೋಷ್ಮಿಶ್ರಾ ಅವರು ಟೀಕಿಸಿದ್ದಾರೆ.
ಹತ್ತು ದಿನಗಳ ಅವಧಿ: ರವಿವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ದಿಲ್ಲಿ ಜಿಲ್ಲಾ ಬಾರ್ ಅಸೋಸಿಯೇಶನ್, ಹತ್ತು ದಿನಗಳ ಒಳಗಾಗಿ ಬಿಕ್ಕಟ್ಟು ಬಗೆಹರಿಯಬೇಕು. ಇಲ್ಲದಿದ್ದಲ್ಲಿ ಬೀದಿಗೆ ಇಳಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ದೇಶಾದ್ಯಂತ ಇರುವ ಬಾರ್ ಕೌನ್ಸಿಲ್ಗಳ ಜತೆ ಬಿಕ್ಕಟ್ಟಿನ ಬಗ್ಗೆ ಸಮಾಲೋಚನೆ ನಡೆಸುವುದಾಗಿಯೂ ಅದು ಹೇಳಿಕೊಂಡಿದೆ.
ಹಿಂದಿನದ್ದೇ ಪೀಠ: ಈ ನಡುವೆ ಆಧಾರ್, ಶಬರಿಮಲೆಗೆ ಮಹಿಳೆಯರ ಪ್ರವೇಶ, ಸಲಿಂಗಕಾಮ ವಿಚಾರ ಸೇರಿದಂತೆ 8 ಪ್ರಮುಖ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠ 17ರಿಂದ ಮುಂದುವರಿಸಲಿದೆ. ಈ ಹಿಂದೆ ಇದ್ದ ನ್ಯಾಯಪೀಠವೇ ಅವುಗಳ ವಿಚಾರಣೆ ಮುಂದುವರಿಸಲಿದೆ.
ಮುಖ್ಯ ನ್ಯಾಯಮೂರ್ತಿ ಭೇಟಿ ಮಾಡಿದ ಎಸ್ಸಿಬಿಎ: ಸುಪ್ರೀಂ ಕೋರ್ಟ್ ನ್ಯಾಯವಾದಿಗಳ ಸಂಘ (ಎಸ್ಸಿಬಿಎ) ರವಿವಾರ ಸಂಜೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಭೇಟಿ ಮಾಡಿ ಸದ್ಯದ ಬಿಕ್ಕಟ್ಟಿನ ಬಗ್ಗೆ ಮಾತುಕತೆ ನಡೆಸಿದೆ. ಶನಿವಾರ ಸಭೆ ನಡೆಸಿ ಕೈಗೊಂಡಿದ್ದ ನಿರ್ಣಯಗಳ ಪ್ರತಿಯನ್ನು ಅವರಿಗೆ ನೀಡಿದೆ. ಎಸ್ಸಿಬಿಎ ನೀಡಿರುವ ವರದಿಯನ್ನು ಪರಿಶೀಲಿಸುವ ಭರವಸೆಯನ್ನು ಮುಖ್ಯ ನ್ಯಾಯಮೂರ್ತಿ ನೀಡಿದ್ದಾರೆ ಎಂದು ಸಂಘದ ಅಧ್ಯಕ್ಷ ವಿಕಾಸ್ ಸಿಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು