ಸೂರತ್ ರೇಪ್ ಕೇಸ್ : ಆಸಾರಾಮ್ ಪುತ್ರ ನಾರಾಯಣ ಸಾಯಿಗೆ ಜೀವಾವಧಿ ಜೈಲು ಶಿಕ್ಷೆ
Team Udayavani, Apr 30, 2019, 7:10 PM IST
ಸೂರತ್ : ಅತ್ಯಾಚಾರದ ಅಪರಾಧಕ್ಕಾಗಿ ಜೈಲುಪಾಲಾಗಿರುವ ಸ್ವಘೋಷಿತ ದೇವಮಾನ ಆಸಾರಾಮ್ ಬಾಪು ನ ಮಗ ನಾರಾಯಣ ಸಾಯಿ, ತನ್ನ ಇಬ್ಬರು ಮಹಿಳಾ ಅನುಯಾಯಿ ಸಹೋದರಿಯರ ಮೇಲೆ ಅತ್ಯಾಚಾರ, ಅನೈಸರ್ಗಿಕ ಅಪರಾಧ, ಹಲ್ಲೆ, ಕ್ರಿಮಿನಲ್ ಬೆದರಿಕೆ ಮತ್ತು ಕ್ರಿಮಿನಲ್ ಸಂಚಿನ ಅಪರಾಧ ಎಸಗಿರುವುದಕ್ಕಾಗಿ ಆತನಿಗೆ ಇಲ್ಲಿನ ಸೆಶನ್ಸ್ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ.
ಐಪಿಸಿ 376, 377, 323, 506-2 ಮತ್ತು 120-ಬಿ ಸೆಕ್ಷನ್ ಗಳಡಿ ಅಪರಾಧಿ ಎಂದು ಪರಿಗಣಿಸಲ್ಪಟ್ಟಿರುವ ನಾರಾಯಣ ಸಾಯಿಗೆ ಕೋರ್ಟ್ ಒಂದು ಲಕ್ಷ ರೂ. ದಂಡವನ್ನೂ ವಿಧಿಸಿದೆ.
ಅತ್ಯಾಚಾರ ಸಂತ್ರಸ್ತ ಮಹಿಳಾ ಅನುಯಾಯಿ ಸಹೋದರಿಯರಿಬ್ಬರು ದಾಖಲಿಸಿದ್ದ ಕೇಸಿನಡಿ ಆರೋಪಿ ನಾರಾಯಣ ಸಾಯಿ 2013ರ ಡಿಸೆಂಬರ್ನಿಂದಲೂ ಜೈಲಿನಲ್ಲಿದ್ದಾನೆ.